ಕಾಸರಗೋಡು: ತೈಯ್ಯಂ ಮುಖಗಳ ಬಣ್ಣಗಾರಿಕೆ, ತೈಯ್ಯಂ ಆಟದಲ್ಲಿ ಮಾತ್ರವಲ್ಲ ಜೀವ ತುಂಬುವ ತೈಯ್ಯಂ ಶಿಲ್ಪಗಳನ್ನು ತಯಾರಿಸುವಲ್ಲಿ ಯುವ ಕಲಾವಿದ ರತೀಶ್ ಕೈಚಳಕ ಗಮನ ಸೆಳೆಯುತ್ತಿದೆ.
ಪಿಲಿಕ್ಕೋಡಿನ ಪಿ. ರತೀಶ್ ಇಂತಹ ಕಲಾಕೃತಿಗಳ ತಯಾರಿಯಲ್ಲಿ ತೊಡಗಿದ್ದಾರೆ. ತೈಯ್ಯಂ ಕಲಾವಿದ ರವಿ ಮಣಕ್ಕಾಡ್ ಅವರ ಪುತ್ರ ರತೀಶ್ ತಂದೆಯೊಂದಿಗೆ ಚಿಕ್ಕಂದಿನಿಂದಲೇ ತೈಯ್ಯಂ ಕುಣಿತ ಸ್ಥಳಗಳಿಗೆ ಬರುತ್ತಿದ್ದರು. ಕಾರ್ಡ್ಬೋರ್ಡ್, ಬಣ್ಣಗಳನ್ನೆಲ್ಲ ಉಪಯೋಗಿಸಿ ಅಂದೇ ಸೃಷ್ಟಿಗಳನ್ನು ತಯಾರಿಸಲು ಆರಂಭಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಕಲಾಕೃತಿ ನಿರ್ಮಿಸುತ್ತಿದ್ದಾರೆ.
ಬಾಲಿ, ಕ್ಷೇತ್ರಪಾಲಕ, ವೈರಜಾತ, ಮುತ್ತಪ್ಪನ್, ವಿಷ್ಣುಮೂರ್ತಿ ತೈಯ್ಯಂಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಮೂವತ್ತರ ಹರೆಯದ ಈ ಕಲಾವಿದ ತಯಾರಿಸುವ ಮುಖಬರಹ, ಮುಖವರ್ಣಿಕೆಗಳೆಲ್ಲ ನಿಜವಾದ ತೈಯ್ಯಂಗಳದ್ದಾಗಿವೆ. ಸಿಮೆಂಟ್ನಲ್ಲಿ ಕಲಾಕೃತಿಗಳನ್ನು ಸೃಷ್ಟಿಸಿ ಅದಕ್ಕೆ ಬಣ್ಣ ಹಚ್ಚುತ್ತಾರೆ. ಕ್ಷೇತ್ರಗಳಿಗಾಗಿಯೂ ರತೀಶ್ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಸ್ವತಃ ತೈಯ್ಯಂ ಕಲಾವಿದರೂ ಆಗಿದ್ದಾರೆ. ರತೀಶ್ ಉತ್ತಮ ಚಿತ್ರಕಲಾವಿದರೂ ಆಗಿದ್ದಾರೆ.
ಪಿಲಿಕ್ಕೋಡಿನ ಪಿ. ರತೀಶ್ ಇಂತಹ ಕಲಾಕೃತಿಗಳ ತಯಾರಿಯಲ್ಲಿ ತೊಡಗಿದ್ದಾರೆ. ತೈಯ್ಯಂ ಕಲಾವಿದ ರವಿ ಮಣಕ್ಕಾಡ್ ಅವರ ಪುತ್ರ ರತೀಶ್ ತಂದೆಯೊಂದಿಗೆ ಚಿಕ್ಕಂದಿನಿಂದಲೇ ತೈಯ್ಯಂ ಕುಣಿತ ಸ್ಥಳಗಳಿಗೆ ಬರುತ್ತಿದ್ದರು. ಕಾರ್ಡ್ಬೋರ್ಡ್, ಬಣ್ಣಗಳನ್ನೆಲ್ಲ ಉಪಯೋಗಿಸಿ ಅಂದೇ ಸೃಷ್ಟಿಗಳನ್ನು ತಯಾರಿಸಲು ಆರಂಭಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಕಲಾಕೃತಿ ನಿರ್ಮಿಸುತ್ತಿದ್ದಾರೆ.
ಬಾಲಿ, ಕ್ಷೇತ್ರಪಾಲಕ, ವೈರಜಾತ, ಮುತ್ತಪ್ಪನ್, ವಿಷ್ಣುಮೂರ್ತಿ ತೈಯ್ಯಂಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಮೂವತ್ತರ ಹರೆಯದ ಈ ಕಲಾವಿದ ತಯಾರಿಸುವ ಮುಖಬರಹ, ಮುಖವರ್ಣಿಕೆಗಳೆಲ್ಲ ನಿಜವಾದ ತೈಯ್ಯಂಗಳದ್ದಾಗಿವೆ. ಸಿಮೆಂಟ್ನಲ್ಲಿ ಕಲಾಕೃತಿಗಳನ್ನು ಸೃಷ್ಟಿಸಿ ಅದಕ್ಕೆ ಬಣ್ಣ ಹಚ್ಚುತ್ತಾರೆ. ಕ್ಷೇತ್ರಗಳಿಗಾಗಿಯೂ ರತೀಶ್ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಸ್ವತಃ ತೈಯ್ಯಂ ಕಲಾವಿದರೂ ಆಗಿದ್ದಾರೆ. ರತೀಶ್ ಉತ್ತಮ ಚಿತ್ರಕಲಾವಿದರೂ ಆಗಿದ್ದಾರೆ.