ಆ್ಯಪ್ನಗರ

ಸಾಣೇಹಳ್ಳಿಯಲ್ಲಿ ನ. 2ರಿಂದ 7ರವರೆಗೆ ನಾಟಕೋತ್ಸವ

ಈ ಬಾರಿ ನ. 2ರಿಂದ 7ರವರೆಗೆ 6 ದಿನಗಳ ಕಾಲ ನಾಟಕೊತ್ಸವವನ್ನು ಆಯೋಜಿಸಲಾಗುವುದು ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧಿಪತಿಗಳಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Vijaya Karnataka 11 Oct 2019, 3:01 pm
ಅಜ್ಜಂಪುರ:ಈ ಬಾರಿ ನ. 2ರಿಂದ 7ರವರೆಗೆ 6 ದಿನಗಳ ಕಾಲ ನಾಟಕೊತ್ಸವವನ್ನು ಆಯೋಜಿಸಲಾಗುವುದು ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧಿಪತಿಗಳಾದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Vijaya Karnataka Web sanehalli


ಪಟ್ಟಣ ಸಮೀಪದ ಸಾಣೇಹಳ್ಳಿಯ ಬಸವ ಗುರು ಮಹಾಮನೆಯಲ್ಲಿಆಯೋಜನೆಗೊಂಡಿದ್ದ 2019ರ ರಾಷ್ಟ್ರೀಯ ನಾಟಕೋತ್ಸವದ ಪೂರ್ವ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿದ ಅವರು ಮಾತನಾಡಿದರು.

ತರಳಬಾಳು 20ನೇ ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಮಾತಿಗಿಂತ ನಾಟಕ ಪರಿಣಾಮಕಾರಿ ಎಂದು ಅರಿತಿದ್ದರು. ಈ ಕಾರಣಕ್ಕಾಗಿಯೇ ಸ್ವಾಮೀಜಿಯೊಬ್ಬರು ಮೊಟ್ಟಮೊದಲ ಬಾರಿಗೆ ರಂಗಭೂಮಿಯನ್ನು ಧಾರ್ಮಿಕ ಪ್ರಚಾರಕ್ಕೆ ಸಮರ್ಥವಾಗಿ ಬಳಸಿಕೊಂಡ ಹೆಗ್ಗಳಿಕೆಯನ್ನು ಪಡೆದುಕೊಂಡರು. ಸಿರಿಗೆರೆಯಲ್ಲಿತರಳಬಾಳು ಕಲಾಸಂಘವನ್ನು ಸ್ಥಾಪಿಸಿದರು. ತಾವೇ ನಾಟಕಕಾರರಾಗಿ ಮರಣವೇ ಮಹಾನವಮಿ, ಶರಣಸತಿ-ಲಿಂಗಪತಿ, ವಿಶ್ವಬಂಧು ಮರುಳಸಿದ್ಧ ಮುಂತಾದ ನಾಟಕಗಳನ್ನು ರಚಿಸಿದರು. ನಿರ್ದೇಶಕರಾಗಿ, ಸಂಘಟಕರಾಗಿ ಅಷ್ಟೇ ಅಲ್ಲಸಂದರ್ಭ ಬಂದಾಗ ತಾವೇ ಕಲಾವಿದರಿಗೆ ಅಭಿನಯಿಸಿ ತೋರಿಸುತ್ತಿದ್ದರು. ಅವರ ನಿರ್ದೇಶನದಲ್ಲಿನಾವು ಸಹ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿದ್ದುಂಟು. ಆ ಕಾಲದಲ್ಲಿಯೇ ನಾಟಕಗಳನ್ನು ಮುಂಬಯಿ, ದೆಹಲಿ, ಕೋಲ್ಕೊತಾ ಮೊದಲಾದೆಡೆ ನಾಟಕಗಳ ಪ್ರದರ್ಶನಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದರು.

ಶಿವಕುಮಾರ ಶ್ರೀಗಳ ಆ ಪರಂಪರೆಯೆಲ್ಲೇ ಬೆಳೆದು ಬಂದ ನಾವು ಸಾಣೇಹಳ್ಳಿಯಲ್ಲಿಅವರ ಹೆಸರಿನಲ್ಲಿಯೇ, ಅವರು ಬದುಕಿರುವಾಗಲೇ ಅಂದರೆ 1987ರಲ್ಲಿಶಿವಕುಮಾರ ಕಲಾಸಂಘ ಸ್ಥಾಪಿಸಿದೆವು. ಆರಂಭದಲ್ಲಿಗ್ರಾಮಸ್ಥರು, ನೌಕರರು, ವಿದ್ಯಾರ್ಥಿಗಳು ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಮುಂದೆ 1997ರಲ್ಲಿಶಿವಸಂಚಾರ ಆರಂಭವಾಯಿತು. 2008ರಲ್ಲಿಶಿವಕುಮಾರ ರಂಗ ಪ್ರಯೋಗಶಾಲೆಯನ್ನು ಆರಂಭಿಸಿದೆವು. ಶಿವಸಂಚಾರ ನಾಟಕಗಳ ಮೊದಲ ಪ್ರದರ್ಶನದ ಸಂದರ್ಭದಲ್ಲಿಯೇ ನಾಟಕೋತ್ಸವವನ್ನೂ ಆಯೋಜಿಸುತ್ತಾ ಬರಲಾಗಿದೆ. ಈ ಬಾರಿಯ ನಾಟಕೋತ್ಸವ 23ನೆಯದು. ನಾಟಕೋತ್ಸವದಲ್ಲಿಕನ್ನಡದ ಉತ್ತಮ ನಾಟಕಗಳಲ್ಲದೆ ಹಿಂದೆ ಬಾಂಗ್ಲಾದೇಶದ ನಾಟಕವೂ ಇಲ್ಲಿಪ್ರದರ್ಶನಗೊಂಡಿದೆ. ಅನೇಕ ಪ್ರಜ್ಞಾವಂತರು, ಸ್ವಾಮೀಜಿಗಳು, ರಾಜಕಾರಣಿಗಳು ತಮ್ಮ ವಿಚಾರಗಳನ್ನು ಈ ವೇದಿಕೆಯ ಮೇಲೆ ಹಂಚಿಕೊಂಡಿದ್ದಾರೆ. ಪ್ರತಿದಿನವೂ ಹತ್ತಾರು ಸಾವಿರ ಜನ ಪ್ರೇಕ್ಷಕರು ಇವೆಲ್ಲವನ್ನೂ ಅತ್ಯಂತ ಗಂಭೀರವಾಗಿ ವೀಕ್ಷಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಸುಮಾರು 30 ಲಕ್ಷ ರೂ.ಗಳಷ್ಟು ಹಣ ಖರ್ಚಾಗುವುದು. ಇದಕ್ಕೆ ಮಠದಿಂದ ಒಂದು ನಯಾ ಪೈಸೆಯನ್ನೂ ಹಾಕಿಲ್ಲ. ಕಲಾಭಿಮಾನಿಗಳು, ಮಠದ ಭಕ್ತರು, ದಾಸೋಹಿಗಳು ತಾವೇ ಅರಿತು ಸಹಕಾರ ನೀಡುತ್ತಾ ಬಂದಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಕೆಲ ಕಾರಣಗಳಿಂದ ಈ ವರ್ಷದ ನಾಟಕೋತ್ಸವವನ್ನು ಮಾಡಬೇಕೇ, ಬೇಡವೇ ಎನ್ನವ ಸಂದಿಗ್ಧತೆ ನಮ್ಮನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿಸಮಾಜ ಬಾಂಧವರ, ಕಲಾಭಿಮಾನಿಗಳ, ಕಾರ್ಯಕರ್ತರ ಅಭಿಪ್ರಾಯ ಕೇಳುವ ಸಲುವಾಗಿ ಈ ಸಭೆ ಕರೆಯಲಾಗಿದೆ. ಎಲ್ಲರೂ ಯಾವುದೇ ಅಂಜಿಕೆಯಿಲ್ಲದೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು ಎಂದರು.


ನಾಟಕೋತ್ಸವ ನಿಲ್ಲಿಸುವ ಪ್ರಶ್ನೆಯೇ ಇಲ್ಲ

ಎಲ್ಲರ ಅಭಿಪ್ರಾಯಗಳನ್ನು ಕೇಳಿದ ಮೇಲೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮತ್ತೆ ಕಲ್ಯಾಣ ಕಾರ್ಯಕ್ರಮವನ್ನು ಏರ್ಪಡಿಸಿದ್ದ ಎಲ್ಲಮೂವತ್ತು ಜಿಲ್ಲೆಗಳಲ್ಲೂಜಾತಿ, ಮತ, ಲಿಂಗಭೇದವಿಲ್ಲದೆ ಎಲ್ಲರೂ ಸಹಕರಿಸಿದ್ದಾರೆ. ಇಂದು ನೀವು ಆಡಿದ ಮಾತುಗಳನ್ನು ಕೇಳಿ ನಾಟಕೋತ್ಸವವನ್ನು ಎಂದೂ ನಿಲ್ಲಿಸುವ ಕುರಿತು ಯೋಚಿಸಲೇಬಾರದು ಎಂದು ಎಚ್ಚರಿಕೆ ಕೊಟ್ಟಂತೆ ಭಾಸವಾಗುತ್ತಿದೆ. ನಾಟಕೋತ್ಸವ ನಡೆಸುವುದು ನಮಗಾಗಿ ಅಲ್ಲ; ಸಮಾಜಕ್ಕಾಗಿ. ಹೀಗಾಗಿ ನಾವು ಕೂಡ ಹಿಂದೆ ಸರಿಯೋಲ್ಲ. ನ. 2ರಿಂದ 7ರವರೆಗೆ 6 ದಿನಗಳ ಕಾಲ ನಾಟಕೊತ್ಸವವನ್ನು ಆಯೋಜಿಸಲಾಗುವುದು ಎಂದರು.

ಅಜ್ಜಂಪುರ ಸಮೀಪದ ಸಾಣೇಹಳ್ಳಿಯ ಬಸವ ಗುರು ಮಹಾಮನೆಯಲ್ಲಿಆಯೋಜನೆಗೊಂಡಿದ್ದ 2019ರ ರಾಷ್ಟ್ರೀಯ ನಾಟಕೋತ್ಸವದ ಪೂರ್ವ ಸಿದ್ಧತಾ ಸಭೆಯ ಸಾನ್ನಿಧ್ಯವನ್ನು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ