ಆ್ಯಪ್ನಗರ

ಜು.16ರಂದು ಶಕ್ತಿದೇವತೆ ಚಾಮುಂಡೇಶ್ವರಿ ಕರಗ

ಕರಗ ಮಹೋತ್ಸವವು ಜುಲೈ 16 ರಿಂದ ಪ್ರಾರಂಭಗೊಂಡು 26ಕ್ಕೆ ಕೊನೆಗೊಳ್ಳುವುದು.

Vijaya Karnataka 11 Jul 2019, 2:23 pm
ರಾಮನಗರ: ದುಷ್ಟ ಶಿಕ್ಷ ಕಿ, ಶಿಷ್ಟ ರಕ್ಷ ಕಿ ತಾಯಿ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಲಾಗುತ್ತಿದೆ ಎಂದು ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಶ್‌ ಹೇಳಿದರು.
Vijaya Karnataka Web bodhi logo

ಹಲವಾರು ವರ್ಷಗಳಿಂದ ಯಾವ ಅಡೆ ತಡೆ ಇಲ್ಲದೆ ನಡೆದುಬರುತ್ತಿರುವ ಕರಗ ಮಹೋತ್ಸವವು ಜುಲೈ 16 ರಿಂದ ಪ್ರಾರಂಭಗೊಂಡು 26ಕ್ಕೆ ಕೊನೆಗೊಳ್ಳುವುದು.
ಜು.16 ರಂದು ಹಸಿ ಕರಗ ಪ್ರಯುಕ್ತ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಇದ್ದು ಸಂಜೆ 6 ಗಂಟೆಗೆ ಹಸಿ ಕರಗ ಪ್ರಾರಂಭಗೊಂಡು ರಾಜಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ಸೇರುವುದು, 17 ರಂದು ಚಂದ್ರಗ್ರಹಣ ಪ್ರಯುಕ್ತ ಗ್ರಹಣದ ನಂತರ ಅಮ್ಮನವರ ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಗೆ ಪಂಚಗವ್ಯ ಹೋಮವನ್ನು ನೆರವೇರಿಸಿ ಅಮ್ಮನವರಿಗೆ ಸರಸ್ವತಿ ಅಲಂಕಾರ ಮಾಡಲಾಗುವುದು, 18ರಂದು ಲಕ್ಷ್ಮೀ ಅಲಂಕಾರ, 19ರಂದು ಧನಲಕ್ಷ್ಮೀ ಅಲಂಕಾರ, 20ರಂದು ಭುವನೇಶ್ವರಿ ಅಲಂಕಾರ, 21ರಂದು ರಾಜರಾಜೇಶ್ವರಿ ಅಲಂಕಾರ, 22ರಂದು ಗಜಲಕ್ಷ್ಮೀ ಅಲಂಕಾರ ಹಾಗೂ 23ರಂದು ಮಂಗಳವಾರ ಭಾರತಮಾತೆ ಅಲಂಕಾರ ಇರುವುದಾಗಿ ತಿಳಿಸಿದರು. ಎಂದಿನಂತೆ ಶ್ರೀ ಚಾಮುಂಡೇಶ್ವರಿ ಶ್ರೀ ಶೆಟ್ಟಹಳ್ಳಿ ಆದಿಶಕ್ತಿ, ಆದಿಶಕ್ತಿ, ಶ್ರೀ ಮುತ್ತುಮಾರಮ್ಮ, ಶ್ರೀ ಬಿಸಿಲುಮಾರಮ್ಮ, ಶ್ರೀ ಮಗ್ಗದಕೇರಿ ಮಾರಮ್ಮ, ಭಂಡಾರಮ್ಮ, ಎಂಟು ದೇವತೆಗಳ ಕರಗಮಹೋತ್ಸವ ನಡೆಯುವುದು ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ