ಆ್ಯಪ್ನಗರ

ಉಡುಪಿ ಸ್ವರ್ಣ ಗೋಪುರ ಸಮರ್ಪಣೆ

ಜೂ.1ರಂದು ಉಡುಪಿಯಲ್ಲಿ ಸ್ವರ್ಣ ಗೋಪುರ ಸಮರ್ಪಣೆ ವೈಭವದ ಮೆರವಣಿಗೆ.

Vijaya Karnataka 18 May 2019, 12:00 am
ಉಡುಪಿ: ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಸಂಕಲ್ಪದಂತೆ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಸ್ವರ್ಣ ಕವಚ ಸಮರ್ಪಣೆ ಮೆರವಣಿಗೆ ಜೂ. 1ರಂದು ಪೌರಾಣಿಕ ವೇಷ ವೈಭವದೊಂದಿಗೆ ನಡೆಯಲಿದೆ.
Vijaya Karnataka Web krishna


ಮಧ್ಯಾಹ್ನ 3 ಗಂಟೆಗೆ ಜೋಡುಕಟ್ಟೆಯಿಂದ ಮೆರವಣಿಗೆ ಆರಂಭವಾಗಲಿದ್ದು ಶ್ರೀಕೃಷ್ಣಮಠದ ಗೋಪುರದಲ್ಲಿ ಇರಿಸುವ ಮೂರು ಸುವರ್ಣ ಕಲಶ, 1,008 ರಜತ ಕಲಶಗಳನ್ನು ಮೆರವಣಿಗೆಯಲ್ಲಿ ತರಲಾಗುವುದು.

ಮಹಾಭಾರತ ಧಾರಾವಾಹಿಯ ಕೃಷ್ಣಾರ್ಜುನ ಪಾತ್ರಧಾರಿಗಳಾದ ಸೌರಭ್‌ ಜೈನ್‌(ಶ್ರೀಕೃಷ್ಣ), ಶಾಹೀರ್‌ ಶೇಖ್‌(ಅರ್ಜುನ) ಮೆರವಣಿಗೆಯ ಸೊಬಗು ಹೆಚ್ಚಿಸಲಿದ್ದಾರೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಮೆರವಣಿಗೆ ಉದ್ಘಾಟಿಸಲಿದ್ದಾರೆ. ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ, ದಾನಿ ಡಾ.ಜಿ. ಶಂಕರ್‌ ಹಾಗೂ ಸಾಯಿ ರಾಧಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಮನೋಹರ್‌ ಶೆಟ್ಟಿ, ಉದ್ಯಮಿ ಭುವನೇಂದ್ರ ಕಿದಿಯೂರು ಮುಖ್ಯ ಅತಿಥಿಗಳಾಗಿದ್ದಾರೆ.

150 ಭಜನಾ ತಂಡಗಳಿಂದ ಭಜನೆ, 50 ಜನರಿಂದ ಡೋಲು ವಾದನ, ಸ್ಥಳೀಯ ಸಾಂಸ್ಕೃತಿಕ ತಂಡಗಳಿಂದ ವಿವಿಧ ಕಲಾ ಪ್ರಕಾರಗಳ ನೃತ್ಯ ಮೆರವಣಿಗೆಯ ಕಳೆ ಹೆಚ್ಚಿಸಲಿದೆ ಎಂದು ಕಿದಿಯೂರು ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ