ಆ್ಯಪ್ನಗರ

ಕೈವಾರದಲ್ಲಿ ಗುರುಪೂಜಾ ಸಂಗೀತೋತ್ಸವ

ಕೈವಾರದ ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುಪೂಜಾ ಸಂಗೀತೋತ್ಸವ ಜು.14 ರಿಂದ 16ರವರೆಗೆ ಮೂರು ದಿನಗಳು ನಡೆಯಲಿದೆ.

Vijaya Karnataka 12 Jul 2019, 2:51 pm
ಕೋಲಾರ: ಕೈವಾರದ ಶ್ರೀ ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ಗುರುಪೂರ್ಣಿಮಾ ಪ್ರಯುಕ್ತ ಗುರುಪೂಜಾ ಸಂಗೀತೋತ್ಸವ ಜು.14 ರಿಂದ 16ರವರೆಗೆ ಮೂರು ದಿನಗಳು ನಡೆಯಲಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಧಿಧಿಕಾರಿಗಳಾದ ಡಾ.ಎಂ.ಆರ್‌.ಜಯರಾಮ್‌ ತಿಳಿಸಿದರು.
Vijaya Karnataka Web kaivara


ಕೈವಾರ ಮಹಾಕ್ಷೇತ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುಪೂಜಾ ಸಂಗೀತೋತ್ಸವದಲ್ಲಿ ರಾಷ್ಟ್ರಮಟ್ಟದ ಖ್ಯಾತ ಸಂಗೀತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರು ಮತ್ತು ಸಹಸ್ರಾರು ಭಜನಾ ತಂಡಗಳು ಈ ನಾದೋಪಾಸನೆಯಲ್ಲಿ ಭಾಗವಹಿಸಿ ನಿರಂತರ 72 ಗಂಟೆಗಳ ಕಾಲ ಗುರುಗಳಿಗೆ ಸಂಗೀತ ಸೇವೆ ಸಮರ್ಪಿಸಲಿದ್ದಾರೆ ಎಂದರು.

ಜುಲೈ 16 ಗುರುಪೂರ್ಣಿಮೆಯಂದು ಬೆಳಗ್ಗೆ 9.30ರಿಂದ ಗೋಷ್ಠಿಗಾಯನ, 10.30 ರಿಂದ ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ವಿಶೇಷ ಗುರುಪೂಜೆ ನಡೆಸಲಾಗುವುದು. ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಧಿಪತಿ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ ವಾಸವಿ ಸಹೋದರಿಯರಿಂದ ಗಾಯನ, ಚೆನ್ನೈನ ಅನ್ನಯ್ಯಂಪಟ್ಟಿ ಗಣೇಶನ್‌ ಜಲತರಂಗ್‌ ವಾದನ, ಬೆಂಗಳೂರು ವಿನಯ್‌ ಶರ್ವ ಗಾಯನ, ಬೆಂಗಳೂರಿನ ಆರ್‌.ಕೆ.ಪದ್ಮನಾಭ ಗಾಯನ, ಬಳ್ಳಾರಿ ರಾಘವೇಂದ್ರ ಗಾಯನ, ಮುಂಬೈ ಚಂದನಬಾಲಾ ಗಾಯನ, ದೆಹಲಿ ಸರಸ್ವತಿ ರಾಜಗೋಪಾಲನ್‌ ವೀಣಾವಾದನ, ಬೆಂಗಳೂರಿನ ನೂಪುರ ಫೈನ್‌ಆರ್ಟ್ಸ್‌ ರೂಪ ರಾಜೇಶ್‌ ರವರಿಂದ ಕೂಚುಪುಡಿ ನೃತ್ಯ ಕಾರ್ಯಕ್ರಮ ಇರುತ್ತದೆ ಎಂದು ನಾದಸುಧಾರಸ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್‌ ಮಾಹಿತಿ ನೀಡಿದದರು.

ಈ ಮೂರು ದಿನಗಳ ಕಾಲ ಪ್ರತಿನಿತ್ಯ ಕೆ ೂೕಲಾರ, ಚಿಕ್ಕಬಳ್ಳಾಪುರ ಮತ್ತು ನಾಡಿನ ಹೆಸರಾಂತ ಕಾಲಾವಿದರಿಂದ ಸಂಗೀತ ಕಛೇರಿ, ನಾದಸ್ವರ-ತವಿಲ್‌ ವಾದನ, ಭರತನಾಟ್ಯ, ಹರಿಕಥೆ, ಬುರ್ರಕಥೆ, ಹಾಗೂ ಸಾವಿರಾರು ಭಜನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ಅವರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ