ಆ್ಯಪ್ನಗರ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ, ನೂತನ ಬ್ರಹ್ಮರಥದಲ್ಲಿ ರಥೋತ್ಸವ

ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು ಸುಮಾರು 99 ಭಕ್ತರು ಸಲ್ಲಿಸಿದ್ದರು.

Vijaya Karnataka 3 Dec 2019, 2:54 pm
ಸುಬ್ರಹ್ಮಣ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ಸೋಮವಾರ ಮುಂಜಾನೆ ಭಕ್ತ ಜನ ಸಾಗರದ ಸಮ್ಮುಖದಲ್ಲಿ ನೂತನ ಬ್ರಹ್ಮರಥದಲ್ಲಿ ಶ್ರೀ ದೇವರ ಚಂಪಾ ಷಷ್ಠಿ ಮಹಾ ರಥೋತ್ಸವ ನಡೆಯಿತು.
Vijaya Karnataka Web kukke
ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ರಥೋತ್ಸವದಲ್ಲಿ ಭಾಗಿಯಾದರು.

ದೇವಸ್ಥಾನದ ಪ್ರಧಾನ ಅರ್ಚಕ ವೇದ ಮೂರ್ತಿ ಸೀತಾರಾಮ ಎಡಪಡಿತ್ತಾಯ ವೈದಿಕ ವಿಧಿ ನೆರವೇರಿಸಿದರು.
ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ನೂತನ ಬ್ರಹ್ಮರಥ ಎಳೆದರು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು ಸುಮಾರು 99 ಭಕ್ತರು ಸಲ್ಲಿಸಿದ್ದರು.
ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲ ವಾಗುವಂತೆ ವಿಶೇಷ ಪಾಸ್ವ್ಯವಸ್ಥೆ ಮಾಡಲಾಗಿತ್ತು. ಕಾಣಿಕೆ, ಕಾಳುಮೆಣಸು, ಏಲಕ್ಕಿ, ಸಾಸಿವೆ ಮೊದಲಾದ ಧಾನ್ಯಗಳನ್ನು ಭಕ್ತರು ರಥಕ್ಕೆ ಎಸೆದರು.
ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಆನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್‌, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇ ಳದಲ್ಲಿ ಸಾಲಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಧನುರ್ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥಾರೂಢ ರಾದರು. ಪಂಚಮಿ ರಥದಲ್ಲಿ ಉಮಾ ಮಹೇಶ್ವರ ದೇವರು ಆಸೀನರಾದರು. ತದನಂತರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು. ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು.
ಷಷ್ಠಿ ಕಟ್ಟೆಯಲ್ಲಿ ವಿಶೇಷ ಪೂಜೆ: ರಥೋತ್ಸವದ ಬಳಿಕ ಶ್ರೀ ಉಮಾಮಹೇಶ್ವರ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು.
ಆಡಳಿತಾಧಿಕಾರಿ ಎಂ.ಜೆ. ರೂಪಾ, ಕಾರ್ಯನಿರ್ವಹಣಾಧಿಕಾರಿ ಡಾ. ಯತೀಶ್ಉಳ್ಳಾಲ್ಅವರಿಗೆ ಪ್ರಧಾನ ಅರ್ಚಕರು ಹೂವಿನ ಪ್ರಸಾದ ನೀಡಿದರು.
ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು, ಶ್ರೀ ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ದೇವರು ಗರ್ಭಗುಡಿ ಪ್ರವೇಶಿಸಿದ ಬಳಿಕ ಮೂಲಪ್ರಸಾದ ವಿತರಿಸಲಾಯಿತು.
ಅರ್ಚಕರಾದ ರಾಮಕೃಷ್ಣ ನೂರಿ ತ್ತಾಯ, ರಾಜೇಶ್ನಡ್ಯಂತಿಲ್ಲಾಯ ಮತ್ತು ಸತ್ಯನಾರಾಯಣ ನೂರಿತ್ತಾಯ ಪ್ರಸಾದ ವಿತರಿಸಿದರು. ಹೈಕೋರ್ಟ್ನ್ಯಾಯಾಧೀಶ ಸತ್ಯನಾರಾಯಣ, ಶಾಸಕ ಸಂಜೀವ ಮಠಂದೂರು, ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ಚಂದ್ರಶೇಖರ ಪೇರಾಲ್‌, ಚೆನ್ನಪ್ಪ ರೈ ದೇರ್ಲ, ದಿವಾಕರ ರೈ ದೇರ್ಲ, ಕರುಣಾಕರ ರೈ ದೇರ್ಲ, ಡಾ. ಸ್ವಪ್ನಾ ಅಜಿತ್ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸಂಜೀವ ಶೆಟ್ಟಿ, ಲೀಲಾ ಎಸ್‌. ಶೆಟ್ಟಿ, ಅಮಿತಾ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಮಳೆಯ ಸಿಂಚನ: ಕುಕ್ಕೆ ಕ್ಷೇತ್ರದಲ್ಲಿ ರಥೋತ್ಸವದ ಮೊದಲು ಹನಿ ಮಳೆಯ ಸಿಂಚನವಾಗಿತ್ತು. ರಥೋತ್ಸವದ ಬಳಿಕ ಹೊರಾಂಗಣದಲ್ಲಿನ ಷಷ್ಠಿ ಕಟ್ಟೆಯಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಿ ಒಳಾಂಗಣ ಪ್ರವೇಶಿಸಿದ ನಂತರ ಮಳೆಯ ಆಗಮನ ವಾಯಿತು. ಮಧ್ಯಾಹ್ನ ನಂತರ ನಿರಂತರ ಸಾಧಾರಣ ಮಳೆ ಸುರಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ