ಆ್ಯಪ್ನಗರ

ಕೊಲ್ಲೂರಿನಲ್ಲಿ ಡಾ. ಕೆ.ಜೆ. ಜೇಸುದಾಸ್‌ 80ನೇ ಹುಟ್ಟುಹಬ್ಬ ಆಚರಣೆ

ದಕ್ಷಿಣ ಭಾರತದ ಸಂಗೀತ ಮಾಂತ್ರಿಕ, ಪದ್ಮಭೂಷಣ ಡಾ. ಕೆ.ಜೆ. ಜೇಸುದಾಸ್‌ ಅವರು ಕುಟುಂಬ ಸದಸ್ಯರೊಂದಿಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಮತ್ತು ಚಂಡಿಕಾ ಹೋಮ ನೆರವೇರಿಸುವ ಮೂಲಕ ತಮ್ಮ 80ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Vijaya Karnataka 11 Jan 2020, 4:35 pm
ಬೈಂದೂರು:ಪ್ರತಿ ವರ್ಷದಂತೆ ಈ ವರ್ಷವೂ ದಕ್ಷಿಣ ಭಾರತದ ಸಂಗೀತ ಮಾಂತ್ರಿಕ, ಪದ್ಮಭೂಷಣ ಡಾ. ಕೆ.ಜೆ. ಜೇಸುದಾಸ್‌ ಅವರು ಕುಟುಂಬ ಸದಸ್ಯರೊಂದಿಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಮತ್ತು ಚಂಡಿಕಾ ಹೋಮ ನೆರವೇರಿಸುವ ಮೂಲಕ ತಮ್ಮ 80ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
Vijaya Karnataka Web ಶ್ರೀಕ್ಷೇತ್ರ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ ಡಾ. ಕೆ.ಜೆ. ಜೇಸುದಾಸ್‌ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.
ಶ್ರೀಕ್ಷೇತ್ರ ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ ಡಾ. ಕೆ.ಜೆ. ಜೇಸುದಾಸ್‌ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.


ಬಳಿಕ ಮಾತನಾಡಿದ ಅವರು, ದೇವರು ಕೇಳುವುದು ಭಕ್ತಿಯನ್ನೇ ಹೊರತು ನೀವು ಎಷ್ಟು ಹಣ ಹುಂಡಿಗೆ ಹಾಕಿದ್ದೀರಿ ಎನ್ನುವುದನ್ನಲ್ಲ. ಪ್ರತಿಯೊಬ್ಬರಿಗೂ ತಮ್ಮ ಧರ್ಮ ಮೊದಲು. ಜೀವನದಲ್ಲಿಧಾರ್ಮಿಕ ಪ್ರಜ್ಞೆ ಬೆಳೆಸಿಕೊಂಡರೆ ಮಾತ್ರ ಜಾಗೃತನಾಗಲು ಸಾಧ್ಯವಾಗುತ್ತದೆ. ಈ ಸಾನ್ನಿಧ್ಯದಲ್ಲಿಶುದ್ಧವಾದ ಭಕ್ತಿಯನ್ನಿಡಿ. ಡೀಸೆಲ್‌ ವಾಹನಕ್ಕೆ ಪೆಟ್ರೋಲ್‌ ಹಾಕಿದರೆ ಹೇಗೆ ಓಡುವುದಿಲ್ಲವೋ ಹಾಗೆಯೇ ಯಾವ ಸ್ಥಳದಲ್ಲಿಏನು ಮಾಡಬೇಕೋ ಅದನ್ನೇ ಮಾಡಬೇಕು. ಇಲ್ಲದಿದ್ದರೆ ಸಂಕಲ್ಪಿಸಿದ ಕಾರ್ಯ ಪೂರ್ಣಗೊಳ್ಳುವುದಿಲ್ಲ. ಮನುಷ್ಯನು ತನ್ನ ಮಾತು, ನಡೆ, ನುಡಿ ಎಲ್ಲವೂ ಶುದ್ಧವಾಗಿರಿಸಿಕೊಂಡಾಗ ಮುಂದೊಂದು ದಿನ ಸಾಧಕರಾಗುವುದರಲ್ಲಿಯಾವುದೇ ಸಂಶಯವಿಲ್ಲಎಂದು ಹಿತವಚನ ಹೇಳಿದರು.

ಶ್ರೀ ಕ್ಷೇತ್ರದ ಹಿರಿಯ ಅರ್ಚಕ ಕೆ.ಎನ್‌. ಗೋವಿಂದ ಅಡಿಗ ಅವರ ನೇತೃತ್ವದಲ್ಲಿವಿವಿಧ ಪೂಜಾ ವಿಧಿಗಳನ್ನು ನೆರವೇರಿಸಿದ ಜೇಸುದಾಸ್‌ ಕುಟುಂಬಿಕರು, ಬಳಿಕ ಶ್ರೀದೇವಿಯ ದರ್ಶನ ಪಡೆದು ಚಂಡಿಕಾ ಹೋಮ ಸೇವೆ ನೆರವೇರಿಸಿದರು. ನಂತರ ದೇವಾಲಯದ ಸ್ವರ್ಣಮುಖಿ ರಂಗಮಂದಿರದಲ್ಲಿಭಕ್ತಿಗೀತೆ ಹಾಡಿದರು.

ಶ್ರೀ ಕ್ಷೇತ್ರದ ಅನನ್ಯ ಭಕ್ತರಾಗಿರುವ ಹಾಗೂ ದಕ್ಷಿಣ ಭಾರತದ ಪಂಚಭಾಷಾ ಪ್ರಸಿದ್ಧ ಗಾಯಕ ಡಾ. ಕೆ.ಜೆ. ಜೇಸುದಾಸ್‌ ಅವರ 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕಾಗಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಭಿಲಾಷ್‌ವಿ.ವಿ., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಚ್‌. ಕೃಷ್ಣಮೂರ್ತಿ, ಅಧೀಕ್ಷ ಕ ಕೆ. ರಾಮಕೃಷ್ಣ ಅಡಿಗ, ಪ್ರಧಾನ ಅರ್ಚಕ ಕೆ.ಎನ್‌. ಗೋವಿಂದ ಅಡಿಗ ಅವರು ಡಾ. ಜೇಸುದಾಸ್‌ ಅವರನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ