ಆ್ಯಪ್ನಗರ

ಅಯ್ಯಪ್ಪನ ಸನ್ನಿಧಿಯಲ್ಲಿಓಣಂ ಸಡಗರ

ಓಣಂ ಹಬ್ಬದ ಹಿನ್ನೆಲೆಯಲ್ಲಿಸೆ. 9ರಿಂದ ನಾಲ್ಕು ದಿನಗಳ ಕಾಲಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ

Vijaya Karnataka 7 Sep 2019, 5:00 am
ಶಬರಿಮಲೆ: ಓಣಂ ಹಬ್ಬದ ಹಿನ್ನೆಲೆಯಲ್ಲಿಸೆ. 9ರಿಂದ ನಾಲ್ಕು ದಿನಗಳ ಕಾಲ ಶ್ರೀ ಅಯ್ಯಪ್ಪ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. 9ರಂದು ಸಂಜೆ 5 ಗಂಟೆಗೆ ತಂತ್ರಿ ಮಹೇಶ್‌ ಮೋಹನವರ ಉಪಸ್ಥಿತಿಯಲ್ಲಿವಾಸುದೇವನ್‌ ನಂಬೂದರಿ ದೇವಾಲಯದ ಬಾಗಿಲು ತೆರೆಯಲಿದ್ದಾರೆ. ಅಂದು ಸಂಪ್ರದಾಯದಂತೆ ಯಾವುದೇ ರೀತಿಯ ಧಾರ್ಮಿಕ ವಿಧಿ ವಿಧಾನಗಳು ನಡೆಯುವುದಿಲ್ಲ. ಸೆ. 11ರಂದು ಓಣಂ ಉತ್ಸವ ನಡೆಯಲಿದೆ. ಅಂದು ಪವಿತ್ರ ದೀಪವನ್ನು ಬೆಳಗುವ ಮೂಲಕ ಉತ್ಸವ ಆರಂಭವಾಗಲಿದೆ. ಶ್ರೀಸ್ವಾಮಿಗೆ ಅಂದು ಬಾಳೆ ಎಲೆಯಲ್ಲಿನಾನಾ ರೀತಿಯ ಖಾದ್ಯ ಮತ್ತು ಸಿಹಿ ತಿಂಡಿಯನ್ನು ಸಮರ್ಪಿಸಲಾಗುತ್ತದೆ. ಬಳಿಕ ಅದನ್ನು ಭಕ್ತರಿಗೆ ವಿತರಿಸಲಾಗುತ್ತದೆ. ಇದಲ್ಲದೆ ಕಲಶಾಭಿಷೇಕ ಮತ್ತು ಲಕ್ಷಾರ್ಚನೆ ಸೇವೆ ನಡೆಯಲಿದೆ.
Vijaya Karnataka Web Ayyappa

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ