ಆ್ಯಪ್ನಗರ

ಭಗವದ್ಗೀತಾ ಪಠಣದಿಂದ ಮನಸ್ಸಿನ ದೋಷ ದೂರ

ಭಗವದ್ಗೀತಾ ಪಠಣದಿಂದ ಮನಸ್ಸಿನ ದೋಷ ದೂರವಾಗಲಿದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ಗೀತಾಸಾರ ಮುಖ್ಯ.

Vijaya Karnataka 15 Jul 2019, 4:51 pm
ಚಿತ್ರದುರ್ಗ:ಭಗವದ್ಗೀತಾ ಪಠಣದಿಂದ ಮನಸ್ಸಿನ ದೋಷ ದೂರವಾಗಲಿದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾದರೆ ಗೀತಾಸಾರ ಮುಖ್ಯ ಎಂದು ಇಲ್ಲಿನ ಸದ್ಗುರು ಕಬೀರಾನಂದ ಆಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.
Vijaya Karnataka Web Bhagavadgeeth


ಇಲ್ಲಿನ ಶ್ರೀ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿನ ಶಾರದಾ ಸಭಾ ಭವನದಲ್ಲಿ ಶಿರಸಿಯ ಶ್ರೀಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರೀಭಗವದ್ಗೀತಾ ಅಭಿಯಾನ ಕರ್ನಾಟಕ ಜಿಲ್ಲಾ ಸಮಿತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೀರು ನಮ್ಮ ಮೈದೋಷ ಕಳೆಯಬಹುದು. ಆದರೆ ಮನಸ್ಸಿನ ದೋಷ ಕಳೆಯಬೇಕಾದರೆ ಭಗವದ್ಗೀತಾ ಪಠಣ ಮಾಡಬೇಕು. ಪರ್ವ ಕಾಲದಲ್ಲಿ ಭಗವದ್ಗೀತೆಯ 18 ಪಠಣಗಳನ್ನು ಓದಿದರೆ ಮನಸ್ಸಿನ ದೋಷ ದೂರವಾಗಲಿದೆ ಎಂದು ಹೇಳಿದರು.

ಗೀತಾ ಎಂದರೆ ತ್ಯಾಗ, ನಮ್ಮ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಮನಸ್ಸನ್ನು ಖಾಲಿ ಮಾಡಿಕೊಳ್ಳಬೇಕು. ನಮ್ಮ ಕಾಮನೆಗಳು ನೂರಾರು, ಸಾವಿರಾರು. ಲೆಕ್ಕಕ್ಕೆ ಬಾರದಷ್ಟು ಸಂಕಲ್ಪಗಳು. ಭೋಗಮಯ ಜೀವನ ಸಾಗಿಸಬೇಕು ಎಂದು ಹಂಬಲ. ಎಲ್ಲಿ ಭೋಗ ಇರುತ್ತೋ ಅಲ್ಲಿ ರೋಗ ಇರುತ್ತೆ. ಜೀವನದಲ್ಲಿ ನಮಗೆ ಸುಖ ಬೇಕು ಎಂದರೆ ನಮ್ಮಲ್ಲಿನ ಕಾಮನೆ ದೂರ ಮಾಡಬೇಕು. ದುಃಖದಿಂದ ಪಾರಾಗಬೇಕು ಎಂದರೆ ಗೀತ ಚಿಂತನೆ ಮಾಡೋಣ ಎಂದು ತಿಳಿಸಿದರು.

ಈ ವರ್ಷ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ ಆಯೋಜಿಸುತ್ತಿರುವುದು ಸಂತಸದ ವಿಷಯ. ಪೋಷಕರು ತಮ್ಮ ಮಕ್ಕಳಿಗೆ ನಿತ್ಯ ಗೀತೆಯ ಒಂದೊಂದು ಶ್ಲೋಕ ಹೇಳಿ ಕೊಡಿ. ದೇವರು ನಂಬಿದವರಿಗೆ ಕೈಬಿಡುವುದಿಲ್ಲ ಎಂದರು.

ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್‌ ಭಟ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಶ್ರೀಭಗವದ್ಗೀತಾ ಅಭಿಯಾನದ ಮುಖ್ಯ ರೂವಾರಿಗಳು. ಇದು 2007 ಅಕ್ಟೋಬರ್‌ 28ರಂದು ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಂಡು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ವರ್ಷದ ರಾಜ್ಯಮಟ್ಟದ ಭಗವದ್ಗೀತಾ ಸಮರ್ಪಣಾ ಸಮಾರಂಭ 2019 ಡಿಸೆಂಬರ್‌ 7ರಂದು ನಡೆಯಲಿದೆ. ಅದಕ್ಕಾಗಿ ಆ. 30ರೊಳಗೆ ಎಲ್ಲ ಶ್ಲೋಕ ಕೇಂದ್ರ ಉಪನ್ಯಾಸ ಕೇಂದ್ರಗಳನ್ನು ಗುರುತಿಸಬೇಕಾಗಿದೆ ಎಂದರು.

ಅಭಿಯಾನದಲ್ಲಿ ನಿರ್ಣಯಿಸಿದ ಭಗವದ್ಗೀತಾ ಶ್ಲೋಕ ಹೇಳಿ ಕೊಡುವ ಸ್ಥಳಗಳನ್ನು ಶ್ಲೋಕ ಕೇಂದ್ರವೆಂದು, ಉಪನ್ಯಾಸ ಜರುಗುವ ಸ್ಥಳಗಳನ್ನು ಉಪನ್ಯಾಸ ಕೇಂದ್ರವೆಂದು ಗುರುತಿಸಲಾಗುವುದು. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಮಹಾವಿದ್ಯಾಲಯ, ವಿಶ್ವವಿದ್ಯಾಲಯ, ದೇವಾಲಯ, ಪ್ರವಚನ ಮಂದಿರ, ಗೃಹಸ್ಥರ ಮನೆ ಮುಂತಾದವು ಶ್ಲೋಕ ಕೇಂದ್ರ ಅಥವಾ ಉಪನ್ಯಾಸ ಕೇಂದ್ರಗಳಾಗಬಹುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ