ಆ್ಯಪ್ನಗರ

ಮಾಲೇಕಲ್ಲು ತಿರುಪತಿ:ಜು.13ರಂದು ಮಹಾ ರಥೋತ್ಸವ

ಅರಸೀಕೆರೆಯ ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವವು ರಥಗಣಪತಿ ಪೂಜೆಯೊಂದಿಗೆ ಪ್ರಾರಂಭಗೊಂಡಿದ್ದು, ಜು.13ರಂದು ಮಹಾ ರಥೋತ್ಸವವು ನಡೆಯಲಿದೆ.

Vijaya Karnataka 13 Jul 2019, 12:00 am
ಅರಸೀಕೆರೆ: ಮಾಲೇಕಲ್ಲು ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ಜಾತ್ರಾ ಮಹೋತ್ಸವವು ರಥಗಣಪತಿ ಪೂಜೆಯೊಂದಿಗೆ ಪ್ರಾರಂಭಗೊಂಡಿದ್ದು, ಜು.13ರಂದು ಮಹಾ ರಥೋತ್ಸವವು ನಡೆಯಲಿದೆ.
Vijaya Karnataka Web Malekallu


ಜಾತ್ರಾ ಮಹೋತ್ಸವದ ಅಂಗವಾಗಿ ಜು.22 ರವರೆಗೆ ಪ್ರತಿನಿತ್ಯ ವಿಶೇಷ ಉತ್ಸವಗಳು ಜರುಗಲಿವೆ ಎಂದು ಅರಸೀಕೆರೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ತಿರುಪತಿ ಜಾತ್ರಾ ಮಹೋತ್ಸವದ ಸಮಿತಿಯ ಅಧ್ಯಕ್ಷ ಬಿ.ಎಸ್‌. ಅರುಣ್‌ಕುಮಾರ್‌ ಹೇಳಿದರು.

ದೇವಸ್ಥಾನದಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ ಬಿ.ಎಸ್‌. ಅರುಣ್‌ಕುಮಾರ್‌ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಜಾತ್ರಾ ಮಹೋತ್ಸವದ ಮೊದಲನೇ ದಿನದ ಪ್ರಯುಕ್ತ ಪ್ರಾತಃಕಾಲ ಶ್ರೀಯವರಿಗೆ ಪಂಚಾಮೃತಾಭಿಷೇಕ, ರಥಗಣಪತಿ ಪೂಜೆ, ದೇವತಾ ಪ್ರಾರ್ಥನೆ, ಮೃತ್ತಿಕಾ ಸಂಗ್ರಹಣ, ಯಾಗಶಾಲೆ ಪ್ರವೇಶ, ಅಂಕುರಾರ್ಪಣೆ ನೆರವೇರಿಸಲಾಯಿತು.

ಗರುಡ ಧ್ವಜಾರೋಹಣ: ಮಾಲೇಕಲ್ಲು ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿಯವರ ಜಾತ್ರಾ ಮಹೋತ್ಸವದ 2ನೇ ದಿನದಂದು ಸಂಪ್ರದಾಯದಂತೆ ಗರುಡ ಧ್ವಜಾರೋಹಣವನ್ನು ದೇವಸ್ಥಾನದ ಆಗಮಿಕರು ನೆರವೇರಿಸಿದರು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನಡೆದು ನಂತರ ರಕ್ಷಾ ಬಂಧನ, ಭೇರಿತಾಡನ, ದಿಕ್ಬಲಿ ನಂತರ ಧ್ವಜಾರೋಹಣ, ದೇವತಾ ಆಹ್ವಾನ ನಡೆಯಿತು. ವೆಂಕಟರಮಣ ಸ್ವಾಮಿಯ ಜೊತೆಯಲ್ಲಿರುವ ಲಕ್ಷ್ಮೇ ಪದ್ಮಾವತಿ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಗಮಿಕರಾದ ರಾಮಪ್ರಸಾದ್‌ ಮಾತನಾಡಿ, ಜಾತ್ರಾ ಸಂಪ್ರದಾಯದಂತೆ ಧ್ವಜ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಮುಂದಿನ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಜಾತ್ರಾ ಕಾರ್ಯಕ್ರಮಗಳು ಮುಗಿಯುವವರೆಗೂ ನಿತ್ಯ ಹಲವು ನಿತ್ಯೋತ್ಸವಗಳು, ಉತ್ಸವಗಳು ನಡೆಯಲಿವೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ