ಘಾಟಿ ಕ್ಷೇತ್ರದಲ್ಲಿ ನಾಗರಪಂಚಮಿ
ನಾಗರಪಂಚಮಿ ಅಂಗವಾಗಿ ಆ5ರಂದು ಘಾಟಿ ಕ್ಷೇತ್ರದಲ್ಲಿ ಮುಂಜಾನೆ 5ರಿಂದಲೇ ವಿಶೇಷ ಅಭಿಷೇಕಗಳು ನೆರವೇರುತ್ತವೆ.
Vijaya Karnataka 2 Aug 2019, 2:42 pm
ದೊಡ್ಡಬಳ್ಳಾಪುರ: ನಾಗರಪಂಚಮಿ ಅಂಗವಾಗಿ ಆ.5ರಂದು ಘಾಟಿ ಕ್ಷೇತ್ರದಲ್ಲಿ ಮುಂಜಾನೆ 5ರಿಂದಲೇ ವಿಶೇಷ ಅಭಿಷೇಕಗಳು ನೆರವೇರುತ್ತವೆ. ಬೆಳಿಗ್ಗೆ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ, ಮಾಹಾಪೂಜೆ ನೆರವೇರಲಿದೆ. ಜತೆಗೆ ಸಂಜೆ 7.30ಕ್ಕೆ ಪೂಜೆ ಮತ್ತು ರಾತ್ರಿ 8.30ಕ್ಕೆ ಮಹಾಮಂಗಳಾರಾತಿ ನಡೆಯಲಿದೆ.
ಬೆಳಗ್ಗೆ ದೇವಸ್ಥಾನದಲ್ಲಿನೆರವೇರುವ ಅಭಿಷೇಕ, ವಿಶೇಷಾಲಂಕಾರದ ಬಳಿಕ ಪ್ರಾಕಾರೋತ್ಸವದೊಂದಿಗೆ ಘಾಟಿ ಕ್ಷೇತ್ರದ ಪ್ರಮುಖ ರಾಜಬೀದಿಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಮೆರವಣಿಗೆ ನಡೆಯಲಿದೆ ಎಂದು ದೇಗುಲದ ಪ್ರಧಾನ ಅರ್ಚಕ ಶ್ರೀನಿಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಆಕರ್ಷಣೆ ಎಂದರೆ ಇಲ್ಲಿನ ನಾಗರಕಲ್ಲುಗಳು. ಸುಮಾರು 10ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಭಕ್ತರು ದೇವಸ್ಥಾನದ ಸುತ್ತ ಮುತ್ತ ಪ್ರತಿಷ್ಠಾಪಿಸಿದ್ದು, ನಾಗರಪಂಚಮಿಯಂದು ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಇದೆ.
ಯಾವುದೇ ದೇವಸ್ಥಾನಕ್ಕೆ ಹೋದರೆ ಕೇವಲ ಒಂದು ಮೂರ್ತಿಯನ್ನು ಕಣ್ತುಂಬಿಕೊಳ್ಳುತ್ತೇವೆ. ಆದರೆ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಕ್ಷೇತ್ರದ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಮುಂಭಾಗ ಸುಬ್ರಹ್ಮಣ್ಯ ಸ್ವಾಮಿ, ಹಿಂಭಾಗದಲ್ಲಿ ನರಸಿಂಹಸ್ವಾಮಿಯ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು. ವಿಶೇಷ ದಿನಗಳಲ್ಲಿ ಈ ಮೂರ್ತಿಗೆ ಮಾಡಲಾಗುವ ವಿಶೇಷ ಅಲಂಕಾರಗಳು ನೆರೆದ ಭಕ್ತರ ಕಣ್ಮನ ಸೆಳೆಯುವುದು ವಿಶೇಷ. ಶ್ರಾವಣ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ. ಜತೆಗೆ, ನಾನಾ ಭಾಗಗಳ ಭಕ್ತರಿಂದ ವಿಶೇಷ ಪೂಜೆಗಳನ್ನು ಶ್ರಾವಣದ ವಿಶೇಷವಾಗಿ ನೆರವೇರಿಸಲಾಗುತ್ತದೆ.
ಬೆಳಗ್ಗೆ ದೇವಸ್ಥಾನದಲ್ಲಿನೆರವೇರುವ ಅಭಿಷೇಕ, ವಿಶೇಷಾಲಂಕಾರದ ಬಳಿಕ ಪ್ರಾಕಾರೋತ್ಸವದೊಂದಿಗೆ ಘಾಟಿ ಕ್ಷೇತ್ರದ ಪ್ರಮುಖ ರಾಜಬೀದಿಗಳಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ಮೆರವಣಿಗೆ ನಡೆಯಲಿದೆ ಎಂದು ದೇಗುಲದ ಪ್ರಧಾನ ಅರ್ಚಕ ಶ್ರೀನಿಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಆಕರ್ಷಣೆ ಎಂದರೆ ಇಲ್ಲಿನ ನಾಗರಕಲ್ಲುಗಳು. ಸುಮಾರು 10ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳನ್ನು ಭಕ್ತರು ದೇವಸ್ಥಾನದ ಸುತ್ತ ಮುತ್ತ ಪ್ರತಿಷ್ಠಾಪಿಸಿದ್ದು, ನಾಗರಪಂಚಮಿಯಂದು ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಇದೆ.
ಯಾವುದೇ ದೇವಸ್ಥಾನಕ್ಕೆ ಹೋದರೆ ಕೇವಲ ಒಂದು ಮೂರ್ತಿಯನ್ನು ಕಣ್ತುಂಬಿಕೊಳ್ಳುತ್ತೇವೆ. ಆದರೆ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಕ್ಷೇತ್ರದ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಮುಂಭಾಗ ಸುಬ್ರಹ್ಮಣ್ಯ ಸ್ವಾಮಿ, ಹಿಂಭಾಗದಲ್ಲಿ ನರಸಿಂಹಸ್ವಾಮಿಯ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು. ವಿಶೇಷ ದಿನಗಳಲ್ಲಿ ಈ ಮೂರ್ತಿಗೆ ಮಾಡಲಾಗುವ ವಿಶೇಷ ಅಲಂಕಾರಗಳು ನೆರೆದ ಭಕ್ತರ ಕಣ್ಮನ ಸೆಳೆಯುವುದು ವಿಶೇಷ. ಶ್ರಾವಣ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜಾಕಾರ್ಯಗಳನ್ನು ಆಯೋಜನೆ ಮಾಡಲಾಗಿದೆ. ಜತೆಗೆ, ನಾನಾ ಭಾಗಗಳ ಭಕ್ತರಿಂದ ವಿಶೇಷ ಪೂಜೆಗಳನ್ನು ಶ್ರಾವಣದ ವಿಶೇಷವಾಗಿ ನೆರವೇರಿಸಲಾಗುತ್ತದೆ.