ಆ್ಯಪ್ನಗರ

ರಾಯರು ಕಲಿಯುಗದ ಕಾಮಧೇನು, ಕಲ್ಪವೃಕ್ಷ

ಮಂತ್ರಾಲಯ ಗುರು ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ರಾಯರ 348 ನೇ ಆರಾಧಾನಾ ನಿಮಿತ್ತ ಬೋಧಿವೃಕ್ಷದ ಓದುಗರಿಗೆ ಅನುಗ್ರಹ ಸಂದೇಶ ನೀಡಿದ್ದಾರೆ.

Vijaya Karnataka 17 Aug 2019, 3:31 pm
ಮಂತ್ರಾಲಯ ಗುರು ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ರಾಯರ 348 ನೇ ಆರಾಧಾನಾ ನಿಮಿತ್ತ ಬೋಧಿವೃಕ್ಷದ ಓದುಗರಿಗೆ ಅನುಗ್ರಹ ಸಂದೇಶ ನೀಡಿದ್ದಾರೆ.
Vijaya Karnataka Web RAC-SVI_1513


ಕಲಿಯುಗದ ಕಾಮಧೇನು ಎಂದೇ ಸದೃಶರಾದ ಮತ್ತು ಪ್ರಹ್ಲಾದ ರಾಜರ ಅವತಾರ ಪುರುಷರಾದ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನೆಯೀಗ ನಡೆಯುತ್ತಿದೆ. 'ದೇವನೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂತ್ರಾಲಯದ ರಾಘಪ್ಪ' ಎಂಬ ಆಡು ಮಾತಿಗೆ ತಕ್ಕಂತೆ ಗುರು ರಾಯರು ಜನಸಾಮಾನ್ಯರಿಗೂ ಹತ್ತಿರವಾಗಿದ್ದಾರೆ.

ಗುರು ರಾಯರ ಭಕ್ತರಲ್ಲಿ ಎಲ್ಲ ಜನಾಂಗದವರು, ಭಾಷಿಕರು, ಧರ್ಮೀಯರು ಇದ್ದಾರೆ. ಅವರನ್ನು ಆರಾಧಿಸುವ, ಪ್ರಾರ್ಥಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಗುರು ರಾಯರನ್ನು ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎನ್ನುತ್ತೇವೆ.

ಕಾಮಧೇನು, ಕಲ್ಪವೃಕ್ಷ ಎರಡೂ ಅಪೂರ್ವವಾದ ವಸ್ತುಗಳು. ರಾಘವೇಂದ್ರ ಸ್ವಾಮಿಗಳಿಗೆ ಕಲ್ಪವೃಕ್ಷ ಮತ್ತು ಕಾಮಧೇನು ಎಂಬ ಔಚಿತ್ಯವನ್ನು ಕೊಟ್ಟಿರುವ ಕಾರಣವಾದರೂ ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಮೊದಲಿಗೆ ಕಲ್ಪವೃಕ್ಷ ಹಾಗೂ ರಾಘವೇಂದ್ರ ಸ್ವಾಮಿಗಳೊಂದಿಗಿನ ಸಾಮ್ಯವನ್ನು ನೋಡೋಣ.

ಕಲ್ಪವೃಕ್ಷ ಒಂದೆಡೆ ಇದ್ದುಕೊಂಡು ತನ್ನನ್ನು ನಂಬಿ ಆಶ್ರಯಿಸುವವರಿಗೆ ನೆರಳು ನೀಡುತ್ತದೆ. ಅಷ್ಟೇ ಅಲ್ಲ ಶರಣಾಗಿ ಬಂದವರ ಸಂರಕ್ಷಣೆಯನ್ನೂ ಮಾಡುತ್ತದೆ. ಕಲ್ಪವೃಕ್ಷದಂತೆಯೇ ರಾಘವೇಂದ್ರರು ತಮ್ಮನ್ನು ನಂಬಿಕೊಂಡು ಬರುವ ಭಕ್ತರನ್ನು ಸಲಹುತ್ತಿದ್ದಾರೆ. ಕಾಮಧೇನುವಿನ ಸಾದೃಶ್ಯವನ್ನು ವರ್ಣನೆ ಮಾಡುವ ಔಚಿತ್ಯವೆಂದರೆ, ಕಾಮಧೇನು ಬೇಡಿದ ಇಷ್ಟಾರ್ಥಗಳನ್ನು ಕೊಡ ಮಾಡುವಂತಹ ಮಹಾನ್‌ ನಂದಿನಿ. ಆ ನಂದಿನಿ ಒಂದೆಡೆ ಸ್ಥಿರವಾಗಿರದೆ ಎಲ್ಲೆಡೆ ಸಂಚರಿಸುತ್ತಾ ಇಷ್ಟಾರ್ಥಗಳನ್ನು ಕರುಣಿಸುತ್ತಾಳೆ. ಇಂತಹ ರಾಘವೇಂದ್ರ ಸ್ವಾಮಿಗಳು ಎಲ್ಲರ ಮನೆಗೆ, ಮನಸ್ಸಿಗೆ, ಕರೆದಲ್ಲಿಗೆ ಬರುವಾತ ಎಂಬ ಸತ್ಯವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಎಲ್ಲ ಕಡೆಯಲ್ಲೂ ಸಂಚಾರ ಮಾಡುತ್ತಾರೆ. ಎಲ್ಲೆಡೆಯಲ್ಲಿ ನೆಲೆಸಿ ಅನುಗ್ರಹಿಸುವ ಏಕೈಕ ಗುರುಗಳಾಗಿದ್ದಾರೆ.

ಅಂತಹ ರಾಘವೇಂದ್ರ ಸ್ವಾಮಿಗಳ ಅಸಂಖ್ಯ ಭಕ್ತರು ದೇಶ, ವಿದೇಶಗಳಲ್ಲಿದ್ದಾರೆ. ಗುರು ರಾಯರ ಭಕ್ತರು ಯಾವುದೇ ವೈಷಮ್ಯವಿಲ್ಲದೆ ಸೇವೆ ಸಲ್ಲಿಸಬೇಕು ಎಂದು ಈ ಮೂಲಕ ತಿಳಿಸುತ್ತೇವೆ. ಪ್ರಸ್ತುತ ಪೀಠಾಧಿಪತಿಗಳಾಗಿ ರಾಘವೇಂದ್ರ ಸ್ವಾಮಿಗಳ ಅನುಗ್ರಹ, ಆಶೀರ್ವಾದವನ್ನು ನೀಡುತ್ತಿದ್ದೇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ