- ಅರವಿಂತ್ ಕೆ.
ಬಿಹಾರದ ಮಾತೃಗಯಾ ಹಿಂದೂಗಳ ಪವಿತ್ರ ತಾಣ. ಪಿತೃಕಾರ್ಯ, ತರ್ಪಣ ಕ್ರಿಯೆಗಳಿಗೆ ಶ್ರೇಷ್ಠವಾದ ತಾಣ. ಗಯಾ ಶ್ರಾದ್ಧದಿಂದ ಗತಿಸಿದ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಭಗವಾನ್ ಮಹಾವಿಷ್ಣುವಿನ ಪಾದವನ್ನು ಇಲ್ಲಿ ನೋಡಬಹುದು. ಗಯಾ ಗಧಾದರ ನಾಮದಲ್ಲಿ ಸ್ವಯಂ ವಿಷ್ಣುವಿನ ದಿವ್ಯ ಸನ್ನಿಧಾನ ಇಲ್ಲಿದೆ. ಗಯಾ ಕ್ಷೇತ್ರ ಕಲ್ಲುಬಂಡೆ, ಗುಡ್ಡಗಳಿಂದ ಆವೃತ್ತ ಪ್ರದೇಶವಾಗಿದೆ. ಗಯಾಕ್ಷೇತ್ರದಲ್ಲಿ ನಿತ್ಯ ಮೃತ ಆತ್ಮಗಳಿಗೆ ಶಾಂತಿಕೋರುವ ನಿಟ್ಟಿನಲ್ಲಿಶ್ರಾದ್ಧ ಕಾರ್ಯಗಳು ನಡೆಯುತ್ತವೆ.
ಗಯಾ ಕ್ಷೇತ್ರ ಕಲ್ಲುಬಂಡೆಗಳಿಂದ ಆವೃತ್ತವಾದ ಪ್ರದೇಶ. ಫಲ್ಗು ನದಿ ತೀರದ ಸ್ನಾನದ ಘಟ್ಟ ಮತ್ತು ದೇವಸ್ಥಾನ ಗಮನಾರ್ಹ. ಅಶ್ವತ್ಥ , ಅರಳಿಮರಗಳ ತಾಣ. ಕ್ಷೇತ್ರದ ಮಂಗಳಗೌರಿ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣ ಪ್ರಾಕಾರಗಳಿದ್ದು ಅದು ಶಿವನ ಮೊದಲ ಪತ್ನಿ ಸತಿಯನ್ನು ನೆನಪಿಸುತ್ತದೆ.
ವಿಷ್ಣುಪಾದದಲ್ಲಿರುವ ದೇಗುಲ ಹಾಗೂ ಫಲ್ಗುಣಿ ನದಿ ತೀರದಲ್ಲಿರುವ ಕಪ್ಪು ಬಂಡೆಯ ಮೇಲಿನ ವಿಷ್ಣುಪಾದ ಗಯಾಸುರನಿಗೆ ವಿಷ್ಣುದೇವರು ನೀಡಿದ ವರದ ಪ್ರತೀಕವಾಗಿದೆ.
ಮಾತೃಗಯಾ ಫಲ್ಗು ನದಿ ತೀರದಲ್ಲಿದೆ. ಬಿಹಾರದ ರಾಜಧಾನಿ ಪಟ್ನಾದಿಂದ 100 ಕಿ.ಮೀ. ದೂರದಲ್ಲಿದೆ. ಪೂರ್ವದಲ್ಲಿಪಟ್ನಾಕ್ಕೆ ಪಾಟಲಿಪುತ್ರ ಎಂಬ ಹೆಸರಿತ್ತು. ಗಯಾಸುರನ ಕಾರಣ ಈ ಪ್ರದೇಶಕ್ಕೆ ಗಯಾ ಎಂಬ ಹೆಸರು ಬಂದಿದೆ.
ಇತಿಹಾಸ: ಗಯಾಸುರ ಒಮ್ಮೆ ಕಠಿಣತಮವಾದ ತಪಸ್ಸಿನಲ್ಲಿ ತೊಡಗುತ್ತಾನೆ. ಅದರ ಪ್ರಭಾವದ ಕಾರಣ ಸ್ವರ್ಗಲೋಕವೇ ಕಂಪಿಸುತ್ತದೆ. ದೇವತೆಗಳು ಚಿಂತಿತರಾಗುತ್ತಾರೆ. ಅವರೆಲ್ಲರೂ ಭಗವಾನ್ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಕೋರಿಕೆಯಂತೆ ಮಹಾವಿಷ್ಣು ಗಯಾಸುರನೆದುರು ಪ್ರತ್ಯಕ್ಷನಾಗುತ್ತಾನೆ. ನಿನ್ನ ಉಗ್ರ ತಪಸ್ಸನ್ನು ಇಲ್ಲಿಗೇ ನಿಲ್ಲಿಸು. ನೀನು ಬಯಸಿದ ವರವನ್ನು ಬೇಡಿಕೋ ಎನ್ನುತ್ತಾನೆ. ಆಗ ಗಯಾಸುರ ಎಲ್ಲಾ ತೀರ್ಥಕ್ಷೇತ್ರಗಳಿಗಿಂತಲೂ ನಾನಿರುವ ಕ್ಷೇತ್ರ ಪವಿತ್ರಧಾಮವಾಗಬೇಕು ಎನ್ನುತ್ತಾನೆ. ಅದಕ್ಕೆ ಮಹಾವಿಷ್ಣು ತಥಾಸ್ತು ಎನ್ನುತ್ತಾನೆ. ದೇವತೆಗಳು ಸಂತಸದಿಂದ ಸ್ವರ್ಗಲೋಕಕ್ಕೆ ಮರಳುತ್ತಾರೆ. ಗಯಾಸುರನಿಲ್ಲದ ಕಾರಣ ಭೂಮಿ ಬರಡಾಯಿತು ಎಂದು ಭಾವಿಸುತ್ತಾರೆ. ಆಗ ಮಹಾವಿಷ್ಣು ಬ್ರಹ್ಮಾದಿ ದೇವತೆಗಳನ್ನು ಕರೆದು ಯಜ್ಞವನ್ನು ಮಾಡುವಂತೆ ಸೂಚಿಸುತ್ತಾರೆ. ಅಷ್ಟೇ ಅಲ್ಲ, ಗಯಾಸುರನ ಬಳಿ ಹೋಗಿ ಆತನ ಶರೀರವನ್ನೇ ಯಜ್ಞಕ್ಕೆ ಆಹುತಿಯನ್ನಾಗಿ ಮಾಡಿ ಎಂದು ಹೇಳುತ್ತಾರೆ.
ದೇವತೆಗಳ ಕೋರಿಕೆಗೆ ಮರು ಮಾತನಾಡದೇ ಗಯಾಸುರ ಒಪ್ಪುತ್ತಾನೆ. ಆತ ನೆಲದ ಮೇಲೆ ಮಲಗುತ್ತಾನೆ. ಗಯಾಸುರನ ದೇಹದ ಮೇಲೆ ಯಜ್ಞವನ್ನು ಮಾಡಲು ಬ್ರಹ್ಮ ಮುಂದಾಗುತ್ತಾನೆ. ಯಜ್ಞಕಾರ್ಯ ಆರಂಭವಾಗುತ್ತಿದ್ದಂತೆ ಗಯಾಸುರನ ದೇಹ ಅಲುಗಾಡಲು ಆರಂಭಿಸುತ್ತದೆ. ಹೀಗಾದರೆ ಯಜ್ಞ ಕಾರ್ಯ ಮಾಡುವುದು ಕಷ್ಟವಾಗುತ್ತದೆ. ಮುಂದೇನು ಮಾಡುವುದು ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಯೋಚಿಸುತ್ತಾನೆ ಪ್ರಜಾಪತಿ. ಆಗ ದೇವಾನುದೇವತೆಗಳೆಲ್ಲರೂ ಜತೆಗೂಡಿ ಕಲ್ಲೊಂದನ್ನು ಗಯಾಸುರನ ದೇಹದ ಮೇಲಿಡುತ್ತಾರೆ. ಆ ಶಿಲೆಯೊಳಗೆ ಸ್ವಯಂ ವಿಷ್ಣುವೇ ಪ್ರವೇಶಿಸುತ್ತಾನೆ. ಹಾಗಾಗಿ ಗಯಾದಲ್ಲಿ ಸ್ವಯಂ ವಿಷ್ಣು ಮತ್ತು ದೇವಾನುದೇವತೆಗಳು ನೆಲೆಸಿದ್ದಾರೆ.
ಅಧರ್ಮೀಯರಿಗೆ ಮೋಕ್ಷ ದೊರೆಯಬಾರದೆಂಬ ಕಾರಣ ಮಹಾವಿಷ್ಣು ಗಯಾಸುರನಿಗೆ ಪಾತಾಳಕ್ಕೆ ಹೋಗೆಂದು ಸೂಚಿಸುತ್ತಾನೆ. ಪಾತಾಳಕ್ಕೆ ತಳ್ಳುವ ಸಲುವಾಗಿ ಗಯಾಸುರನ ತಲೆಯ ಮೇಲೆ ಭಗವಾನ್ ವಿಷ್ಣು ತನ್ನ ಬಲ ಪಾದವನ್ನಿಡುತ್ತಾನೆ. ವಿಷ್ಣು ತನ್ನ ಪಾದವನ್ನಿಟ್ಟ ಜಾಗದಲ್ಲಿ ಇಂದಿಗೂ ವಿಷ್ಣುಪಾದವನ್ನು ನಾವು ನೋಡಬಹುದು. ವಿಷ್ಣುಪಾದದ ಮೇಲ್ಬದಿಯಲ್ಲಿ ಶಂಖು, ಚಕ್ರ ಮತ್ತು ಗದೆಯ ಚಿಹ್ನೆಗಳಿವೆ. ಇವೆಲ್ಲವೂ ವಿಷ್ಣುವಿನ ಆಯುಧಗಳು.
ಪಾತಾಳಕ್ಕೆ ತಳ್ಳಲ್ಪಟ್ಟ ಗಯಾಸುರ ಆಹಾರಕ್ಕಾಗಿ ಯಾಚಿಸುತ್ತಾನೆ. ಆಗ ಮಹಾವಿಷ್ಣು ಪ್ರತಿನಿತ್ಯ ಯಾರಾದರೊಬ್ಬರು ನಿನಗೆ ಆಹಾರವನ್ನಿಟ್ಟು ಸಂತೃಪ್ತಿ ಪಡಿಸುತ್ತಾರೋ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಅಭಯ ನೀಡುತ್ತಾನೆ. ಗಯಾಸುರನಿಗೆ ಎಂದು ಆಹಾರ ದೊರೆಯುವುದಿಲ್ಲವೋ ಅಂದು ಆತ ಭೂಮಿಯೊಳಗಿನಿಂದ ಹೊರಗೆ ಬರುತ್ತಾನೆ ಎನ್ನುವ ಪ್ರತೀತಿಯಿದೆ. ಆ ಕಾರಣ ಗಯಾದಲ್ಲಿ ಇಂದಿಗೂ ನಿತ್ಯ ಶ್ರಾದ್ಧ ಕರ್ಮಗಳು ನಡೆಯುತ್ತವೆ.
ಬಿಹಾರದ ಮಾತೃಗಯಾ ಹಿಂದೂಗಳ ಪವಿತ್ರ ತಾಣ. ಪಿತೃಕಾರ್ಯ, ತರ್ಪಣ ಕ್ರಿಯೆಗಳಿಗೆ ಶ್ರೇಷ್ಠವಾದ ತಾಣ. ಗಯಾ ಶ್ರಾದ್ಧದಿಂದ ಗತಿಸಿದ ಆತ್ಮಗಳಿಗೆ ಮುಕ್ತಿ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಭಗವಾನ್ ಮಹಾವಿಷ್ಣುವಿನ ಪಾದವನ್ನು ಇಲ್ಲಿ ನೋಡಬಹುದು. ಗಯಾ ಗಧಾದರ ನಾಮದಲ್ಲಿ ಸ್ವಯಂ ವಿಷ್ಣುವಿನ ದಿವ್ಯ ಸನ್ನಿಧಾನ ಇಲ್ಲಿದೆ. ಗಯಾ ಕ್ಷೇತ್ರ ಕಲ್ಲುಬಂಡೆ, ಗುಡ್ಡಗಳಿಂದ ಆವೃತ್ತ ಪ್ರದೇಶವಾಗಿದೆ. ಗಯಾಕ್ಷೇತ್ರದಲ್ಲಿ ನಿತ್ಯ ಮೃತ ಆತ್ಮಗಳಿಗೆ ಶಾಂತಿಕೋರುವ ನಿಟ್ಟಿನಲ್ಲಿಶ್ರಾದ್ಧ ಕಾರ್ಯಗಳು ನಡೆಯುತ್ತವೆ.
ಗಯಾ ಕ್ಷೇತ್ರ ಕಲ್ಲುಬಂಡೆಗಳಿಂದ ಆವೃತ್ತವಾದ ಪ್ರದೇಶ. ಫಲ್ಗು ನದಿ ತೀರದ ಸ್ನಾನದ ಘಟ್ಟ ಮತ್ತು ದೇವಸ್ಥಾನ ಗಮನಾರ್ಹ. ಅಶ್ವತ್ಥ , ಅರಳಿಮರಗಳ ತಾಣ. ಕ್ಷೇತ್ರದ ಮಂಗಳಗೌರಿ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣ ಪ್ರಾಕಾರಗಳಿದ್ದು ಅದು ಶಿವನ ಮೊದಲ ಪತ್ನಿ ಸತಿಯನ್ನು ನೆನಪಿಸುತ್ತದೆ.
ವಿಷ್ಣುಪಾದದಲ್ಲಿರುವ ದೇಗುಲ ಹಾಗೂ ಫಲ್ಗುಣಿ ನದಿ ತೀರದಲ್ಲಿರುವ ಕಪ್ಪು ಬಂಡೆಯ ಮೇಲಿನ ವಿಷ್ಣುಪಾದ ಗಯಾಸುರನಿಗೆ ವಿಷ್ಣುದೇವರು ನೀಡಿದ ವರದ ಪ್ರತೀಕವಾಗಿದೆ.
ಮಾತೃಗಯಾ ಫಲ್ಗು ನದಿ ತೀರದಲ್ಲಿದೆ. ಬಿಹಾರದ ರಾಜಧಾನಿ ಪಟ್ನಾದಿಂದ 100 ಕಿ.ಮೀ. ದೂರದಲ್ಲಿದೆ. ಪೂರ್ವದಲ್ಲಿಪಟ್ನಾಕ್ಕೆ ಪಾಟಲಿಪುತ್ರ ಎಂಬ ಹೆಸರಿತ್ತು. ಗಯಾಸುರನ ಕಾರಣ ಈ ಪ್ರದೇಶಕ್ಕೆ ಗಯಾ ಎಂಬ ಹೆಸರು ಬಂದಿದೆ.
ಇತಿಹಾಸ: ಗಯಾಸುರ ಒಮ್ಮೆ ಕಠಿಣತಮವಾದ ತಪಸ್ಸಿನಲ್ಲಿ ತೊಡಗುತ್ತಾನೆ. ಅದರ ಪ್ರಭಾವದ ಕಾರಣ ಸ್ವರ್ಗಲೋಕವೇ ಕಂಪಿಸುತ್ತದೆ. ದೇವತೆಗಳು ಚಿಂತಿತರಾಗುತ್ತಾರೆ. ಅವರೆಲ್ಲರೂ ಭಗವಾನ್ ಮಹಾವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಕೋರಿಕೆಯಂತೆ ಮಹಾವಿಷ್ಣು ಗಯಾಸುರನೆದುರು ಪ್ರತ್ಯಕ್ಷನಾಗುತ್ತಾನೆ. ನಿನ್ನ ಉಗ್ರ ತಪಸ್ಸನ್ನು ಇಲ್ಲಿಗೇ ನಿಲ್ಲಿಸು. ನೀನು ಬಯಸಿದ ವರವನ್ನು ಬೇಡಿಕೋ ಎನ್ನುತ್ತಾನೆ. ಆಗ ಗಯಾಸುರ ಎಲ್ಲಾ ತೀರ್ಥಕ್ಷೇತ್ರಗಳಿಗಿಂತಲೂ ನಾನಿರುವ ಕ್ಷೇತ್ರ ಪವಿತ್ರಧಾಮವಾಗಬೇಕು ಎನ್ನುತ್ತಾನೆ. ಅದಕ್ಕೆ ಮಹಾವಿಷ್ಣು ತಥಾಸ್ತು ಎನ್ನುತ್ತಾನೆ. ದೇವತೆಗಳು ಸಂತಸದಿಂದ ಸ್ವರ್ಗಲೋಕಕ್ಕೆ ಮರಳುತ್ತಾರೆ. ಗಯಾಸುರನಿಲ್ಲದ ಕಾರಣ ಭೂಮಿ ಬರಡಾಯಿತು ಎಂದು ಭಾವಿಸುತ್ತಾರೆ. ಆಗ ಮಹಾವಿಷ್ಣು ಬ್ರಹ್ಮಾದಿ ದೇವತೆಗಳನ್ನು ಕರೆದು ಯಜ್ಞವನ್ನು ಮಾಡುವಂತೆ ಸೂಚಿಸುತ್ತಾರೆ. ಅಷ್ಟೇ ಅಲ್ಲ, ಗಯಾಸುರನ ಬಳಿ ಹೋಗಿ ಆತನ ಶರೀರವನ್ನೇ ಯಜ್ಞಕ್ಕೆ ಆಹುತಿಯನ್ನಾಗಿ ಮಾಡಿ ಎಂದು ಹೇಳುತ್ತಾರೆ.
ದೇವತೆಗಳ ಕೋರಿಕೆಗೆ ಮರು ಮಾತನಾಡದೇ ಗಯಾಸುರ ಒಪ್ಪುತ್ತಾನೆ. ಆತ ನೆಲದ ಮೇಲೆ ಮಲಗುತ್ತಾನೆ. ಗಯಾಸುರನ ದೇಹದ ಮೇಲೆ ಯಜ್ಞವನ್ನು ಮಾಡಲು ಬ್ರಹ್ಮ ಮುಂದಾಗುತ್ತಾನೆ. ಯಜ್ಞಕಾರ್ಯ ಆರಂಭವಾಗುತ್ತಿದ್ದಂತೆ ಗಯಾಸುರನ ದೇಹ ಅಲುಗಾಡಲು ಆರಂಭಿಸುತ್ತದೆ. ಹೀಗಾದರೆ ಯಜ್ಞ ಕಾರ್ಯ ಮಾಡುವುದು ಕಷ್ಟವಾಗುತ್ತದೆ. ಮುಂದೇನು ಮಾಡುವುದು ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂದು ಯೋಚಿಸುತ್ತಾನೆ ಪ್ರಜಾಪತಿ. ಆಗ ದೇವಾನುದೇವತೆಗಳೆಲ್ಲರೂ ಜತೆಗೂಡಿ ಕಲ್ಲೊಂದನ್ನು ಗಯಾಸುರನ ದೇಹದ ಮೇಲಿಡುತ್ತಾರೆ. ಆ ಶಿಲೆಯೊಳಗೆ ಸ್ವಯಂ ವಿಷ್ಣುವೇ ಪ್ರವೇಶಿಸುತ್ತಾನೆ. ಹಾಗಾಗಿ ಗಯಾದಲ್ಲಿ ಸ್ವಯಂ ವಿಷ್ಣು ಮತ್ತು ದೇವಾನುದೇವತೆಗಳು ನೆಲೆಸಿದ್ದಾರೆ.
ಅಧರ್ಮೀಯರಿಗೆ ಮೋಕ್ಷ ದೊರೆಯಬಾರದೆಂಬ ಕಾರಣ ಮಹಾವಿಷ್ಣು ಗಯಾಸುರನಿಗೆ ಪಾತಾಳಕ್ಕೆ ಹೋಗೆಂದು ಸೂಚಿಸುತ್ತಾನೆ. ಪಾತಾಳಕ್ಕೆ ತಳ್ಳುವ ಸಲುವಾಗಿ ಗಯಾಸುರನ ತಲೆಯ ಮೇಲೆ ಭಗವಾನ್ ವಿಷ್ಣು ತನ್ನ ಬಲ ಪಾದವನ್ನಿಡುತ್ತಾನೆ. ವಿಷ್ಣು ತನ್ನ ಪಾದವನ್ನಿಟ್ಟ ಜಾಗದಲ್ಲಿ ಇಂದಿಗೂ ವಿಷ್ಣುಪಾದವನ್ನು ನಾವು ನೋಡಬಹುದು. ವಿಷ್ಣುಪಾದದ ಮೇಲ್ಬದಿಯಲ್ಲಿ ಶಂಖು, ಚಕ್ರ ಮತ್ತು ಗದೆಯ ಚಿಹ್ನೆಗಳಿವೆ. ಇವೆಲ್ಲವೂ ವಿಷ್ಣುವಿನ ಆಯುಧಗಳು.
ಪಾತಾಳಕ್ಕೆ ತಳ್ಳಲ್ಪಟ್ಟ ಗಯಾಸುರ ಆಹಾರಕ್ಕಾಗಿ ಯಾಚಿಸುತ್ತಾನೆ. ಆಗ ಮಹಾವಿಷ್ಣು ಪ್ರತಿನಿತ್ಯ ಯಾರಾದರೊಬ್ಬರು ನಿನಗೆ ಆಹಾರವನ್ನಿಟ್ಟು ಸಂತೃಪ್ತಿ ಪಡಿಸುತ್ತಾರೋ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಅಭಯ ನೀಡುತ್ತಾನೆ. ಗಯಾಸುರನಿಗೆ ಎಂದು ಆಹಾರ ದೊರೆಯುವುದಿಲ್ಲವೋ ಅಂದು ಆತ ಭೂಮಿಯೊಳಗಿನಿಂದ ಹೊರಗೆ ಬರುತ್ತಾನೆ ಎನ್ನುವ ಪ್ರತೀತಿಯಿದೆ. ಆ ಕಾರಣ ಗಯಾದಲ್ಲಿ ಇಂದಿಗೂ ನಿತ್ಯ ಶ್ರಾದ್ಧ ಕರ್ಮಗಳು ನಡೆಯುತ್ತವೆ.