ಆ್ಯಪ್ನಗರ

ತಿರುಮಲ ಅಡುಗೆ ಕೋಣೆಗೆ ಸುರಕ್ಷಾ ಕವಚ

ತಿರುಮಲ ತಿರುಪತಿಯಲ್ಲಿ ಪ್ರಸಾದ ತಯಾರಿಕಾ ಅಡುಗೆ ಕೋಣೆಯನ್ನು ಸುಸಜ್ಜಿತಗೊಳಿಸಲಾಗುತ್ತಿದ್ದು ದುರಂತ ತಡೆಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Vijaya Karnataka 13 Dec 2019, 4:25 pm
ತಿರುಪತಿ : ತಿರುಮಲ ತಿರುಪತಿ ದೇವರ ದರ್ಶನಕ್ಕೆ ಪ್ರತಿನಿತ್ಯ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ಕೊಡುತ್ತಾರೆ. ಭಕ್ತರ ಸೌಕರ್ಯಕ್ಕಾಗಿ ಪ್ರಸಾದ ತಯಾರಿಸಲು ಪ್ರತ್ಯೇಕ ಅಡುಗೆ ಕೋಣೆಯಿದೆ. ಇದೀಗ ಪ್ರಸಾದ ತಯಾರಿಕಾ ಅಡುಗೆ ಕೋಣೆಯನ್ನು ಸುಸಜ್ಜಿತಗೊಳಿಸಲಾಗುತ್ತಿದ್ದು ದುರಂತ ತಡೆಗೆ ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
Vijaya Karnataka Web ttd kitchen


ಇತ್ತೀಚೆಗೆ ತಿರುಮಲ ತಿರುಪತಿ ದೇವಸ್ಥಾನ ಸಮೀಪದ ಹೆಚ್ಚುವರಿ ಪ್ರಸಾದ ತಯಾರಿಕಾ ಕೇಂದ್ರದಲ್ಲಿ ತುಪ್ಪ ನೆಲಕ್ಕೆ ಚೆಲ್ಲಿದ ಕಾರಣ ಬೆಂಕಿ ದುರಂತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಸುರಕ್ಷಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಟಿಟಿಡಿಯ ಹೆಚ್ಚುವರಿ ಆಯುಕ್ತ ಎ.ವಿ.ಧರ್ಮ ರೆಡ್ಡಿ ಹೇಳಿದ್ದಾರೆ. ಅವರು ಈ ಸಂಬಂಧ ಟಿಟಿಡಿಯ ಹಿರಿಯ ಆಡಳಿತಾಧಿಕಾರಿಗಳ ಸಭೆ ನಡೆಸಿದರು. ನಂತರ ದುರಂತ ಸಂಭವಿಸಿದ ಬೂಂದಿ ಪೋಟುಗೆ ಭೇಟಿ ನೀಡಿದರು.

ಪ್ರಸಾದ ತಯಾರಿಕೆಯಲ್ಲಿ ನೂತನ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಅಡುಗೆ ಕೋಣೆಯೊಳಗೆ ಪ್ರವೇಶಿಸುವ ಸಿಬ್ಬಂದಿಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಹಾಕಲಾಗಿದೆ. ಅವುಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸೂಚಿಸಲಾಗಿದೆ. ಬಾಣಸಿಗರ ಸುರಕ್ಷತೆಯ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಬಾಣಸಿಗರಿಗೆ ಕೆಲವೊಂದು ಸುರಕ್ಷಾ ಕ್ರಮಗಳ ಬಗ್ಗೆ ಪಾಠ ಹೇಳಿಕೊಡಲಾಗಿದೆ ಎಂದು ಟಿಟಿಡಿಯ ಹೆಚ್ಚುವರಿ ಆಯುಕ್ತ ಎ.ವಿ.ಧರ್ಮರಾಜ್‌ ತಿಳಿಸಿದರು.

ತಿರುಮಲ ತಿರುಪತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್‌ ಬ್ಯಾನ್‌ಗೆ ಟಿಟಿಡಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಜನವರಿ 31, 2020ರ ವೇಳೆಗೆ ತಿರುಮಲ ತಿರುಪತಿ ಪ್ಲಾಸ್ಟಿಕ್‌ ಮುಕ್ತ ಕ್ಷೇತ್ರವಾಗಲಿದೆ. ಈಗಾಗಲೇ ತಿರುಮಲೆಯಲ್ಲಿ ಯಾತ್ರಾರ್ಥಿಗಳು ತೆಗೆದುಕೊಂಡು ಬರುತ್ತಿರುವ ಕುಡಿಯುವ ನೀರಿನ ಬಾಟಲಿಗೆ ನಿಷೇಧ ಹೇರಲಾಗಿದೆ. ಸದ್ಯದಲ್ಲೇ ಟಿಟಿಡಿ 1500 ಕುಡಿಯುವ ನೀರು ವಿತರಣಾ ಘಟಕಗಳನ್ನು ತಿರುಮಲೆ ಬೆಟ್ಟದ ಮೇಲೆ ಸ್ಥಾಪಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ