ಆ್ಯಪ್ನಗರ

ಮುಜರಾಯಿ ಆದೇಶಕ್ಕಿಲ್ಲ ಕಿಮ್ಮತ್ತು ಮುಂದುವರಿದ ರಥ ಅವಘಡ

ರಥೋತ್ಸವಕ್ಕೆ ಮುನ್ನ ತೇರಿನ ಗುಣಮಟ್ಟ ಪರೀಕ್ಷೆಯನ್ನು ಧಾರ್ಮಿಕ ದತ್ತಿ ಇಲಾಖೆಯು ಕಡ್ಡಾಯಗೊಳಿಸಿದ್ದರೂ ಕೆಲವು ದೇಗುಲಗಳಲ್ಲಿ ಅದನ್ನು ಪಾಲಿಸಲಾಗುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

Vijaya Karnataka 30 Mar 2019, 5:00 am
ಕನಕಗಿರಿ: ರಥೋತ್ಸವಕ್ಕೆ ಮುನ್ನ ತೇರಿನ ಗುಣಮಟ್ಟ ಪರೀಕ್ಷೆಯನ್ನು ಧಾರ್ಮಿಕ ದತ್ತಿ ಇಲಾಖೆಯು ಕಡ್ಡಾಯಗೊಳಿಸಿದ್ದರೂ ಕೆಲವು ದೇಗುಲಗಳಲ್ಲಿ ಅದನ್ನು ಪಾಲಿಸಲಾಗುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೊಪ್ಪಳದ ಐತಿಹಾಸಿಕ ಕನಕಾಚಲಪತಿ ಲಕ್ಷ್ಮೇನರಸಿಂಹ ರಥದ ಇರಿಸು ಮುರಿದ ಕಾರಣ ರಥೋತ್ಸವ ಪಾದಗಟ್ಟೆ ತಲುಪದೇ ಅರ್ಧದಲ್ಲಿ ಸ್ಥಗಿತಗೊಂಡ ಘಟನೆ ಬುಧವಾರ ನಡೆದಿದೆ. ರಥೋತ್ಸವ ಆರಂಭವಾಗಿ ರಾಜಬೀದಿಯಲ್ಲಿ ಪಾದಗಟ್ಟೆಗೆ ಸಾಗುವಾಗ 20 ನಿಮಿಷದಲ್ಲೇ ಏಕಾಏಕಿ ಎಡಭಾಗದ ಇರಿಸು ಮುರಿಯಿತು. ರಥದ ಇರಿಸು 8 ರಿಂದ 10 ವರ್ಷ ಹಳೆಯದ್ದು. ದೇವಸ್ಥಾನದ ಆಡಳಿತ ಮಂಡಳಿ ಇರಿಸು ಬದಲಾವಣೆ ಮಾಡದೇ ನಿರ್ಲಕ್ಷ್ಯ ತೋರಿದ್ದು, ಘಟನೆಗೆ ಕಾರಣ ಎಂದು ದೂರಲಾಗಿದೆ.
Vijaya Karnataka Web KPL-KPL27KNK002


ರಥೋತ್ಸವದ ಸಂದರ್ಭಗಳಲ್ಲಿ ಸಂಭಾವ್ಯ ಅವಘಡ ತಪ್ಪಿಸಲು ತೇರಿನ ಗುಣಮಟ್ಟ ಪರೀಕ್ಷೆಯನ್ನು ಧಾರ್ಮಿಕ ದತ್ತಿ ಇಲಾಖೆ ಕಡ್ಡಾಯಗೊಳಿಸಿದೆ. ಈ ಕುರಿತು ಬೋಧಿವೃಕ್ಷ ಮಾ. 9-15ರ ಸಂಚಿಕೆಯಲ್ಲಿ ವಿಸ್ತೃತ ವರದಿ ಪ್ರಕಟಿಸಿತ್ತು.

ಈಗ ಅವಘಡ ಸಂಭವಿಸಿದ ಕನಕಗಿರಿ ರಥವು ಬಹಳ ವರ್ಷ ಹಳೆಯದ್ದಾಗಿದ್ದು, ಎರಡು ವರ್ಷಗಳಿಂದ ರಥೋತ್ಸವದ ವೇಳೆ ಸಮಸ್ಯೆ ಕಾಣಿಸಿಕೊಂಡಿತ್ತು. ಆದರೂ ಈ ಬಗ್ಗೆ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅವಘಡ ಸುಳಿವು ಇದ್ದದರಿಂದಲೇ ದೇವಾಲಯದ ಆಡಳಿತ ಮಂಡಳಿ ಅದಕ್ಕೆ ವಿಮೆ ಮಾಡಿಸಿತ್ತು ಎಂದು ಹೇಳಲಾಗಿದೆ. ಇಷ್ಟೆಲ್ಲಾ ಸುಳಿವು ಇದ್ದರೂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೋಧಿವೃಕ್ಷ ಪ್ರಕಟಿಸಿದ ವರದಿಯಲ್ಲಿ ಇದರಲ್ಲಿ ರಥೋತ್ಸವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಧಾರ್ಮಿಕ ದತ್ತಿ ಇಲಾಖೆಯ ಸುತ್ತೋಲೆಯ ವಿವರ ನೀಡಲಾಗಿತ್ತು. ಸುತ್ತೋಲೆ ಪ್ರಕಾರ, ರಥೋತ್ಸವ ನಡೆಯುವ ದೇವಾಲಯಗಳಲ್ಲಿ ರಥ ಎಳೆಯುವ ಸಾಕಷ್ಟು ಮುಂಚಿತವಾಗಿ ರಥವು ಸುವ್ಯವಸ್ಥೆಯಲ್ಲಿ ಇದೆಯೇ ಎಂದು ಪರೀಕ್ಷಿಸಿ ದೃಢಪಡಿಸಿಕೊಳ್ಳಬೇಕು. ಜಾತ್ರಾ ಸಮಯದಲ್ಲಿ ರಸ್ತೆಗಳ ರಿಪೇರಿ ಮಾಡಿಸುವುದರ ಬಗ್ಗೆ ಸ್ಥಳೀಯ ಶಾಸಕರ, ಅಧಿಧಿಕಾರಿಗಳ ನೆರವಿನಿಂದ ತುರ್ತು ಕ್ರಮ ತಗೆದುಕೊಳ್ಳಬೇಕು. ರಥೋತ್ಸವ ನೆರವೇರುವಾಗ ಜನರ ನೂಕು ನುಗ್ಗಲಿಗೆ ರಥದ ಗಾಲಿಗಳಿಗೆ ಭಕ್ತರು ಸಿಲುಕಿಕೊಳ್ಳುತ್ತಿದ್ದಾರೆ. ಹಾಗಾಗಿ ಸಾಕಷ್ಟು ಪೊಲೀಸ್‌ ಭದ್ರತೆ ನಿಯೋಜನೆ ಆಗುವಂತೆ ನೋಡಿಕೊಳ್ಳಬೇಕು. ಹೀಗೆ ಅನೇಕ ಅಂಶಗಳು ಸುತ್ತೋಲೆಯಲ್ಲಿವೆ.

ಈ ರೀತಿ ದೇವಾಲಯದ ಆಡಳಿತ ಮಂಡಳಿ ಸೇರಿದಂತೆ ಸಂಬಂಧಪಟ್ಟವರ ನಿರ್ಲಕ್ಷ್ಯ ಮುಂದುವರಿದಿದೆ. ಇದರಿಂದ ಮತ್ತೆ ರಥೋತ್ಸವ ಅವಘಡಗಳು ಸಂಭವಿಸುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ