ಆ್ಯಪ್ನಗರ

2.60 ಲಕ್ಷ ರೂ.ಗಳಿಗೆ ಹರಾಜಾದ ಬಾವುಟ

ಸಮೀಪದ ಆನಗೋಡಿನಲ್ಲಿ ಏ.19ರಂದು ನಡೆದ ವಿಶ್ವಬಂಧು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

Vijaya Karnataka 20 Apr 2019, 3:05 pm
ಮಾಯಕೊಂಡ:ಧಾರ್ಮಿಕ ಕಾರ್ಯಕ್ರಮಗಳು ಹಬ್ಬಹರಿದಿನಗಳು ಮಠಮಾನ್ಯಗಳ ಕುರಿತು ಭಕ್ತರು ಹೊಂದಿರುವ ದೈವಿ ಭಕ್ತಿಯ ಭಾವನೆಗಳು ಕೋಟಿ ರಥಗಳ ಎತ್ತರಕ್ಕಿಂತ ಅಧಿಕವಾಗಿರುತ್ತದೆ ಎಂದು ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
Vijaya Karnataka Web DVG-1904-2-12-19MYK1A

ಸಮೀಪದ ಆನಗೋಡಿನಲ್ಲಿ ಏ.19ರಂದು ನಡೆದ ವಿಶ್ವಬಂಧು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
4-5 ವರ್ಷಗಳಿಂದ ಸಾಕಷ್ಟು ಮಳೆ ಬೆಳೆಯಿಲ್ಲದೆ ರೈತ ಸಮುದಾಯವು ಬರಗಾಲವನ್ನು ಎದುರಿಸುವ ಪರಿಸ್ಥಿತಿ ಬಂದಿತ್ತು. ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಸರಕಾರ ನಡೆಸುವವರು ರೈತರಿಗೆ ಕೆರೆಗಳನ್ನು ತುಂಬಿಸುವಂತಹ ಮಹತ್ವವಾದ ಯೋಜನೆಗಳಿಗೆ ಹಣವನ್ನು ವಿನಿಯೋಗ ಮಾಡಬೇಕು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ ಖರೀದಿ ಮಾಡುವುದರೋಂದಿಗೆ ರೈತರ ನೆರವಿಗೆ ಸರಕಾರಗಳು ಕೆಲಸ ಮಾಡಬೇಕು ಎಂದರು.

ಕಡ್ಡಾಯ ಮತ ಚಲಾವಣೆ

ಜನಶಕ್ತಿಯೇ ರಾಷ್ಟ್ರಶಕ್ತಿಯಾಗಿರುತ್ತದೆ ಪ್ರತಿಯೊಬ್ಬ ಮತದಾರನು ಕಡ್ಡಾಯವಾಗಿ ಮತ ಚಲಾವಣೆ ಮಾಡುವಂತಹ ಕಟ್ಟುನಿಟ್ಟಿನ ಕಾನುನನ್ನು ಜಾರಿಗೊಳಿಸಬೇಕು ಎಂದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಶೇ.65 ಮತದಾನವಾದರೆ ಉಳಿದ ಮತದಾರಾರಿಗೆ ರಾಷ್ಟ್ರದ ಬಗ್ಗೆ ಚಿಂತೆಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಥದ ಬಾವುಟವನ್ನು ಶಾಮನೂರ್‌ ನಾಗರಾಜ್‌ ಎಂಬ ಭಕ್ತ 2.60 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ