ಆ್ಯಪ್ನಗರ

ಪಾಲ್‌ ಪಾಯಸಂ ಆಗುತ್ತಾ ಗೋಪಾಲ ಕಷಾಯ?

ಅಂಬಲಪುಜ್ಜ ಕೃಷ್ಣ ದೇವಾಲಯದ ಪ್ರಸಿದ್ಧ ನೈವೇದ್ಯ 'ಪಾಲ್‌ ಪಾಯಸ' ಇನ್ನು ಮುಂದೆ ಗೋಪಾಲ ಕಷಾಯ ಆಗಲಿದೆ ಎಂದು ಟ್ರಾವಂಕ್ಕೂರು ದೇವಸ್ವಂ ಬೋರ್ಡ್‌ ಅಧ್ಯಕ್ಷ ಎ...

Vijaya Karnataka 9 Nov 2019, 12:00 am
ಪಟ್ಟಾನಂತಿಟ್ಟ: ಅಂಬಲಪುಜ್ಜ ಕೃಷ್ಣ ದೇವಾಲಯದ ಪ್ರಸಿದ್ಧ ನೈವೇದ್ಯ 'ಪಾಲ್‌ ಪಾಯಸ' ಇನ್ನು ಮುಂದೆ ಗೋಪಾಲ ಕಷಾಯ ಆಗಲಿದೆ ಎಂದು ಟ್ರಾವಂಕ್ಕೂರು ದೇವಸ್ವಂ ಬೋರ್ಡ್‌ ಅಧ್ಯಕ್ಷ ಎ. ಪದ್ಮಕುಮಾರ್‌ ತಿಳಿಸಿದ್ದಾರೆ. ಪಾರಂಪರಿಕವಾಗಿ ಮೊದಲು ಪಾಲ್‌ ಪಾಯಸಕ್ಕೆ ಗೋಪಾಲ ಕಷಾಯವೆಂದೇ ಕರೆಯ ಲಾಗುತಿತ್ತು. ಹಾಗಾಗಿ ಇನ್ನು ಮುಂದೆ ಅದೇ ಹೆಸರಿನಲ್ಲಿ ಪ್ರಸಾದವನ್ನು ಮಾರಾಟ ಮಾಡಲಾಗುವುದು. ಪ್ರಸಾದಕ್ಕೆ ಮರು ನಾಮಕರಣ ಮೂಲಕ ಪೇಟೆಂಚ್‌ ಪಡೆಯಲು ಸುಲಭವಾಗುತ್ತದೆ.
Vijaya Karnataka Web bodhi logo

ಸ್ಥಳೀಯ ಕೆಲವು ಬೇಕರಿಗಳಲ್ಲಿ ಅಂಬಲಪುಜ್ಜ ಪಾಲ… ಪಾಯಸಂ ಹೆಸರಿನಲ್ಲಿಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿಗೋಪಾಲ ಕಷಾಯ ಹೆಸರಿನಲ್ಲಿಪೇಟೆಂಟ್‌ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಪದ್ಮಕುಮಾರ್‌ ವಿವರಿಸಿದರು.
ಟಿಡಿಬಿ ಸದ್ಯದಲ್ಲೇ ಅಂಬಲಪುಜ್ಜದ ಪಾಲ್‌ ಪಾಯಸಂ, ತಿರುವರಪ್ಪು ಉಷಾಪ್ಪಾಯಸಂ, ಕೊಟ್ಟಾರಕ್ಕರ ಉಣ್ಣಿಯಪ್ಪಂ, ಶಬರಿಮಲ ಅಪ್ಪಂ ಮತ್ತು ಅರವಣಕ್ಕೆ ಪೇಟೆಂಟ್‌ ತೆಗೆದುಕೊಳ್ಳಲಿದೆ. ಪ್ರಸಾದದ ಹೆಸರನ್ನು ಬದಲಿಸುವ ಮೂಲಕ ಟಿಡಿಬಿ ಪೂರ್ವ ಕಮ್ಯೂನಿಸ್ಟ್‌ ನಾಯಕ ಎ.ಕೆ. ಗೋಪಾಲನ್‌ ಹೆಸರನ್ನು ನೆನಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಕೇರಳ ಪಿಸಿಸಿಯ ಮಾಜಿ ಅಧ್ಯಕ್ಷ ಎಂ. ಎಂ.ಹಸನ್‌ ದೂರಿದ್ದಾರೆ. ಇತಿಹಾಸಕಾರರು ಹೆಸರು ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ