ಆ್ಯಪ್ನಗರ

ಗೋಕರ್ಣದಲ್ಲಿತ್ರಿಪುರಾಖ್ಯ ದೀಪೋತ್ಸವ

ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವಾಲಯದ ತ್ರಿಪುರಾಖ್ಯ ದೀಪೋತ್ಸವ ಸಂಪನ್ನಗೊಂಡಿತು.

Vijaya Karnataka Web 15 Nov 2019, 3:48 pm
ಗೋಕರ್ಣ: ಪುರಾಣ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವಾಲಯದ ತ್ರಿಪುರಾಖ್ಯ ದೀಪೋತ್ಸವ ಸಂಪನ್ನಗೊಂಡಿತು. ಮಂಗಳವಾರ ಮಧ್ಯಾಹ್ನ ದೇವಾಲಯದಲ್ಲಿ ಲಕ್ಷ ಬಿಲ್ವಾರ್ಚನೆ ನೈಮಿತ್ತಕ ಬಲಿ ನಡೆಯಿತು. ನಂತರ ಭೀಮಕೊಂಡಕ್ಕೆ ದೇವರ ಉತ್ಸವ ತೆರಳಿ ಧಾತ್ರಿ ಹೋಮ, ಭೀಮೇಶ್ವರ ಮತ್ತು ಜನಾರ್ದನ ಸನ್ನಿಧಿಯಲ್ಲಿವಿಶೇಷ ಪೂಜೆ ನೆರವೇರಿತು.
Vijaya Karnataka Web Gokarna 1

ಈ ಭಾಗದ ಹಾಲಕ್ಕಿ ಸಮಾಜದವರು ದೇವರಿಗೆ ಫಲ ಸಮರ್ಪಿಸಿದರು. ಬಳಿಕ ಇಲ್ಲಿಯೇ ಅಡುಗೆ ಸಿದ್ಧಪಡಿಸಿ ವನಭೋಜನ ಮಾಡಿದರು. ಎಲ್ಲಸಮುದಾಯದವರು ಒಟ್ಟಿಗೆ ಕುಳಿತು ಭೋಜನ ಸ್ವೀಕರಿಸುವುದು ವಿಶೇಷ. ಸಂಜೆ ಉತ್ಸವವು ದೇವಾಲಯಕ್ಕೆ ಮರಳಿ ರಾತ್ರಿ ಲಕ್ಷ ದೀಪೋತ್ಸವ, ಕೋಟಿತೀರ್ಥದಲ್ಲಿಜಲಾಯನ ಉತ್ಸವ, ತೆಪ್ಪೋತ್ಸವ ಹಾಗೂ ರಥಬೀದಿಯಲ್ಲಿರಥೋತ್ಸವ ನಡೆಯಿತು. ದೇವಾಲಯದ ಗರ್ಭಗುಡಿ ಹಾಗೂ ನಂದಿ ಮಂಟಪಗಳನ್ನು ವಿವಿಧ ಹೂವಿನಿಂದ ಶೃಂಗರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ