ಆ್ಯಪ್ನಗರ

ಮಹಾಬಲಿಪುರಂನ ಪಂಚರಥ

ಪಂಚರಥಗಳು ಹೆಸರೇ ಸೂಚಿಸುವಂತೆ 5 ರಥಗಳು. ಆದರೆ ಇವುಗಳು ಉತ್ಸವದ ಸಂದರ್ಭದಲ್ಲಿ ಎಳೆಯುವಂತಹ ರಥಗಳಲ್ಲ, ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಸ್ಮಾರಕಗಳು. ಬಂಗಾಳಕೊಲ್ಲಿಯ ಕೋರಮಂಡಲ್‌ ಕರಾವಳಿ ಭಾಗದಲ್ಲಿದೆ. ರಾಜ ನರಸಿಂಹವರ್ಮನ ಆಳ್ವಿಕೆಯ ಕಾಲದಲ್ಲಿ ಏಕಶಿಲೆಯಿಂದಲೇ ನಿರ್ಮಾಣಗೊಂಡಿವೆ. ಭಾರತೀಯ ಪುರಾತತ್ವ ಇಲಾಖೆಗೊಳಪಟ್ಟಿದ್ದು ಯುನೆಸ್ಕೋ ವಿಶ್ವಪಾರಂಪರಿಕ ಸ್ಮಾರಕಗಳ ಪಟ್ಟಿಯಲ್ಲಿಯೂ ಸೇರ್ಪಡೆಗೊಂಡಿದೆ.

Vijaya Karnataka 3 Aug 2019, 12:00 am
ಐದೂ ಸ್ಮಾರಕಗಳು ರಥದ ಮಾದರಿಯಲ್ಲಿರುವುದರಿಂದ ಇದನ್ನು ಪಂಚರಥಗಳೆಂದೇ ಕರೆಯುತ್ತಾರೆ. ಮಹಾಭಾರತದ ಪಂಚಪಾಂಡವರ ಹೆಸರಗಳನ್ನಿಡಲಾಗಿದೆ. ಅವುಗಳ ಗಾತ್ರಕ್ಕನುಸಾರವಾಗಿ ಧರ್ಮರಾಜ ರಥ, ಭೀಮ ರಥ, ಅರ್ಜುನ ರಥ, ನಕುಲ ಸಹದೇವ ರಥ ಹಾಗೂ ದ್ರೌಪದಿ ರಥ ಎಂದು ವಿಂಗಡಿಸಲಾಗಿದೆ. ಆದರೆ ಸ್ಮಾರಕಗಳಿಗೂ ಪಾಂಡವರಿಗೂ ಯಾವುದೇ ಸಂಬಂಧವಿಲ್ಲ.
Vijaya Karnataka Web droupadi ratha


ಪಂಚರಥಗಳು: ಧರ್ಮರಾಜ ರಥ, ಭೀಮ ರಥ, ಅರ್ಜುನ ರಥ, ನಕುಲಸಹದೇವ ರಥ, ದ್ರೌಪದಿ ರಥ.
ಧರ್ಮರಾಜ ರಥ

ಶಿವನಿಗೆ ಅರ್ಪಿತವಾದ ದೇಗುಲ ಇದಾಗಿದ್ದು, ಧರ್ಮರಾಜ ರಥ ಎಂದು ಕರೆಯಲ್ಪಡುತ್ತಿದೆ. ರಥದ ಸುತ್ತ ಶಿವ, ಕೃಷ್ಣ, ಸ್ಕಂದ, ಬ್ರಹ್ಮ, ಸಾಶ್ತ, ಹರಿಹರ, ಬ್ರಹ್ಮ ಹಾಗೂ ಅರ್ಧನಾರೀಶ್ವರನ ಚಿತ್ರಣವಿದೆ.


ಭೀಮ ರಥ: ವಿಷ್ಣು ದೇವರಿಗೆ ಸಮರ್ಪಣೆಗೊಂಡ ದೇಗುಲ ಇದಾಗಿದೆ.

ಅರ್ಜುನ ರಥ: ಶಿವನಿಗೆ ಅರ್ಪಿತವಾಗಿರುವ ದೇಗುಲ.


ನಕುಲ ಸಹದೇವ ರಥ: ಇಂದ್ರ ದೇವರಿಗೆ ಅರ್ಪಿತವಾಗಿರುವ ದೇಗುಲ. ಇದನ್ನು ನಕುಲ- ಸಹದೇವ ರಥ ಎಂದು ಕರೆಯುತ್ತಾರೆ. ಬೌದ್ಧರ ಪ್ರಾರ್ಥನಾ ಮಂದಿರದಂತೆ ಹೋಲುತ್ತದೆ. ಈ ರಚನೆ ಆನೆಯ ಹಿಂಭಾಗದಂತೆ ಕಂಡುಬರುತ್ತದೆ ಹಾಗಾಗಿ ಅದನ್ನು ಗಜಪೃಷ್ಟಾಕಾರ ಎಂದು ಕರೆಯುತ್ತಾರೆ. ಇದರ ಜತೆಗೆ ಗುಡಿಯೊಳಗೆ ಏಕಶಿಲೆಯಿಂದ ನಿರ್ಮಾಣಗೊಂಡಿರುವ ಆನೆಯ ಮೂರ್ತಿ ಕಾಣಬಹುದು.


ದ್ರೌಪದಿ ರಥ: ದುರ್ಗಾ ದೇವಿಯ ಹೆಸರಲ್ಲಿ ನಿರ್ಮಾಣಗೊಂಡಿದೆ.

ನಿರ್ಮಾಣ ವರ್ಷ: 7ನೇ ಶತಮಾನ

ಸ್ಥಳ: ಚೆನ್ನೈನಿಂದ 60 ಕಿ.ಮೀ. ದೂರ.

ನಿರ್ಮಾಣ ಶೈಲಿ: ದ್ರಾವಿಡಿಯನ್‌

ದರ್ಶನ ಸಮಯ: ಬೆಳಗ್ಗೆ 6- ಸಂಜೆ 6

ಹೋಗುವುದು ಹೇಗೆ: ಹತ್ತಿರದ ರೈಲು ನಿಲ್ದಾಣ ಮಹಾಬಲಿಪುರಂ ಅಲ್ಲಿಂದ 29 ಕಿ.ಮೀ., ಹತ್ತಿರದ ವಿಮಾನ ನಿಲ್ದಾಣ ಚೆನ್ನೈ(48)ಕಿಮೀ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ