ಆ್ಯಪ್ನಗರ

ಪಾಸ್‌, ಶಿಫಾರಸು ರಹಿತ ಹಾಸನಾಂಬ ದರ್ಶನಕ್ಕೆ ಪಟ್ಟು

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲದ ಬಾಗಿಲನ್ನು ಈ ಬಾರಿ ಅ 17ರಿಂದ 13 ದಿನ ತೆರೆಯಲಾಗುತ್ತದೆ.

Vijaya Karnataka 13 Sep 2019, 4:25 pm
ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇಗುಲದ ಬಾಗಿಲನ್ನು ಈ ಬಾರಿ ಅ. 17ರಿಂದ 13 ದಿನ ತೆರೆಯಲಾಗುತ್ತದೆ. ದರ್ಶನಕ್ಕೆ ಗಣ್ಯರಿಗೆ ರಾಜಮಾರ್ಗ, ಸಾಮಾನ್ಯ ಭಕ್ತರಿಗೆ ಗಂಟೆಗಟ್ಟಲೆ ಕಾಯುವ ನರಕಯಾತನೆ ಎಂಬ ಆಕ್ರೋಶ ಪ್ರತಿಸಲ ಉಂಟಾಗುತ್ತಿದ್ದು, ಈ ಬಾರಿಯಾದರೂ ಜಿಲ್ಲಾಡಳಿತ ಸಮಸ್ಯೆ ನಿವಾರಣೆಗೆ ಒತ್ತು ನೀಡಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿಕೇಳಿಬಂದಿದೆ.
Vijaya Karnataka Web Hasanaba


ಹಾಸನಾಂಬ ದೇಗುಲದ ಬಾಗಿಲು ತೆರೆಯುತ್ತಿದ್ದಂತೆ ಸಚಿವರು, ಹಿರಿಯ ಅಧಿಧಿಕಾರಿಗಳಿಂದ ಶಿಫಾರಸು ಪತ್ರಗಳು ಸಾವಿರಾರು ಸಂಖ್ಯೆಯಲ್ಲಿಬರುತ್ತವೆ. ಇನ್ನು ಕೆಲವು ಶಾಸಕರು, ಸಚಿವರು ತಾವು ಬರುವುದರೊಂದಿಗೆ ತಮ್ಮ ಕುಟುಂಬ ವರ್ಗ, ಹಿಂಬಾಲಕರು ಹೀಗೆ ಲೆಕ್ಕವಿಲ್ಲದಷ್ಟು ಜನರನ್ನು ಕರೆದುಕೊಂಡು ಬರುತ್ತಾರೆ. ಭಕ್ತರು ಕಾಯ್ದು ಕುಳಿತರೂ ಪರವಾಗಿಲ್ಲ. ಗಣ್ಯರು, ಜನಪ್ರತಿನಿಧಿಧಿಗಳಿಗೆ ದರ್ಶನಾವಸ್ಥೆ ಕಲ್ಪಿಸಲು ಅಧಿಧಿಕಾರಿಗಳು ಮುಂದಾಗುವುದು ಅನಿವಾರ್ಯ. ಇದೇ ಕಾರಣಕ್ಕಾಗಿ ಪ್ರತಿ ವರ್ಷವೂ ಭಕ್ತರ ಅಸಮಾಧಾನ ಸ್ಫೋಟಗೊಳ್ಳುತ್ತಲೇ ಇದೆ. ಈ ಸಮಸ್ಯೆ ನಿವಾರಿಸಲು ವಿಶೇಷ ದರ್ಶನ ವ್ಯವಸ್ಥೆ, ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಯಿತಾದರೂ, 'ಪಾಸ್‌ ಉಳ್ಳವರೇ ಬಾಸ್‌' ಎಂಬಂತಾಗಿ ಸಮಸ್ಯೆ ಜೀವಂತವಾಗಿಯೇ ಉಳಿದಿದೆ.

ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆಯೂ ಪ್ರತಿ ವರ್ಷ ಹೆಚ್ಚುತ್ತಿದೆ. ಜಿಲ್ಲಾಡಳಿತ ಭಕ್ತರ ಅನುಕೂಲಕ್ಕೆ ಕುಡಿಯುವ ನೀರು, ಪ್ರಸಾದ ಸೇರಿದಂತೆ ಕೆಲವೊಂದು ಅಗತ್ಯ ಸೌಲಭ್ಯ ಒದಗಿಸಿದರೂ, ದೇವಿಯ ದರ್ಶನಕ್ಕೆ ಮಾತ್ರ ಭಕ್ತರು ಪರದಾಡುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ. ಮುಂಜಾನೆ 3 ಅಥವಾ 4 ಗಂಟೆಗೆ ದರ್ಶನಕ್ಕೆಂದು ಸರತಿ ಸಾಲಿನಲ್ಲಿನಿಂತರೆ ಸಂಜೆ ವೇಳೆಗೆ ಹರಸಾಹಸ ಪಟ್ಟು ದರ್ಶನ ಪಡೆಯಬೇಕಾಗುತ್ತದೆ.

ಪ್ರತಿ ವರ್ಷ ಹಾಸನಾಂಬ ದೇಗುಲದ ಕರ್ತವ್ಯಕ್ಕಾಗಿ ನಿಯೋಜಿಸ್ಪಡುವ ಕಂದಾಯ ಹಾಗೂ ಪೊಲೀಸರ ನಡುವೆ ವಾಗ್ವಾದ, ಸಮಸ್ಯೆ ಸೃಷ್ಟಿಯಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚು ಪೊಲೀಸರು, ಕಂದಾಯ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಅವರು ತಮ್ಮ ಕುಟುಂಬ, ಆಪ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಪೈಪೋಟಿ ನಡೆಸುವುದು ನಿಲ್ಲಬೇಕು.
- ವಸಂತಮ್ಮ, ಗೃಹಿಣಿ, ಹಾಸನ


ಹಾಸನಾಂಬ ಉತ್ಸವದ ಹಿನ್ನೆಲೆಯಲ್ಲಿದೇಗುಲದ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಪೂರ್ವ ಸಿದ್ಧತೆ ಕುರಿತು ಅಧಿಕಾರಿಗಳು, ಜನಪ್ರತಿನಿಧಿಧಿಗಳೊಂದಿಗೆ ಶೀಘ್ರದಲ್ಲೇ ಚರ್ಚಿಸಿ ಸುವ್ಯವಸ್ಥೆ ಕಲ್ಪಿಸಲಾಗುವುದು.
- ಗಿರೀಶ್‌, ಜಿಲ್ಲಾಧಿಕಾರಿ, ಹಾಸನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ