ಶೃಂಗೇರಿ : ರಾಜ್ಯದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪ ಪರಿಹಾರಕ್ಕಾಗಿ ಶ್ರೀ ಶಾರದಾ ಪೀಠದ ಶಾಖೆಗಳ ಮೂಲಕ ಪ್ರವಾಹ ಸಂತ್ರಸ್ತರಿಗೆ ರೂ.25 ಲಕ್ಷಕ್ಕೂ ಅಧಿಕ ಹಣವನ್ನು ವಿನಿಯೋಗಿಸಿದೆ. ಜಗದ್ಗುರುಗಳ ಆದೇಶದಂತೆ ಪ್ರವಾಹ ಪೀಡಿತ ಜಿಲ್ಲೆಯ ಸಂತ್ರಸ್ತರಿಗೆ ಮನೆ ಕಳೆದುಕೊಂಡವರಿಗೆ ಊಟ, ವಸತಿ ಕಲ್ಪಿಸಲಾಗಿದೆ. ಮುಂದೆಯೂ ವಸತಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಸಿಮೆಂಟ್,ಮನೆಗೆ ಅಗತ್ಯವಾಗಿರುವ ಚಾವಣಿ ಪರಿಕರ,ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತದೆ. ಸಂತ್ರಸ್ತರು ಸಮೀಪದ ಶ್ರೀಮಠದ ಶಾಖೆಯನ್ನು ಸಂಪರ್ಕಿಸಿ ಅಗತ್ಯ ಸೌಲಭ್ಯ ಪಡೆಯುವಂತೆ ಶ್ರೀಮಠದ ಆಡಳಿತಾಧಿಕಾರಿ ವಿ.ಆರ್.ಗೌರಿಶಂಕರ್ ತಿಳಿಸಿದ್ದಾರೆ.
ಶ್ರೀ ಶಾರದಾ ಪೀಠದಿಂದ 25 ಲಕ್ಷ ರೂ. ಸಹಾಯ
ಶೃಂಗೇರಿ ಜಗದ್ಗುರುಗಳ ಆದೇಶದಂತೆ ಪ್ರವಾಹ ಪೀಡಿತ ಜಿಲ್ಲೆಯ ಸಂತ್ರಸ್ತರಿಗೆ ಮನೆ ಕಳೆದುಕೊಂಡವರಿಗೆ ಊಟ, ವಸತಿ ಕಲ್ಪಿಸಲಾಗಿದೆ. ಮುಂದೆಯೂ ವಸತಿ ಕಳೆದುಕೊಂಡಿರುವ ಸಂತ್ರಸ್ತರಿಗೆ ಸಿಮೆಂಟ್,ಮನೆಗೆ ಅಗತ್ಯವಾಗಿರುವ ಚಾವಣಿ ಪರಿಕರ,ಶೌಚಾಲಯ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತದೆ.
Vijaya Karnataka 23 Aug 2019, 5:13 pm