ಆ್ಯಪ್ನಗರ

ಅರ್ಚಕರ ಬೇಡಿಕೆ ಈಡೇರಿಸುವಂತೆ ಮುಜರಾಯಿ ಸಚಿವರಿಗೆ ಮನವಿ

ಅರ್ಚಕರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

Vijaya Karnataka 18 Sep 2019, 12:15 pm
ಬೆಂಗಳೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದವರು ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಅರ್ಚಕರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
Vijaya Karnataka Web Kota Srinivas Poojari

ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಎ, ಬಿ ಹಾಗೂ ಸಿ ದರ್ಜೆಗೆ ಒಳಗೊಂಡ ದೇವಸ್ಥಾನಗಳ ತಸ್ತಿಕ್‌ ಹಣ ಈಗಿನ ಧಾರಣೆಗೆ ತಕ್ಕಂತೆ ಪೂಜೆ ನಿರ್ವಹಿಸಲು ತೊಂದರೆ ಉಂಟಾಗಿರುವುದರಿಂದ ತಿಂಗಳ ವೇತನವನ್ನು ಐದು ಸಾವಿರ ರೂ.ಗಳಿಗೆ ಹೆಚ್ಚಿಸಬೇಕು, ದೇವಸ್ಥಾನದ ಆದಾಯದ ಶೇ.35 ರಷ್ಟು ಸಿಬ್ಬಂದಿಗಳ ವೇತನ ಇದ್ದು ಶೇ.45ಕ್ಕೆ ಏರಿಸಬೇಕು, ಮುಜರಾಯಿ ದೇಗುಲಗಳಲ್ಲಿ ವಂಶಪಾರಂಪರ್ಯವಾಗಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರುಗಳ ಸೇವಾ ನಿವೃತ್ತಿಯನ್ನು ನಿಗದಿ ಮಾಡಬಾರದು ಇವೇ ಮೊದಲಾದ ಬೇಡಿಕೆಗಳನ್ನು ಮುಜರಾಯಿ ಸಚಿವರಿಗೆ ಸಲ್ಲಿಸಲಾಯಿತು.
ಅದರ ಜತೆಗೆ ಮುಜರಾಯಿ ಇಲಾಖೆಯಲ್ಲಿ ಕಚೇರಿಯ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕೊರತೆ, ಮುಜರಾಯಿ ಇಲಾಖೆಯಿಂದ ನಡೆಸುತ್ತಿರುವ ಪ್ರಸಿದ್ಧ ಪ್ರವರ ಪ್ರವೀಣ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ನೀಡುವ ಘಟಿಕೋತ್ಸವ ಕಾರ್ಯಕ್ರಮ ಕಳೆದ 20 ವರ್ಷಗಳಿಂದ ನಡೆಯುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಚಿವರೊಂದಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮೀಕರ ಮತ್ತು ಉಪಾಧಿಧಿವಂತರ ಒಕ್ಕೂಟದ ಪರವಾಗಿ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಎನ್‌ ದೀಕ್ಷಿತ್‌, ಎಸ್‌ಆರ್‌ ಶೇಷಾದ್ರಿ, ಟಿ.ಕೆ.ಶ್ಯಾಮಸುಂದರ ದೀಕ್ಷಿತ್‌, ಕೆ.ಎಸ್‌.ಉಮೇಶ್‌ ಶರ್ಮ ಮೊದಲಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ