ಆ್ಯಪ್ನಗರ

ದೇವಾಲಯದಲ್ಲಿ ಇಫ್ತಾರ್‌ ಕೂಟ

ಪವಿತ್ರ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿರುವ ಶ್ರೀ ಸೀತಾರಾಮ ದೇವಾಲಯದಲ್ಲಿ ಇಫ್ತಾರ್‌ ಕೂಟ ಏರ್ಪಡಿಸಲಾಗಿತ್ತು.

Vijaya Karnataka 25 May 2019, 12:52 pm
ಲಖನೌ: ಪವಿತ್ರ ರಂಜಾನ್‌ ಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿರುವ ಶ್ರೀ ಸೀತಾರಾಮ ದೇವಾಲಯದಲ್ಲಿ ಇಫ್ತಾರ್‌ ಕೂಟ ಏರ್ಪಡಿಸಲಾಗಿತ್ತು. ಧರ್ಮ ಸಾಮರಸ್ಯದ ಉದ್ದೇಶದಲ್ಲಿ ಆಯೋಜಿಸಲಾಗಿದ್ದ ಇದರಲ್ಲಿ ಸರ್ವಧರ್ಮೀಯರು ಪಾಲ್ಗೊಂಡಿದ್ದರು.
Vijaya Karnataka Web 1.


ಈ ಕುರಿತು ಮಾತನಾಡಿದ ದೇವಾಲಯದ ಅರ್ಚಕ ಯುಗಲ್‌ ಕಿಶೋರ್‌, ಮೂರನೇ ವರ್ಷ ನಾವು ಇಫ್ತಾರ್‌ ಕೂಟ ಏರ್ಪಡಿಸುತ್ತಿದ್ದೇವೆ. ಭವಿಷ್ಯದಲ್ಲೂ ಇದು ಮುಂದುವರಿಯಲಿದ್ದು, ಧರ್ಮ ಬೇಧವಿಲ್ಲದೆ ಎಲ್ಲ ಹಬ್ಬಗಳನ್ನೂ ಸಡಗರದಿಂದ ಆಚರಿಸುತ್ತೇವೆ ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ದೇಶದಲ್ಲಿ ಕೆಲವರು ಮಾಡುತ್ತಾರೆ. ಆದರೆ ಕಿಶೋರ್‌ ಅವರಂತಹವರು ಪ್ರೇಮದ ಸಂದೇಶವನ್ನು ಸಾರುತ್ತಿದ್ದು, ಇಂತಹವರಿಗೆ ಮಾದರಿಯಾಗಿದ್ದಾರೆ ಎಂದು ಸ್ವತಃ ನವರಾತ್ರಿ ಆಚರಿಸುತ್ತಿರುವ ಮುಜಾಮಿಲ್‌ ಫಿಜಾ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ