ಆ್ಯಪ್ನಗರ

ರಂಭಾಪುರಿ ಜಗದ್ಗುರುಗಳ ತಿಂಗಳ ಪ್ರವಾಸ

ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಡಿಸೆಂಬರ್‌ ತಿಂಗಳ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ.

Vijaya Karnataka 30 Nov 2019, 12:00 am
ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀಮದ್‌ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಡಿಸೆಂಬರ್‌ ತಿಂಗಳ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್‌. ಬಾಳನಗೌಡ್ರ ತಿಳಿಸಿದ್ದಾರೆ. ಡಿ.3ರಂದು ಹುಬ್ಬಳ್ಳಿಯಲ್ಲಿದೀಪೋತ್ಸವ ಧರ್ಮ ಸಮಾರಂಭ, 4ರಂದು ಜಮಖಂಡಿ ತಾಲೂಕ ಮಧುರಖಂಡಿ ಗ್ರಾಮದಲ್ಲಿ ಶ್ರೀಸ್ವಾಮಿ ಸಂಗಮೇಶ್ವರ ಅವರ 6ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭ, 6ರಂದು ಇಂಡಿ ತಾಲೂಕು ಆಲಮೇಲದಲ್ಲಿಶ್ರೀ ಚಂದ್ರಶೇಖರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರದ ಧರ್ಮ ಸಮಾರಂಭ,7ರಂದು ಚಡಚಣ ತಾಲೂಕು ಹತ್ತಳ್ಳಿಯಲ್ಲಿಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಳಸಾರೋಹಣ,8ರಂದು ಜಮಖಂಡಿ ತಾಲೂಕು ಬನಹಟ್ಟಿಯಲ್ಲಿಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು.
Vijaya Karnataka Web bodhi logo


12ರಂದು ಬಾಳೆಹೊನ್ನೂರು ಶ್ರೀ ಪೀಠದಲ್ಲಿಪೌರ್ಣಿಮೆಯ ನಿಮಿತ್ತ ಭಕ್ತಾದಿಗಳಿಗೆ ದರ್ಶನ ಆಶೀರ್ವಾದ ನೀಡುವರು. 14ರಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದಲ್ಲಿಹೈಕೋರ್ಟ್‌ ನ್ಯಾಯಾಧೀಶರ ಮತ್ತು ವಕೀಲರ ಕಾರ್ಯಾಗಾರ ಉದ್ಘಾಟಿಸುವರು.

19ರಂದು ಗದಗದಲ್ಲಿ ಡಾ. ಜಚನಿ ರಾಜ್ಯ ಮಟ್ಟದ ವಿಚಾರ ಸಂಕಿರಣ, 20ರಂದು ಸಿಂದಗಿ ತಾಲೂಕು ಮಾಗಣಗೇರಿಯಲ್ಲಿ ಜನ ಜಾಗೃತಿ ಜಾತ್ರಾ ಮಹೋತ್ಸವ ಸಮಾರಂಭ, 23ರಂದು ರಾಮದುರ್ಗ ತಾಲೂಕು ಕಟಕೋಳದಲ್ಲಿಶ್ರೀ ಚಂದರಗಿ ವೀರಭದ್ರ ಶಿವಾಚಾರ್ಯರ ಷಷ್ಟತ್ರ್ಯಬ್ಧಿ ಸಮಾರಂಭ, 24ರಂದು ಹೊಸದುರ್ಗ ತಾಲೂಕು ಕಂಗುವಳ್ಳಿಯಲ್ಲಿಶ್ರೀ ಮಾಹೇಶ್ವರ ಜಾತ್ರೆ, 25ರಂದು ಹರಪನಹಳ್ಳಿಯಲ್ಲಿಲಿಂ. ಚಂದ್ರಮೌಳೀಶ್ವರ ಶ್ರೀಗಳ 5ನೇ ವರ್ಷದ ಪುಣ್ಯ ಸ್ಮರಣೋತ್ಸವ ಸಮಾರಂಭ, 27ರಂದು ಗೋಕಾಕ್‌ ತಾಲೂಕು ಬೆಟಗೇರಿಯಲ್ಲಿಧರ್ಮ ಜಾಗೃತಿ ಸಮಾರಂಭ, 29ರಂದು ಹರಿಹರದಲ್ಲಿಲಿಂ. ಶ್ರೀ ತೋಟಪ್ಪನವರ ಆರಾಧನಾ ಸಮಾರಂಭ, 31ರಂದು ಬಸವಕಲ್ಯಾಣ ತಾಲೂಕು ಮುತ್ತಂಗಿಯಲ್ಲಿಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ