ಆ್ಯಪ್ನಗರ

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ 85 ಕೋಟಿ ರೂ.ವೆಚ್ಚದಲ್ಲಿ ಚಿನ್ನದ ರಥ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 85 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ರಥ ನಿರ್ಮಾಣಗೊಳ್ಳಲಿದೆ.

Vijaya Karnataka 3 May 2019, 3:11 pm
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 85 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ರಥ ನಿರ್ಮಾಣಗೊಳ್ಳಲಿದೆ.
Vijaya Karnataka Web PTR-28SUB05KUKKE RATHA


2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕುಕ್ಕೆಯಲ್ಲಿ ನೂತನ ಚಿನ್ನದ ರಥ ನಿರ್ಮಾಣ ಮಾಡಲು ಆದೇಶ ಹೊರಡಿಸಿದ್ದರು. ಆದರೆ ನಂತರದ ದಿನಗಳಲ್ಲಿ ಈ ಪ್ರಸ್ತಾವನೆಯು ನನೆಗುದಿಗೆ ಬಿತ್ತು. ಆದರೆ ಇದೀಗ ರಾಜಗುರು ದ್ವಾರಕನಾಥ್‌ ಸಲಹೆಯ ಮೇರೆಗೆ ಸಿಎಂ ಕುಮಾರಸ್ವಾಮಿ ಅವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಚಿನ್ನದ ರಥ ನಿರ್ಮಾಣಕ್ಕೆ ಮರುಜೀವ ನೀಡಿದ್ದಾರೆ. ಅಲ್ಲದೆ ತಮ್ಮ ಅವಧಿಯಲ್ಲಿ ಆರಂಭವಾದ ಚಿನ್ನದ ರಥ ನಿರ್ಮಾಣವು ಸ್ಥಗಿತಗೊಂಡಿರುವ ವಿಚಾರ ತಿಳಿದು ಮತ್ತೆ ತಮ್ಮದೇ ಅವಧಿಯಲ್ಲಿ ಮರುಜೀವ ನೀಡಿ ದೇವರಿಗೆ ಅರ್ಪಿಸಬೇಕೆಂಬ ಬಯಕೆ ಹೊಂದಿರುವುದರಿಂದ ಸುವರ್ಣ ರಥ ನಿರ್ಮಾಣ ಮರುಜೀವ ಪಡೆದುಕೊಂಡಿದೆ.

240 ಕಿಲೋ ಚಿನ್ನ: 2006ರಲ್ಲಿ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ 240 ಕಿಲೋ ಚಿನ್ನವನ್ನು ಉಪಯೋಗಿಸಿ ರಥ ನಿರ್ಮಿಸಲು ಸರಕಾರವು ಅಂದಾಜುಪಟ್ಟಿ ತಯಾರಿಸಿ ತಾತ್ವಿಕವಾಗಿ ಷರತ್ತು ವಿಧಿಸಿ ಅನುಮತಿ ನೀಡಿತ್ತು. ಉದ್ದೇಶಿತ ಕಾಮಗಾರಿಗೆ ದೇವಳದ ನಿಧಿಯಲ್ಲಿರುವ ಚಿನ್ನವನ್ನು ಉಪಯೋಗಿಸಿಕೊಂಡು ಉಳಿಕೆ ವೆಚ್ಚವನ್ನು ದೇವಳದ ನಿಧಿಯಿಂದ ಹಾಗೂ ಸಾರ್ವಜನಿಕ ಭಕ್ತರ ವಂತಿಗೆಯಿಂದ ಭರಿಸಿ ಕೈಗೊಳ್ಳುವುದು. ರಥ ನಿರ್ಮಾಣ ಸಮಿತಿಯನ್ನು ರಚನೆ ಮಾಡಿ, ಸಮಿತಿಯ ಮೂಲಕ ವಂತಿಗೆಯನ್ನು ಸಂಗ್ರಹಿಸುವುದು ಎಂಬುದಾಗಿ 2006ರಲ್ಲಿ ಸರಕಾರವು ದೇವಳಕ್ಕೆ ಆದೇಶ ನೀಡಿತ್ತು. ಆದರೆ ಬಳಿಕ ಈ ಯೋಜನೆ ಸಾಕಾರಗೊಳ್ಳಲಿಲ್ಲ. ಆದರೆ ಇದೀಗ ಕುಕ್ಕೆಯಲ್ಲಿ ಮತ್ತೆ ಸುವರ್ಣ ರಥ ನಿರ್ಮಾಣ ಯೋಜನೆಗೆ ಚಾಲನೆ ದೊರಕಿದೆ. ಇದೀಗ ಚಿನ್ನದ ಬೆಲೆ ಗಗನಕ್ಕೆ ಏರಿರುವುದರಿಂದ ರಥ ನಿರ್ಮಾಣಕ್ಕೆ 80ರಿಂದ 85 ಕೋಟಿ ರೂ. ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ