ಆ್ಯಪ್ನಗರ

ಮಾತೆ ಕಾಳಿ ನನ್ನ ನೆಚ್ಚಿನ ದೇವತೆ : ಪ್ರಿಯಾಂಕ ಉಪೇಂದ್ರ

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಅವರು ಇತ್ತೀಚಿಗೆ ಫೇಸ್‌ಬುಕ್‌ ಲೈವ್‌ನಲ್ಲಿ, ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಷನ್‌ನ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಆರೈಕೆ ಕಾರ್ಯಕ್ರಮಗಳ ನಿರ್ದೇಶಕಿ ಭಾನುಮತಿ ನರಸಿಂಹನ್‌ ಅವರ ಜತೆ ಮಾತನಾಡಿದರು.

Vijaya Karnataka 22 Jun 2019, 12:00 am
ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಅವರು ಇತ್ತೀಚಿಗೆ ಫೇಸ್‌ಬುಕ್‌ ಲೈವ್‌ನಲ್ಲಿ, ಆರ್ಟ್‌ ಆಫ್‌ ಲಿವಿಂಗ್‌ ಫೌಂಡೇಷನ್‌ನ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಆರೈಕೆ ಕಾರ್ಯಕ್ರಮಗಳ ನಿರ್ದೇಶಕಿ ಭಾನುಮತಿ ನರಸಿಂಹನ್‌ ಅವರ ಜತೆ ಮಾತನಾಡಿದರು.
Vijaya Karnataka Web Priyanka


ಇದೇ ಸಂದರ್ಭದಲ್ಲಿ ಅವರು ಭಾರತೀಯ ಪುರಾಣ ಕಥೆಗಳ ಅರ್ಥವನ್ನು ತಿಳಿಯಪಡಿಸುವ 'ಪರಾಶಕ್ತಿ: ಮ್ಯಾಜಿಕಲ್ಸ್ಟೋರೀಸ್‌ ಆಫ್‌ ದಿ ಡಿವೈನ್‌ ಮದರ್‌' ಕೃತಿ ಬಿಡುಗಡೆ ಮಾಡಿ ಭಾನುಮತಿ ಅವರ ಜತೆ ಸಂಭಾಷಿಸಿದರು. ಭಾನುಮತಿ ನರಸಿಂಹನ್‌ ಅವರು ಜೀವನದಲ್ಲಿ ಲೀಲಾ ಮತ್ತು ಧ್ಯಾನಯೋಗವನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳ ವಿವರಣೆಯನ್ನು ನೀಡಿದರು. ಪ್ರಿಯಾಂಕ ಉಪೇಂದ್ರ ಅವರು ದೈನಂದಿನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವ ಮಹಿಳೆಯರ ಸಾಮರ್ಥ್ಯ‌ದ ಮೇಲೆ ಬೆಳಕು ಚೆಲ್ಲಿದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು 'ಕೊಲ್ಕತ್ತದಲ್ಲಿ ಬಾಲ್ಯದ ದಿನಗಳನ್ನು ಕಳೆದಂದಿನಿಂದಲೂ ತಾಯಿ ಕಾಳಿ ನನ್ನ ಮೇಲೆ ಪ್ರಭಾವ ಬೀರಿದ್ದಾಳೆ. ಆಕೆಯೇ ನನ್ನ ಆರಾಧ್ಯ ದೈವ. ಕೊಲ್ಕತ್ತಾದಲ್ಲಿಷ್ಟು ದಿನವೂ ಕಾಳಿಘಾಟ್‌ಗೆ ಭೇಟಿ ನೀಡುತ್ತಿದ್ದೆ' ಎಂದು ತಿಳಿಸಿದರು.

ಆಗ ಭಾನುಮತಿ ನರಸಿಂಹನ್‌ ಅವರು ದೇವಿಯ ಉಗ್ರ ಸ್ವರೂಪದ ಹಿಂದಿನ ಸಂದೇಶವನ್ನು ವಿವರಿಸಿದರು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರಲ್ಲೂ ಸೌಂದರ್ಯ ಕಾಣಲು ಸಾಧ್ಯವಾಗುತ್ತದೆ. ಕಾಳಿದೇವಿಯ ಮೇಲಿನ ಪ್ರೇಮವನ್ನು ಮತ್ತಷ್ಟು ಬಲಪಡಿಸುತ್ತದೆ. ಸುರಕ್ಷತಾ ಮನೋಭಾವ ಮೂಡುತ್ತದೆ ಎಂದರು.

ಕಾಳಿ ಮಾತೆ ತಲೆಬುರುಡೆಗಳ ಹಾರವನ್ನೇಕೆ ಧರಿಸುತ್ತಾಳೆ ಎಂಬ ಪ್ರಶ್ನೆಗೆ ಅವರು ಸಮರ್ಪಕವಾಗಿ ಉತ್ತರಿಸಿದರು. ತಮ್ಮ ಕೃತಿ ಪರಾಶಕ್ತಿಯನ್ನು ಉಲ್ಲೇಖಿಸಿದರು.

'ಪರಾಶಕ್ತಿ' ಎಂಬ ಪುಸ್ತಕದಲ್ಲಿ ಪ್ರತಿಬಿಂಬಿಸುವ ಆಸಕ್ತಿದಾಯಕ ಅಂಶಗಳಲ್ಲಿ ನೀನೇ ನೀನಾಗಿದ್ದೀಯ ಎಂಬುದೂ ಒಂದಾಗಿದೆ. ಕೃತಿಯನ್ನು ಓದುತ್ತಾ ಹೋದಂತೆ ನಾವು ನಮ್ಮತನವನ್ನು ಮರೆತುಬಿಡುತ್ತೇವೆ. ಅದರಿಂದ ಪ್ರಭಾವಿತರಾಗುತ್ತೇವೆ. ಅಂತಹದ್ದೊಂದು ಪ್ರಭಾವವೇ ನಮ್ಮೊಳಗೆ ಆಧ್ಯಾತ್ಮಿಕ ಜಾಗೃತಿ ಉಂಟು ಮಾಡುತ್ತದೆ ಎಂದರು.

ಪರಾಶಕ್ತಿ 'ದೇವಿ'ಯ ಸೌಂದರ್ಯದ ಪ್ರತೀಕವಾಗಿದೆ. ದೈವಿಕ ಚಿಂತನೆಯ ಬದಲು ತನ್ನ ಅಸ್ತಿತ್ವವನ್ನು ಅನುಭವಿಸುವ ಮೂಲಕ ಮಾತ್ರ ಭಾವಿಸಬಹುದಾದ ಮತ್ತು ಪೂಜಿಸಬಹುದಾದ ಅತ್ಯುನ್ನತ ಶಕ್ತಿಯಾಗಿದೆ ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ