ಮಂದಾರ್ತಿ: ಮಳೆಗಾಲದ ಯಕ್ಷ ಗಾನ ಸೇವೆಯಾಟಕ್ಕೆ ಚಾಲನೆ
ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಸಕ್ತ ವರ್ಷದ ಮಳೆಗಾಲದ ಸೇವೆಯಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
Vijaya Karnataka Web 15 Jun 2019, 4:56 pm
ಮಂದಾರ್ತಿ:ಉಡುಪಿ ಜಿಲ್ಲೆಯ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಸಕ್ತ ವರ್ಷದ ಮಳೆಗಾಲದ ಸೇವೆಯಾಟಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಆ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಗಣಹೋಮ ಮತ್ತು ಎರಡು ಮೇಳಗಳ ಗಣಪತಿ ಪೂಜೆ ನಡೆಯಿತು. ಮೊದಲು ಬಾರಾಳಿ ಶ್ರೀ ಗಣಪತಿ ದೇವಳದಲ್ಲಿ ಕಲಾವಿದರು ಗೆಜ್ಜೆ ಧರಿಸಿ ನಂತರ ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಮಹಾಪೂಜೆ ನಡೆಯಿತು. ರಾತ್ರಿ ದೇವಳದ ಪ್ರಾಂಗಣದಲ್ಲಿ ಒಂದೇ ವೇದಿಕೆಯಲ್ಲಿ ಎರಡು ರಂಗಸ್ಥಳಗಳಲ್ಲಿ ಎರಡೂ ಮೇಳಗಳಿಂದ ಪ್ರಥಮ ಸೇವೆಯಾಟ ನಡೆಯಿತು.
ದೇವಳದ ಮುಖ್ಯಕಾರ್ಯನಿರ್ವಹಣಾಕಾಧಿರಿ ಪ್ರವೀಣ್ ಬಿ. ನಾಯಕ್, ಅನುವಂಶಿಕ ಆಡಳಿತ ಮೊಕ್ತೇಸರ ಎಚ್. ಧÜನಂಜಯ ಶೆಟ್ಟಿ, ಅನುವಂಶಿಕ ಮೊಕ್ತೇಸರರಾದ ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಅರ್ಚಕರು, ಸಿಬಂದಿ, ಭಕ್ತಾದಿಗಳು, ಯಕ್ಷ ಗಾನ ಸೇವೆಯ ಸೇವಾಕರ್ತರು ಉಪಸ್ಥಿತರಿದ್ದರು.
ಆ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶುಕ್ರವಾರ ಗಣಹೋಮ ಮತ್ತು ಎರಡು ಮೇಳಗಳ ಗಣಪತಿ ಪೂಜೆ ನಡೆಯಿತು. ಮೊದಲು ಬಾರಾಳಿ ಶ್ರೀ ಗಣಪತಿ ದೇವಳದಲ್ಲಿ ಕಲಾವಿದರು ಗೆಜ್ಜೆ ಧರಿಸಿ ನಂತರ ಶ್ರೀದುರ್ಗಾಪರಮೇಶ್ವರೀ ದೇವಳದಲ್ಲಿ ಮಹಾಪೂಜೆ ನಡೆಯಿತು. ರಾತ್ರಿ ದೇವಳದ ಪ್ರಾಂಗಣದಲ್ಲಿ ಒಂದೇ ವೇದಿಕೆಯಲ್ಲಿ ಎರಡು ರಂಗಸ್ಥಳಗಳಲ್ಲಿ ಎರಡೂ ಮೇಳಗಳಿಂದ ಪ್ರಥಮ ಸೇವೆಯಾಟ ನಡೆಯಿತು.
ದೇವಳದ ಮುಖ್ಯಕಾರ್ಯನಿರ್ವಹಣಾಕಾಧಿರಿ ಪ್ರವೀಣ್ ಬಿ. ನಾಯಕ್, ಅನುವಂಶಿಕ ಆಡಳಿತ ಮೊಕ್ತೇಸರ ಎಚ್. ಧÜನಂಜಯ ಶೆಟ್ಟಿ, ಅನುವಂಶಿಕ ಮೊಕ್ತೇಸರರಾದ ಎಚ್. ಸುರೇಂದ್ರ ಶೆಟ್ಟಿ, ಎಚ್. ಪ್ರಭಾಕರ ಶೆಟ್ಟಿ, ಎಚ್. ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ, ಅರ್ಚಕರು, ಸಿಬಂದಿ, ಭಕ್ತಾದಿಗಳು, ಯಕ್ಷ ಗಾನ ಸೇವೆಯ ಸೇವಾಕರ್ತರು ಉಪಸ್ಥಿತರಿದ್ದರು.