ಆ್ಯಪ್ನಗರ

21 ದೇಶಗಳ ಕೃತಕ ನೋಟ್‌ನಿಂದ ಗಣೇಶನ ಕಲಾಕೃತಿ

ಸಾಯಿರಾಧಾ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ 21 ದೇಶಗಳ ಕೃತಕ ನೋಟ್‌ ಬಳಸಿ ಮಣಿಪಾಲ್‌ ಸ್ಯಾಂಡ್‌ ಹಾರ್ಟ್‌ ಕಲಾವಿದರರ ಕೈಚಳಕದಲ್ಲಿ ಮೂಡಿಬಂದಿರುವ ಗಣೇಶ ನೋಡುಗರ ಜನಾಕರ್ಷಣೆಯ ಕೇಂದ್ರವಾಗಿದೆ.

Vijaya Karnataka 31 Aug 2019, 4:08 pm
ಉಡುಪಿ:ಗಣೇಶ ಹಬ್ಬಕ್ಕೆ ಜಿಲ್ಲೆಯಲ್ಲಿಭರದ ಸಿದ್ಧತೆ ನಡೆಯುತ್ತಿದ್ದು, ಕಲಾವಿದರ ಕೈಚಳಕದಿಂದ ವೈಶಿಷ್ಟ್ಯತೆಗಳಿಂದ ಕೂಡಿದ ಗಣಪತಿ ರೂಪುಗೊಂಡಿವೆ. ಸಾಯಿರಾಧಾ ಸಮೂಹ ಸಂಸ್ಥೆಗಳ ಸಹಯೋಗದೊಂದಿಗೆ 21 ದೇಶಗಳ ಕೃತಕ ನೋಟ್‌ ಬಳಸಿ ಮಣಿಪಾಲ್‌ ಸ್ಯಾಂಡ್‌ ಹಾರ್ಟ್‌ ಕಲಾವಿದರರ ಕೈಚಳಕದಲ್ಲಿ ಮೂಡಿಬಂದಿರುವ ಗಣೇಶ ನೋಡುಗರ ಜನಾಕರ್ಷಣೆಯ ಕೇಂದ್ರವಾಗಿದೆ.
Vijaya Karnataka Web currency ganesha


ಗಣೇಶ ಚತುರ್ಥಿ ಅಂಗವಾಗಿ ಕಲಾವಿದರಾದ ಶ್ರೀನಾಥ್‌ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೇಬೆಟ್ಟು ಕೃತಕ ನೋಟುಗಳನ್ನು ಬಳಸಿ 12 ಅಡಿ ಎತ್ತರದ ಗಣೇಶನ ಕಲಾಕೃತಿ ರಚಿಸಿದ್ದರು. ಈ ಕಲಾಕೃತಿ ಮುಂದೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು ನಿಂತು ಪೋಟೋ ಕ್ಲಿಕ್ಕಿಸಿಕೊಂಡರು.

ನಗರದ ವಿಎಸ್‌ಟಿ ರಸ್ತೆಯಲ್ಲಿರುವ ಸಾಯಿರಾಧಾ ಟಿವಿಎಸ್‌ ಶೋರೂಂನಲ್ಲಿಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದ ಈ ಕಲಾಕೃತಿಯನ್ನು ಸಾಯಿರಾಧಾ ಸಮೂಹ ಸಂಸ್ಥೆಯ ಎಂಡಿ ಮನೋಹರ್‌ ಎಸ್‌. ಶೆಟ್ಟಿ ಶನಿವಾರ ಉದ್ಘಾಟಿಸಿ ಮಾತನಾಡಿ, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿಕಳೆದ 5 ವರ್ಷಗಳಿಂದ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ನೋಟ್‌ನ ಕಲಾಕೃತಿಯನ್ನು ರಚಿಸಿದ್ದು, ಸೆ.9ರವರೆಗೆ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಚತುರ್ಥಿ ಪ್ರತಿಯೊಬ್ಬರಿಗೂ ಒಳಿತು ಮಾಡಲಿ ಎಂದು ಶುಭ ಹಾರೈಸಿದರು.

ಮಣಿಪಾಲ ಸ್ಯಾಂಡ್‌ ಹಾರ್ಟ್‌ನ ಕಲಾವಿದ ಶ್ರೀನಾಥ್‌ ಮಣಿಪಾಲ ಮಾತನಾಡಿ, 21 ದೇಶಗಳ ಪೈಕಿ ಭಾರತದ ಹಳೆಯ ಹಾಗೂ ಚಾಲ್ತಿಯಲ್ಲಿರುವ ನೋಟ್‌ಗಳನ್ನೇ ಜಾಸ್ತಿ ಬಳಸಿಕೊಂಡಿದ್ದೇವೆ. ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಅಫ್ಘಾನಿಸ್ತಾನ್‌, ಭೂತಾನ್‌, ಬಹರೈನ್‌, ಯುಎಇ, ಅಮೆರಿಕ, ಇಸ್ರೇಲ್‌ ಸಹಿತ ಇತರೆ ದೇಶಗಳ ಕೃತಕ ನೋಟ್‌ಗಳನ್ನು ಕಲಾತ್ಮಕವಾಗಿ ಪೋಣಿಸಲಾಗಿದೆ ಎಂದರು.

ಸಾಯಿರಾಧಾ ಸಂಸ್ಥೆಯ ಸಿದ್ಧಾರ್ಥ್‌ ಎಂ. ಶೆಟ್ಟಿ, ನಗರಸಭೆ ಸದಸ್ಯರಾದ ಟಿ.ಜಿ. ಹೆಗ್ಡೆ, ಮಾನಸ ಪೈ, ಗಿರೀಶ್‌ ಅಂಚನ್‌, ಮಂಜುನಾಥ್‌ ಮಣಿಪಾಲ, ಜನತಾ ಪಬ್ಲಿಸಿಟಿಯ ಮಾಲೀಕ ಹರ್ಷರಾಜ್‌ ಶೆಟ್ಟಿ, ಟಿವಿಎಸ್‌ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ವೃಜನಾಥ್‌ ಆಚಾರ್ಯ, ಎಚ್‌ಆರ್‌ ದಿವಾಕರ್‌ ರಾವ್‌ ಉಪಸ್ಥಿತರಿದ್ದರು. ಸಂಸ್ಥೆಯ ಡಿವಿಜನಲ್‌ ಮ್ಯಾನೇಜರ್‌ ಪ್ರಕಾಶ್‌ ತಂತ್ರಿ ಕಾರ‍್ಯಕ್ರಮ ನಿರೂಪಿಸಿದರು.

ಈ ಮೊದಲು ಕಲಾವಿದರು ಪೇಪರ್‌ ಕಪ್‌, ಹ್ಯಾಂಡ್‌ಮೇಡ್‌ ಪೇಪರ್‌, ಗುಡಿ ಕೈಗಾರಿಕೆಯ ವಸ್ತುಗಳು, ಬಿಸ್ಕೆಟ್‌ ಗಣೇಶ, ಧಾನ್ಯಗಳನ್ನು ಬಳಸಿ ಗಣೇಶನ ಕಲಾಕೃತಿಗಳನ್ನು ರಚಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ