ಆ್ಯಪ್ನಗರ

ಅಯ್ಯಪ್ಪ ದೇಗುಲ ಪ್ರವೇಶ: ಗರಿಗೆದರಿದ ವಿವಾದ

ಕೊಟ್ಟಾಯಂನ ಪಾಲ ಉಪಚುನಾವಣೆಯ ಕಾವೇರುತ್ತಿದ್ದಂತೆ ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶ ಕುರಿತ ವಿವಾದ ಮತ್ತೊಮ್ಮೆ ಗರಿಗೆದರಿದೆ.

Vijaya Karnataka 21 Sep 2019, 12:00 am
ಶಬರಿಮಲೆ : ಕೊಟ್ಟಾಯಂನ ಪಾಲ ಉಪಚುನಾವಣೆಯ ಕಾವೇರುತ್ತಿದ್ದಂತೆ ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶ ಕುರಿತ ವಿವಾದ ಮತ್ತೊಮ್ಮೆ ಗರಿಗೆದರಿದೆ. ಮಹಿಳೆಯರ ಪ್ರವೇಶಕ್ಕೆ ಅನುಮತಿ ಕೊಟ್ಟ ಕೇರಳ ಸರ್ಕಾರದ ನೀತಿಯನ್ನು ಟೀಕಿಸಲು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮುಂದಾಗಿದೆ.
Vijaya Karnataka Web shabariamla


ಪಾಲ ಉಪಚುನಾವಣೆ ಸೆಪ್ಟೆಂಬರ್‌ 23ಕ್ಕೆ ನಿಗದಿಯಾಗಿದೆ. ಕೇರಳ ಕಾಂಗ್ರೆಸ್‌ (ಎಂ)ನ ಹಿಡಿತದಲ್ಲಿದ್ದ ಕ್ಷೇತ್ರವೀಗ ಸಂಸ್ಥಾಪಕ ಅಧ್ಯಕ್ಷ ಮಣಿ ಅವರ ಪುತ್ರರ ನಡುವಿನ ಜಗಳದ ಲಾಭವನ್ನು ಪಡೆಯಲು ಎಲ್‌ಡಿಎಫ್‌ ಪ್ರಯತ್ನಿಸುತ್ತಿದೆ.

ಏತನ್ಮಧ್ಯೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಮಲೆಯಾಳಂನ ಕಾಣ್ಣಿ ಮಾಸದ ಪ್ರಯುಕ್ತ ಭಕ್ತರ ದರ್ಶನಕ್ಕೆ ಸೆಪ್ಟೆಂಬರ್‌ 21ರ ಸಂಜೆಯವರೆಗೂ ತೆರೆದಿರುತ್ತದೆ.

ಮೆಲ್ಸನಾಥಿ ವಿ.ಎನ್‌. ವಾಸುದೇವನ್‌ ನಂಬೂದಿರಿ ಕಳೆದ ಸೋಮವಾರ ಸಂಜೆ ಮೂಲದೇವರ ಗರ್ಭಗುಡಿಯ ಬಾಗಿಲನ್ನು ತೆರೆದಿದ್ದರು. ಅಯ್ಯಪ್ಪ ಸ್ವಾಮಿಯ ಬಾಗಿಲನ್ನು ತೆರೆಯುವ ಮುನ್ನ ಕೆಳಭಾಗದಲ್ಲಿರುವ ತಿರುಮುತ್ತೊಮ್‌ನಲ್ಲಿ ಆಝಿ ಸೇವೆಯನ್ನು ಮೆಲ್ಸಾಂತಿ ವಿ.ಎನ್‌. ವಾಸುದೇವನ್‌ ನಂಬೂದಿರಿ ಮಾಡಿದ್ದರು. ಇದೇ ಸ್ಥಳದಲ್ಲಿ ಯಾತ್ರಿಕರು ಇರುಮುಡಿಯನ್ನು ಅರ್ಪಿಸುವ ವಾಡಿಕೆಯಿದೆ. ಐದು ದಿನಗಳ ಪರ್ಯಂತ ಮೂಲದೇವರಿಗೆ ಪಡಿಪೂಜೆ, ಅಷ್ಟಾಭಿಷೇಕ, ಉದಯಾಸ್ತಮಾನ ಪೂಜೆ ಮತ್ತು ಪುಷ್ಪಾಭಿಷೇಕ ನಡೆಯುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ