ಆ್ಯಪ್ನಗರ

ತೈಯ್ಯಂ ಮುಖವರ್ಣಿಕೆ ತಯಾರಿಯಲ್ಲಿ ಯುವಕನ ಕೈಚಳಕ

ತೈಯ್ಯಂ ಮುಖಗಳ ಬಣ್ಣಗಾರಿಕೆ, ತೈಯ್ಯಂ ಆಟದಲ್ಲಿ ಮಾತ್ರವಲ್ಲ ಜೀವ ತುಂಬುವ ತೈಯ್ಯಂ ಶಿಲ್ಪಗಳನ್ನು ತಯಾರಿಸುವಲ್ಲಿ ಕಾಸರಗೋಡಿನ ಯುವ ಕಲಾವಿದ ರತೀಶ್‌ ಕೈಚಳಕ ಗಮನ ಸೆಳೆಯುತ್ತಿದೆ.

Vijaya Karnataka 23 Sep 2019, 2:49 pm
ಕಾಸರಗೋಡು: ತೈಯ್ಯಂ ಮುಖಗಳ ಬಣ್ಣಗಾರಿಕೆ, ತೈಯ್ಯಂ ಆಟದಲ್ಲಿ ಮಾತ್ರವಲ್ಲ ಜೀವ ತುಂಬುವ ತೈಯ್ಯಂ ಶಿಲ್ಪಗಳನ್ನು ತಯಾರಿಸುವಲ್ಲಿ ಯುವ ಕಲಾವಿದ ರತೀಶ್‌ ಕೈಚಳಕ ಗಮನ ಸೆಳೆಯುತ್ತಿದೆ.
Vijaya Karnataka Web 22KSLRATHEESH_296509.JPG


ಪಿಲಿಕ್ಕೋಡಿನ ಪಿ. ರತೀಶ್‌ ಇಂತಹ ಕಲಾಕೃತಿಗಳ ತಯಾರಿಯಲ್ಲಿ ತೊಡಗಿದ್ದಾರೆ. ತೈಯ್ಯಂ ಕಲಾವಿದ ರವಿ ಮಣಕ್ಕಾಡ್‌ ಅವರ ಪುತ್ರ ರತೀಶ್‌ ತಂದೆಯೊಂದಿಗೆ ಚಿಕ್ಕಂದಿನಿಂದಲೇ ತೈಯ್ಯಂ ಕುಣಿತ ಸ್ಥಳಗಳಿಗೆ ಬರುತ್ತಿದ್ದರು. ಕಾರ್ಡ್‌ಬೋರ್ಡ್‌, ಬಣ್ಣಗಳನ್ನೆಲ್ಲ ಉಪಯೋಗಿಸಿ ಅಂದೇ ಸೃಷ್ಟಿಗಳನ್ನು ತಯಾರಿಸಲು ಆರಂಭಿಸಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಕಲಾಕೃತಿ ನಿರ್ಮಿಸುತ್ತಿದ್ದಾರೆ.

ಬಾಲಿ, ಕ್ಷೇತ್ರಪಾಲಕ, ವೈರಜಾತ, ಮುತ್ತಪ್ಪನ್‌, ವಿಷ್ಣುಮೂರ್ತಿ ತೈಯ್ಯಂಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಮೂವತ್ತರ ಹರೆಯದ ಈ ಕಲಾವಿದ ತಯಾರಿಸುವ ಮುಖಬರಹ, ಮುಖವರ್ಣಿಕೆಗಳೆಲ್ಲ ನಿಜವಾದ ತೈಯ್ಯಂಗಳದ್ದಾಗಿವೆ. ಸಿಮೆಂಟ್‌ನಲ್ಲಿ ಕಲಾಕೃತಿಗಳನ್ನು ಸೃಷ್ಟಿಸಿ ಅದಕ್ಕೆ ಬಣ್ಣ ಹಚ್ಚುತ್ತಾರೆ. ಕ್ಷೇತ್ರಗಳಿಗಾಗಿಯೂ ರತೀಶ್‌ ಕಲಾಕೃತಿಗಳನ್ನು ತಯಾರಿಸಿದ್ದಾರೆ. ಸ್ವತಃ ತೈಯ್ಯಂ ಕಲಾವಿದರೂ ಆಗಿದ್ದಾರೆ. ರತೀಶ್‌ ಉತ್ತಮ ಚಿತ್ರಕಲಾವಿದರೂ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ