ಆ್ಯಪ್ನಗರ

ಬೆಂಗಳೂರಿನಲ್ಲಿ ತಪ್ತ ಮುದ್ರಾಧಾರಣೆ

ಆಷಾಢ ಶುದ್ಧ ಏಕಾದಶಿಯಂದು ನಡೆಯುವ ತಪ್ತಮುದ್ರಾಧಾರಣೆಗೆ ಸಿಲಿಕಾನ್‌ ಸಿಟಿ ಸಜ್ಜಾಗಿದೆ. ಈ ಬಾರಿ ಎರಡು ದಿನ ಏಕಾದಶಿ ಬಂದಿರುವುದರಿಂದ ಜುಲೈ 12 ಮತ್ತು 13ರಂದು ತಪ್ತ ಮುದ್ರಾಧಾರಣೆ ನಡೆಯಲಿದೆ.

Vijaya Karnataka 6 Jul 2019, 12:00 am
ಬೆಂಗಳೂರು: ಆಷಾಢ ಶುದ್ಧ ಏಕಾದಶಿಯಂದು ನಡೆಯುವ ತಪ್ತ ಮುದ್ರಾಧಾರಣೆಗೆ ಸಿಲಿಕಾನ್‌ ಸಿಟಿ ಸಜ್ಜಾಗಿದೆ. ಈ ಬಾರಿ ಎರಡು ದಿನ ಏಕಾದಶಿ ಬಂದಿರುವುದರಿಂದ ಜುಲೈ 12 ಮತ್ತು 13ರಂದು ತಪ್ತಮುದ್ರಾಧಾರಣೆ ನಡೆಯಲಿದೆ.
Vijaya Karnataka Web tapta mudra dharane


ಬಸವನಗುಡಿಯ ಉತ್ತರಾದಿ ಮಠದಲ್ಲಿ ತಪ್ತಮುದ್ರಾಧಾರಣೆಗೆಂದೇ ಆನ್‌ಲೈನ್‌ ಬುಕ್ಕಿಂಗ್‌ ಆರಂಭವಾಗಿದೆ. ಜನಸಂದಣಿ ಇರುವುದರಿಂದ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಜುಲೈ 12 ಮತ್ತು 14ರಂದು ಬೆಳಗ್ಗೆಯಿಂದಲೇ ತಪ್ತ ಮುದ್ರಾಧಾರಣೆ ಹಾಕಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಜುಲೈ 13ರಂದು ಶ್ರೀ ಸುಬುಧೇಂದ್ರ ತೀರ್ಥರು ಜಯನಗರ ಐದನೇ ಬ್ಲಾಕ್‌ನಲ್ಲಿರುವ ನಂಜನಗೂಡು ರಾಯರ ಮಠದಲ್ಲಿ ತಪ್ತಮುದ್ರಾ ಧಾರಣೆ ನಡೆಸಿಕೊಡಲಿದ್ದಾರೆ. ಶ್ರೀಗಳು ಅಂದು ಬೆಳಗ್ಗೆ 5.30ಕ್ಕೆ ಮೂಲ ರಾಮದೇವರ ಪೂಜೆ ನೆರವೇರಿಸಿದ ನಂತರ ಬೆಳಗ್ಗೆ 7.30 ರಿಂದ ರಾತ್ರಿ 10.30ರವರೆಗೆ ಭಕ್ತರಿಗೆ ತಪ್ತಮುದ್ರಾ ಧಾರಣೆ ಹಾಕಿ ಅನುಗ್ರಹಿಸಲಿದ್ದಾರೆ. ಅಂದು ಸುದರ್ಶನ ಹೋಮ ಇರಲಿದೆ.

ಗಾಂಧಿಬಜಾರಿನ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಭಕ್ತರಿಗೆ ತಪ್ತಮುದ್ರಾ ಧಾರಣೆ ಮಾಡಲಿದ್ದಾರೆ. ವಿದ್ಯಾಪೀಠದಲ್ಲಿ ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು, ಬುಲ್‌ಟೆಂಪಲ್‌ ರಸ್ತೆಯ ಗೋವರ್ಧನ ಕ್ಷೇತ್ರದ ಪುತ್ತಿಗೆ ಮಠದಲ್ಲಿ ಶ್ರೀ ಸುಗುಣೇಂದ್ರ ತೀರ್ಥರು, ಚಾಮರಾಜಪೇಟೆಯ ರಾಯರಾಯ ಕಲ್ಯಾಣ ಮಂಟಪದಲ್ಲಿ ಸೋದೆ ಮಠದ ಸ್ವಾಮಿಗಳು ತಪ್ತಮುದ್ರಾಧಾರಣೆ ನಡೆಸಿಕೊಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ