ಬೆಂಗಳೂರು: ಬಸವನಗುಡಿಯ ಗುರುರಾಜ ಅಸೋಸಿಯೋಷನ್ ವತಿಯಿಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು ಮಾ.೧೮ ರಿಂದ ೨೪ರವರೆಗೆ ಹಮ್ಮಿಕೊಳ್ಳಲಾಗಿದೆ. ಆರಾಧನೆಯ ಅಂಗವಾಗಿ ಪ್ರತಿನಿತ್ಯ ಸಂಜೆ ೬.೩೦ ರಿಂದ ೮ರವರೆಗೆ ವಿದ್ವಾಂಸರಿಂದ ಪ್ರವಚನಗಳನ್ನು ಏರ್ಪಡಿಸಲಾಗಿದೆ. ಮಾ.೧೮ ವಿಜಯೀಂದ್ರ ಕೃತ ವ್ಯಾಸರಾಜರ ಸ್ತೋತ್ರದ ಬಗ್ಗೆ ಬ್ರಹ್ಮಣ್ಯತೀರ್ಥಾಚಾರ್ಯರು, ಮಾ. ೧೯ ವ್ಯಾಸತ್ರಯ ಗ್ರಂಥದ ಪರಿಚಯವನ್ನು ಹರಿದಾಸ ಭಟ್ಟರು, ಮಾ.೨೦ ವ್ಯಾಸರಾಜ ವಿರಚಿತ ಕನ್ನಡದ ಗೀತಾಸಾರ ಕುರಿತು ಕಲ್ಹಾಪುರ ಪವಮಾನಾಚಾರ್ಯರು, ಮಾ.೨೧ ವ್ಯಾಸರಾಜರ ಸಾಮಾಜಿಕ ಕೊಡುಗೆ ಕುರಿತಂತೆ ರಾಮವಿಠ್ಠಲಾಚಾರ್ಯರು, ಮಾ.೨೩ ವ್ಯಾಸರಾಜರ ಶಿಷ್ಯ ಪರಂಪರೆ ಕುರಿತಂತೆ ಪ್ರಭಂಜನಾಚಾರ್ಯರು, ವ್ಯಾಸರಾಜರು ಅನುಗ್ರಹಿಸಿದ ದಾಸ ಪರಂಪರೆ ಕುರಿತು ರುಚಿರಾಚಾರ್ಯರು ಪ್ರವಚನ ನೀಡಲಿದ್ದಾರೆ.
ವ್ಯಾಸರಾಜರ ಆರಾಧನಾ ಮಹೋತ್ಸವ
ಬಸವನಗುಡಿಯ ಗುರುರಾಜ ಅಸೋಸಿಯೋಷನ್ ವತಿಯಿಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಆರಾಧನಾ ಮಹೋತ್ಸವವನ್ನು ಮಾ.೧೮ ರಿಂದ ೨೪ರವರೆಗೆ ಹಮ್ಮಿಕೊಳ್ಳಲಾಗಿದೆ.
Vijaya Karnataka 30 Mar 2019, 3:51 pm