ಶಬರಿಮಲೆ ಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ
ಶಬರಿಮಲೆ ದೇವರ ದರ್ಶನಕ್ಕೆ ತೆರಳುತ್ತಿರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.
Vijaya Karnataka 29 Nov 2019, 4:23 pm
ಕೊಚ್ಚಿ : ಶಬರಿಮಲೆ ದೇವರ ದರ್ಶನಕ್ಕೆ ತೆರಳುತ್ತಿರುವ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಅಯ್ಯಪ್ಪಸ್ವಾಮಿಯ ಪಡಿ ಪೂಜೆಗೆ ಕಾಯ್ದಿರಿಸುವ ಭಕ್ತರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಒಂದು ವರದಿಯಂತೆ ಪಡಿ ಪೂಜೆಗೆ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು ಇದೇ ಮೊದಲ ಬಾರಿಗೆ ಜೂನ್ 2035ರವರೆಗೆ ಪಡಿ ಪೂಜಾ ಸೇವೆಗಳು ಬುಕ್ ಆಗಿವೆ. ಪಡಿ ಪೂಜೆ ಸೇವೆಗಾಗಿ ಮುಂಗಡವಾಗಿ ಕಾಯ್ದಿರಿಸಲು ಬಯಸುವ ಯಾತ್ರಿಕರು ಮೊದಲು 30 ಸಾವಿರ ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇನ್ನುಳಿದ 45 ಸಾವಿರ ರೂ.ಗಳನ್ನು ಸೇವಾ ಅವಧಿಯ ಸಮಯದಲ್ಲಿ ಕೊಡಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಡಿ.26ರಂದು ಸೂರ್ಯ ಗ್ರಹಣದ ನಿಮಿತ್ತ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವನ್ನು ಬೆಳಗ್ಗೆ 7.30 ರಿಂದ ಮಧ್ಯಾಹ್ನ 11.30ರವರೆಗೆ ಮುಚ್ಚಲಾಗುವುದು ಎಂದು ಟ್ರಾವಂಕೂರ್ ದೇವಸ್ವಂ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಪಡಿ ಪೂಜೆ ಸೇವೆ ಸಲ್ಲಿಸುವವರ ಸಂಖ್ಯೆ ಕಡಿಮೆಯಿತ್ತು. ಹುಂಡಿಯ ಆದಾಯವೂ ಕಡಿಮೆಯಾಗಿತ್ತು. ಆದರೆ ಈ ಬಾರಿ ಮಹಿಳಾ ಯಾತ್ರಾರ್ತಿಗಳಿಗೆ ಕೇರಳ ಸರಕಾರವೇ ನಿರ್ಬಂಧ ಹೇರಿರುವುದರಿಂದ ಅಷ್ಟೊಂದು ಉದ್ವಿಘ್ನ ವಾತಾವರಣವಿಲ್ಲ. ಭಕ್ತರ ಸಂಖ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಿದೆ ಎನ್ನುತ್ತಾರೆ ದೇವಸ್ವಂ ಬೋರ್ಡ್ನ ಅಧಿಕಾರಿಯೊಬ್ಬರು.
ಮಹಿಳೆಯರಿಗೆ ಅವಕಾಶವಿಲ್ಲ: ಶಬರಿಮಲೆಯತ್ತ ತೆರಳುತ್ತಿದ್ದ ಮಹಿಳಾ ಕಾರ್ಯಕರ್ತೆಯರನ್ನು ಅರ್ಧದಲ್ಲೇ ಪೊಲೀಸರು ತಡೆದು ವಾಪಸ್ಸು ಕಳುಹಿಸುತ್ತಿದ್ದಾರೆ. ಶಬರಿಮಲೆ ವಿವಾದದ ಸಂಬಂಧ ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಹತ್ತಾರು ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಮೇಲ್ಮನವಿಯ ವಿಚಾರಣೆ ಮಾಡಿದ ನ್ಯಾಯಪೀಠ ಅದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವ ತನಕ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಕೇರಳ ಸರಕಾರ ಅನುಮತಿ ನಿರಾಕರಿಸಿದೆ.
ಕೇರಳ ಸರಕಾರ ಅನುಮತಿ ನಿರಾಕರಿಸಿದಾಗ್ಯೂ ದೇವರ ದರ್ಶನ ಮಾಡುತ್ತೇನೆಂದು ಹಠ ಹಿಡಿದ ಕಾರ್ಯಕರ್ತೆ ಬಿಂದು ಅಮ್ಮಿನಿಯ ಮೇಲೆ ಮಾರ್ಗ ಮಧ್ಯದಲ್ಲೇ ದುಷ್ಕರ್ಮಿಯೊಬ್ಬರು ಪೆಪ್ಪರ್ ಸ್ಪ್ರೇ ಮಾಡಿದ್ದರು. ಇದೀಗ ಆ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಬಿಂದು ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ. ಅಂತೆಯೇ ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ, ರೆಹನಾ ಫಾತಿಮಾಗೂ ಸಹ ಶಬರಿಮಲೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಿಲ್ಲ. ಪೊಲೀಸ್ ಭದ್ರತೆಯಲ್ಲಿತಮಗೆ ತೆರಳಲು ಅವಕಾಶ ನೀಡಬೇಕೆಂಬ ಮನವಿಗೂ ಕೇರಳ ಸರಕಾರ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ, ಬಿಂದು ಅಮ್ಮಿನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.
ಡಿ.26ರಂದು ಸೂರ್ಯ ಗ್ರಹಣದ ನಿಮಿತ್ತ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವನ್ನು ಬೆಳಗ್ಗೆ 7.30 ರಿಂದ ಮಧ್ಯಾಹ್ನ 11.30ರವರೆಗೆ ಮುಚ್ಚಲಾಗುವುದು ಎಂದು ಟ್ರಾವಂಕೂರ್ ದೇವಸ್ವಂ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಪಡಿ ಪೂಜೆ ಸೇವೆ ಸಲ್ಲಿಸುವವರ ಸಂಖ್ಯೆ ಕಡಿಮೆಯಿತ್ತು. ಹುಂಡಿಯ ಆದಾಯವೂ ಕಡಿಮೆಯಾಗಿತ್ತು. ಆದರೆ ಈ ಬಾರಿ ಮಹಿಳಾ ಯಾತ್ರಾರ್ತಿಗಳಿಗೆ ಕೇರಳ ಸರಕಾರವೇ ನಿರ್ಬಂಧ ಹೇರಿರುವುದರಿಂದ ಅಷ್ಟೊಂದು ಉದ್ವಿಘ್ನ ವಾತಾವರಣವಿಲ್ಲ. ಭಕ್ತರ ಸಂಖ್ಯೆಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಿದೆ ಎನ್ನುತ್ತಾರೆ ದೇವಸ್ವಂ ಬೋರ್ಡ್ನ ಅಧಿಕಾರಿಯೊಬ್ಬರು.
ಮಹಿಳೆಯರಿಗೆ ಅವಕಾಶವಿಲ್ಲ: ಶಬರಿಮಲೆಯತ್ತ ತೆರಳುತ್ತಿದ್ದ ಮಹಿಳಾ ಕಾರ್ಯಕರ್ತೆಯರನ್ನು ಅರ್ಧದಲ್ಲೇ ಪೊಲೀಸರು ತಡೆದು ವಾಪಸ್ಸು ಕಳುಹಿಸುತ್ತಿದ್ದಾರೆ. ಶಬರಿಮಲೆ ವಿವಾದದ ಸಂಬಂಧ ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಹತ್ತಾರು ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿತ್ತು. ಮೇಲ್ಮನವಿಯ ವಿಚಾರಣೆ ಮಾಡಿದ ನ್ಯಾಯಪೀಠ ಅದನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಈ ಹಿನ್ನೆಲೆಯಲ್ಲಿಸರ್ವೋಚ್ಚ ನ್ಯಾಯಾಲಯದ ತೀರ್ಪು ಬರುವ ತನಕ 10 ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಕೇರಳ ಸರಕಾರ ಅನುಮತಿ ನಿರಾಕರಿಸಿದೆ.
ಕೇರಳ ಸರಕಾರ ಅನುಮತಿ ನಿರಾಕರಿಸಿದಾಗ್ಯೂ ದೇವರ ದರ್ಶನ ಮಾಡುತ್ತೇನೆಂದು ಹಠ ಹಿಡಿದ ಕಾರ್ಯಕರ್ತೆ ಬಿಂದು ಅಮ್ಮಿನಿಯ ಮೇಲೆ ಮಾರ್ಗ ಮಧ್ಯದಲ್ಲೇ ದುಷ್ಕರ್ಮಿಯೊಬ್ಬರು ಪೆಪ್ಪರ್ ಸ್ಪ್ರೇ ಮಾಡಿದ್ದರು. ಇದೀಗ ಆ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಬಿಂದು ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ. ಅಂತೆಯೇ ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ, ರೆಹನಾ ಫಾತಿಮಾಗೂ ಸಹ ಶಬರಿಮಲೆ ಪ್ರವೇಶಿಸಲು ಪೊಲೀಸರು ಅವಕಾಶ ನೀಡಿಲ್ಲ. ಪೊಲೀಸ್ ಭದ್ರತೆಯಲ್ಲಿತಮಗೆ ತೆರಳಲು ಅವಕಾಶ ನೀಡಬೇಕೆಂಬ ಮನವಿಗೂ ಕೇರಳ ಸರಕಾರ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ, ಬಿಂದು ಅಮ್ಮಿನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.