ಆ್ಯಪ್ನಗರ

ಕುಕ್ಕೆ ನೂತನ ದೇಗುಲಕ್ಕೆ ವಿವಿಧ ಪೂಜೆ

ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿತು.

Vijaya Karnataka 11 Nov 2019, 4:31 pm
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಉದ್ಯಮಿ ಗಳಾದ ಎನ್‌. ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್‌ ಶೆಟ್ಟಿ ಕಡಬ ಅವರು ಸುಮಾರು 2.50 ಕೋಟಿ ವೆಚ್ಚದಲ್ಲಿ ಕಾಣಿಕೆಯಾಗಿ ಅರ್ಪಿಸಿದ ನೂತನ ಬ್ರಹ್ಮರಥಕ್ಕೆ ಕಲಶಾಭಿಷೇಕದ ವಿಧಿವಿಧಾನಗಳು ಶನಿವಾರ ಆರಂಭವಾಯಿತು.
Vijaya Karnataka Web ratha

ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿತು. ಆರಂಭದಲ್ಲಿ ರಥ ಶುದ್ಧಿ ಕಾರ್ಯ ನೆರವೇರಿಸಲಾಯಿತು. ಬಳಿಕ ರಥದ ಶಿಲ್ಪಿ ರಾಜಗೋಪಾಲಾಚಾರ್ಯ ಅವರಿಗೆ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ವಸ್ತ್ರ ಕಾಣಿಕೆ ನೀಡಿದರು. ಬಳಿಕ ದಾನಿಗಳು ಪ್ರಧಾನ ಅರ್ಚಕರಿಗೆ ತಾಂಬೂಲ ನೀಡಿದರು. ನಂತರ ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಿಕ್ಪಾಲ ಬಲಿ ನೆರವೇರಿತು.
ಉದ್ಯಮಿ ಅಜಿತ್‌ ಶೆಟ್ಟಿ ಕಡಬ, ಮುತ್ತಪ್ಪ ರೈ ಅವರ ಪುತ್ರ ವಿಕ್ಕಿ ರೈ, ಸಹೋದರ ಕರುಣಾಕರ ರೈ, ರಥದ ಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯ ಮಾಧವ ಡಿ., ದೇವಳದ ಶಿಷ್ಟಾಚಾರ ಅಧಿಕಾರಿ ಕೆ.ಎಂ.ಗೋಪಿನಾಥ್‌ ನಂಬೀಶ, ದಾನಿ ಅಜಿತ್‌ ಶೆಟ್ಟಿ ಅವರ ತಾಯಿ ಲೀಲಾ ಎಸ್‌.ಶೆಟ್ಟಿ, ಸಹೋದರಿ ಅಮಿತಾ ಚಂದ್ರಹಾಸ ರೈ ಮತ್ತು ಭಕ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ