ಆ್ಯಪ್ನಗರ

ಕುಕ್ಕೆ ದೇಗುಲದ ಆನೆ ಯಶಸ್ವಿಗೆ ಅಸೌಖ್ಯ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ 'ಯಶಸ್ವಿ' ಕಳೆದೊಂದು ವಾರದಿಂದ ಅಸೌಖ್ಯದಿಂದ ಬಳಲುತ್ತಿದೆ.

Vijaya Karnataka 16 Aug 2019, 5:14 pm
ಸುಬ್ರಹ್ಮಣ್ಯ:ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನೆ 'ಯಶಸ್ವಿ' ಕಳೆದೊಂದು ವಾರದಿಂದ ಅಸೌಖ್ಯದಿಂದ ಬಳಲುತ್ತಿದೆ.
Vijaya Karnataka Web SUB-05(ANE SHED GE BETI


ಪಶು ವೈದ್ಯಾಧಿಕಾರಿ ಡಾ. ವೆಂಕಟಾಚಲಪತಿ ಅವರು ಯಶಸ್ವಿಗೆ ಚಿಕಿತ್ಸೆ ನೀಡುತ್ತಿದ್ದು, ಕಳೆದೆರಡು ದಿನಗಳಿಂದ ಚೇತರಿಸಿಕೊಳ್ಳುತ್ತಿದೆ.

ದೇವಳದ ಆಡಳಿತ ಮಂಡಳಿಯು ಆನೆ ಅಸೌಖ್ಯಗೊಂಡ ವಿಷಯವನ್ನು ಪಶು ವೈದ್ಯಾಧಿಕಾರಿ ಡಾ. ವೆಂಕಟಾಚಲಪತಿ ಅವರಿಗೆ ಸುದ್ದಿ ತಿಳಿಸಿದರು. ಅವರು ಚಿಕಿತ್ಸೆ ನೀಡತೊಡಗಿದರು. ಅಲ್ಲದೆ ಕುಶಾಲನಗರದ ದುಬಾರೆ ಆನೆ ಕ್ಯಾಂಪ್‌ನ ನುರಿತ ಆನೆ ತಜ್ಞ ಡಾ. ಸೆಟ್ಟಿಯಪ್ಪ ಅವರಿಗೆ ಬರುವಂತೆ ಆಡಳಿತ ಮಂಡಳಿ ಮನವಿ ಮಾಡಿತು. ಆದರೆ ಮಡಿಕೇರಿ ಭಾಗದಲ್ಲಿನ ಅತಿವೃಷ್ಟಿ ಮತ್ತು ರಸ್ತೆ ಸಂಪರ್ಕದ ತೊಂದರೆಯಿಂದ ಅವರು ಕುಕ್ಕೆಗೆ ಶೀಘ್ರ ಬರಲು ಆಗಿರಲಿಲ್ಲ. ಆದರೆ ಡಾ. ವೆಂಕಟಾಚಲಪತಿ ಅವರು ಆನೆಗೆ ಗ್ಲೂಕೋಸ್‌ ಸೇರಿದಂತೆ ಔಷಧವನ್ನು ನೀಡುವ ಕಾರ್ಯವನ್ನು ಆರು ದಿನಗಳಿಂದ ರಾತ್ರಿ ಹಗಲು ಮಾಡುತ್ತಿದ್ದಾರೆ. ಹೀಗಾಗಿ ಆನೆ ಚೇತರಿಸಿಕೊಳ್ಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ