ಶಬರಿಮಲೆ: ಓಣಂ ಹಬ್ಬದ ಹಿನ್ನೆಲೆಯಲ್ಲಿಸೆ. 9ರಿಂದ ನಾಲ್ಕು ದಿನಗಳ ಕಾಲ ಶ್ರೀ ಅಯ್ಯಪ್ಪ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. 9ರಂದು ಸಂಜೆ 5 ಗಂಟೆಗೆ ತಂತ್ರಿ ಮಹೇಶ್ ಮೋಹನವರ ಉಪಸ್ಥಿತಿಯಲ್ಲಿವಾಸುದೇವನ್ ನಂಬೂದರಿ ದೇವಾಲಯದ ಬಾಗಿಲು ತೆರೆಯಲಿದ್ದಾರೆ. ಅಂದು ಸಂಪ್ರದಾಯದಂತೆ ಯಾವುದೇ ರೀತಿಯ ಧಾರ್ಮಿಕ ವಿಧಿ ವಿಧಾನಗಳು ನಡೆಯುವುದಿಲ್ಲ. ಸೆ. 11ರಂದು ಓಣಂ ಉತ್ಸವ ನಡೆಯಲಿದೆ. ಅಂದು ಪವಿತ್ರ ದೀಪವನ್ನು ಬೆಳಗುವ ಮೂಲಕ ಉತ್ಸವ ಆರಂಭವಾಗಲಿದೆ. ಶ್ರೀಸ್ವಾಮಿಗೆ ಅಂದು ಬಾಳೆ ಎಲೆಯಲ್ಲಿನಾನಾ ರೀತಿಯ ಖಾದ್ಯ ಮತ್ತು ಸಿಹಿ ತಿಂಡಿಯನ್ನು ಸಮರ್ಪಿಸಲಾಗುತ್ತದೆ. ಬಳಿಕ ಅದನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಇದಲ್ಲದೆ ಕಲಶಾಭಿಷೇಕ ಮತ್ತು ಲಕ್ಷಾರ್ಚನೆ ಸೇವೆ ನಡೆಯಲಿದೆ.
ಅಯ್ಯಪ್ಪನ ಸನ್ನಿಧಿಯಲ್ಲಿಓಣಂ ಸಡಗರ
ಓಣಂ ಹಬ್ಬದ ಹಿನ್ನೆಲೆಯಲ್ಲಿಸೆ. 9ರಿಂದ ನಾಲ್ಕು ದಿನಗಳ ಕಾಲಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ
Vijaya Karnataka 7 Sep 2019, 5:00 am