ಆ್ಯಪ್ನಗರ

ಮಹಾಲಕ್ಷ್ಮೀಗೆ ನಿರ್ಮಾಣವಾಗುತ್ತಿದೆ ನೂತನ ಗಜಾಲಯ

ಜಗನ್ಮಾತೆ ಕಟೀಲು ಶ್ರೀ ಭ್ರಮರಾಂಬಿಕೆಯ ಕ್ಷೇತ್ರದ ಮಹಾಲಕ್ಷ್ಮೀಗೂ ನೂತನ ಗಜಾಲಯ ನಿರ್ಮಾಣಗೊಳ್ಳುತ್ತಿದೆ.

Vijaya Karnataka 11 Jan 2020, 4:55 pm
ಬಜಪೆ:ಜಗನ್ಮಾತೆ ಕಟೀಲು ಶ್ರೀ ಭ್ರಮರಾಂಬಿಕೆಯ ಸನ್ನಿಧಿ ಬ್ರಹ್ಮಕಲಶೋತ್ಸವ ಸಂಭ್ರಮದ ಸನ್ನಿವೇಶಕ್ಕೆ ಸಿದ್ಧಗೊಳ್ಳುತ್ತಿದೆ. ಏತನ್ಮಧ್ಯೆ ಕ್ಷೇತ್ರದ ಗಜ ಲಕ್ಷ್ಮೀ(ಆನೆ) ಮಹಾಲಕ್ಷ್ಮೀಗೂ ನೂತನ ಗಜಾಲಯ ನಿರ್ಮಾಣಗೊಳ್ಳುತ್ತಿದ್ದು ವಾರಾಂತ್ಯದೊಳಗೆ ಪೂರ್ಣಗೊಳ್ಳಲಿದೆ.
Vijaya Karnataka Web kateel lakshmi


ಕಟೀಲು ಕ್ಷೇತ್ರಕ್ಕೆ ಆಗಮಿಸುವ ಭಕ್ತರ, ಪ್ರವಾಸಿಗರ ಗಮನ ಸೆಳೆಯುವ ಆನೆ ಸುಮಾರು 25 ವರ್ಷಗಳ ಹಿಂದೆ ಗಿರಿಜಾ ನಾಮಧೇಯದೊಂದಿಗೆ ಆಗಮಿಸಿ ಬಳಿಕ ಮಹಾಲಕ್ಷ್ಮೀ ಎಂದು ಮರುನಾಮಕರಣ ಮಾಡಿ ಕೊಂಡು ಕಟೀಲು ದೇವಿ ಸನ್ನಿಧಿಯ ಭಕ್ತರನ್ನು ಸೆಳೆಯು ತ್ತಿದೆ. ಇದೀಗ ಆನೆಯ ಬೆಳ್ಳಿಹಬ್ಬದ ಸಂಭ್ರಮ ಹಾಗೂ ಕ್ಷೇತ್ರದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುಮಾರು 50 ವರ್ಷ ಗಳಿಗೂ ಹೆಚ್ಚಿನ ಹಳೆಯ ಕಟ್ಟಡ ತೆರವುಗೊಳಿಸಿ ಅದೇ ಜಾಗದಲ್ಲಿನೂತನ ಗಜಾಲಯ ನಿರ್ಮಿಸಲಾಗಿದೆ.

ಗಜಾಲಯದ ವಿನ್ಯಾಸ: ನೂತನ ಗಜಾ ಲಯವು 9 ಮೀ. ಎತ್ತರವಿದ್ದು, 21 ಲಕ್ಷ ರೂ. ವೆಚ್ಚದಲ್ಲಿಆನೆ ಮಹಾಲಕ್ಷ್ಮಿಗೆ ಸ್ನಾನಕ್ಕೆ ಶವರ್‌ಬಾತ್‌ ವ್ಯವಸ್ಥೆ, ಲೈಟ್‌ ಹಾಗೂ ಫ್ಯಾನ್‌, ಕುಡಿವ ನೀರಿನ ಟ್ಯಾಂಕ್‌ ಹಾಗೂ ನೀರು ಸರಬರಾಜು ಸಂಪರ್ಕ, ಸುಲಭ ಸ್ವಚ್ಛತಾ ವ್ಯವಸ್ಥೆಗೆ ಅನ್ವಯಿಸುವಂತೆ ನೆಲದ ಕಾಮಗಾರಿ ನಿರ್ವಹಿಸಲಾಗಿದೆ. ಗಜಾಲಯದ ಮಾಡಿಗೆ ಪಬ್‌ ಶೀಟುಗಳನ್ನು ಹಾಕುವುದರಿಂದ ನಿರಂ ತರ ತಣ್ಣನೆಯ ವಾತಾವರಣ ಸಿಗಲಿದೆ. ಆನೆ ಮಾವು ತನಿಗೂ ಸಮೀಪದಲ್ಲೇ ವಸತಿ ವ್ಯವಸ್ಥೆ ಮಾಡಲಾಗಿದೆ.

ಬ್ರಹ್ಮಕಲಶೋತ್ಸವದ ಸಂಭ್ರಮದ ದಿನಗಳಲ್ಲಿಕಟೀಲಿಗೆ ಆಗಮಿಸುವ ಲಕ್ಷಾಂತರ ಭಕ್ತರ ಗಮನವನ್ನು ತನ್ನೆಡೆಗೆ ಆಕರ್ಷಿಸುವ ಆನೆ ಮಹಾ(ಗಜ)ಲಕ್ಷ್ಮೀ ಎಲ್ಲರನ್ನೂ ತನ್ನತ್ತ ಸೆಳೆಯುವುದು ಖಚಿತ. ನೂತನ ಗಜಾಲಯಕ್ಕೆ ಮಹಾಲಕ್ಷ್ಮಿಯ ಪ್ರವೇಶ ಆಗುವಲ್ಲಿಯವರೆಗೆ ಸದ್ಯ ಕಟೀಲು ಮಾಂಜದಲ್ಲಿರುವ ಗೋಶಾಲೆಯ ಆವರಣಕ್ಕೆ ಆನೆಯ ವಾಸ್ತವ್ಯದ ನೆಲೆಯನ್ನು ಸ್ಥಳಾಂತರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ