ಆ್ಯಪ್ನಗರ

ಸೆ.22ಕ್ಕೆ ಸಚ್ಚಿದಾನಂದ ಶ್ರೀಗಳ ಜನ್ಮಶತಾಬ್ಧಿ

ಜಗದ್ಗುರು ಶ್ರೀ ಆದಿಶಂಕರಾಚಾರ್ಯ ಪರಂಪರೆಯ ಪೀಠಾಧಿಧಿಪತಿಗಳಾಗಿ ಸಮಾಜಮುಖಿ ಸೇವೆ ಸಲ್ಲಿಸಿ ಆದರ್ಶಪ್ರಾಯರಾಗಿದ್ದ ತಪಸ್ವಿ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಮಹಾಸ್ವಾಮಿಗಳು...

Vijaya Karnataka 21 Sep 2019, 12:00 am
ಶಿವಮೊಗ್ಗ: ಜಗದ್ಗುರು ಶ್ರೀ ಆದಿಶಂಕರಾಚಾರ್ಯ ಪರಂಪರೆಯ ಪೀಠಾಧಿಪತಿಗಳಾಗಿ ಸಮಾಜಮುಖಿ ಸೇವೆ ಸಲ್ಲಿಸಿ ಆದರ್ಶಪ್ರಾಯರಾಗಿದ್ದ ತಪಸ್ವಿ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಮಹಾಸ್ವಾಮಿಗಳು. ಅವರ ಜನ್ಮಶತಾಬ್ಧದ ಆರಂಭೋತ್ಸವ ಸೆ.22ರಂದು ಕೋಟೆನಾಡು ಚಿತ್ರದುರ್ಗದಲ್ಲಿ ಆಯೋಜನೆಗೊಂಡಿದೆ.
Vijaya Karnataka Web 21


ಶ್ರೀಗಳ ಪರಿಚಯ: ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ಲಿಂಗಾಶಾಸ್ತ್ರಿ ಎಂದು. ಚಿತ್ರದುರ್ಗ ಸಮೀಪದ ಹೊರೆಕರೆದೇವರಪುರ ಗ್ರಾಮದಲ್ಲಿನೂರು ವರ್ಷಗಳ ಹಿಂದೆ ಜನನ. ತಂದೆ ವೇದವಿದ್ವಾಂಸರಾಗಿದ್ದ ಅನಂತರಾಮಶಾಸ್ತ್ರಿಗಳು. ತಾಯಿ ಸಾವಿತ್ರಮ್ಮನವರು.

ಕೂಡಲಿ ಸಂಸ್ಥಾನದ ಅಂದಿನ ಪೀಠಾಧಿಧಿಪತಿಗಳ ಸಮ್ಮುಖದಲ್ಲಿಮೈಸೂರಿನಲ್ಲಿ1930ರಿಂದಲೇ ವೇದ-ಸಂಸ್ಕೃತ-ವಿದ್ವತ್‌ಗಳ ಶಾಸ್ತ್ರವಿಹಿತ ವಿದ್ಯಾಭ್ಯಾಸ ಜರುಗಿತು. ಶೃಂಗೇರಿ ಶಾರದಾಪೀಠದ ಪೂಜ್ಯ ಜಗದ್ಗುರು ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳಿಗೆ ವೇದಾಂತ ಪಾಠ ಬೋಧಿಸಿದ್ದ ಶ್ರೀ ವಿದ್ಯಾಭಿನವ ವಾಲುಕೇಶ್ವರ ಸ್ವಾಮಿಗಳೇ ಅಂದು ಬ್ರಹ್ಮಚಾರಿ ಲಿಂಗಾಶಾಸ್ತ್ರಿಗಳಿಗೆ ಮೊದಲ ಗುರುಗಳಾಗಿದ್ದರು ಎಂಬುದು ವಿಶೇಷ. ಆ ದಿನಗಳಲ್ಲಿಮೈಸೂರಿನ ದಸರಾ ಹಬ್ಬದ ವೇಳೆ ವಿದ್ಯಾರ್ಥಿ ಲಿಂಗಾಶಾಸ್ತ್ರಿಗಳ ವೃಂದದವರು ಅರಮನೆಯಲ್ಲಿನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಆಶೀರ್ವಚನ ಮಾಡುತ್ತಿದ್ದರಂತೆ. ಲಿಂಗಾಶಾಸ್ತ್ರಿಗಳು 1940ರಲ್ಲಿಖ್ಯಾತ ವಿದ್ವಾಂಸ, ಜ್ಯೋತಿಷಿ ಚಿತ್ರದುರ್ಗದ ಶ್ರೀನಿವಾಸ ಅವಧಾನಿಗಳ ಪುತ್ರಿ ವೆಂಕಟಲಕ್ಷ್ಮಮ್ಮನವರನ್ನು ವಿವಾಹವಾದರು.

ಶಿವಮೊಗ್ಗ ಸಮೀಪ ತುಂಗಾಭದ್ರಾನದಿಯ ಪವಿತ್ರ ಸಂಗಮದ ಬಳಿಯ ಶ್ರೀ ಕೂಡಲಿ ಕ್ಷೇತ್ರದಲ್ಲಿ1976ರಲ್ಲಿಅಂದಿನ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳಿಂದ ಲಿಂಗಾಶಾಸ್ತ್ರಿಗಳು ವಿಧಿವತ್ತಾಗಿ ಸಂನ್ಯಾಸಾಶ್ರಮ ಸ್ವೀಕಾರ ಮಾಡಿದರು. ಆಶ್ರಮ ಪದ್ಧತಿಯಂತೆ ಶ್ರೀ ಸಚ್ಚಿದಾನಂದ ವಾಲುಕೇಶ್ವರ ಭಾರತೀ ಎಂಬ ಅಭಿಧಾನವನ್ನು ಪಡೆದರು. 1976ರಿಂದ ನಲವತ್ತು ವರ್ಷಗಳ ಕಾಲ ಕೂಡಲಿ ಸಂಸ್ಥಾನದ ಪೀಠಾಧಿಪತಿಗಳಾಗಿದ್ದರು. ಕೂಡಲಿಕ್ಷೇತ್ರವು ಪ್ರಾಚೀನ ದೇವಾಲಯಗಳ ನಯನಮನೋಹರ ಯಾತ್ರಾಸ್ಥಳವಾಗಿದೆ.

ಈ ಕ್ಷೇತ್ರದಲ್ಲಿ ವಿದ್ಯಾಮಾತೆ ಶಾರದಾದೇವಿಯ ನೂತನ ದೇವಾಲಯ ನಿರ್ಮಾಣಕಾರ್ಯ ಆರಂಭಗೊಂಡಿದೆ. ಶ್ರೀಮಠದ ಇಂದಿನ ಗುರುಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳು ಇದನ್ನು ಪೂರ್ಣಗೊಳಿಸಲು ಶ್ರದ್ಧಾ ಪೂರ್ವಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಕೂಡಲಿಮಠದ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

(ಮಾಹಿತಿ: ವೆಂಕಟಸುಬ್ಬು ಮೋಕ್ಷಗುಂಡಂ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ