- ಓಶೋ
ದೈವಕೇಂದ್ರಿತ ಧರ್ಮ ಮತ್ತು ದೈವರಹಿತ ಧರ್ಮಗಳ ನಡುವೆ ಅಪಾರವಾದ ವ್ಯತ್ಯಾಸವಿದೆ. ದೈವಕೇಂದ್ರಿತ ಧರ್ಮ ಒಂದು ಹುಸಿಯಾಗಿದೆ. ದೈವವೆಂಬುದು ಅತಿದೊಡ್ಡ ಹುಸಿ. ಅದು ತನ್ನ ಸುತ್ತ ಹಲವು ಹುಸಿಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಹುಸಿಯಾದುದು ತನ್ನ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಲಾರದು. ಅದು ತನ್ನನ್ನು ಬೆಂಬಲಿಸುವ ಇನ್ನೂ ಹಲವು ಹುಸಿಗಳನ್ನು ಆಶ್ರಯಿಸುತ್ತದೆ.
ಈ ಹಿಂದೆ ಹೇಳಿದಂತೆ, ದೇವರೆಂಬುದು ನಮ್ಮದೇ ಭಯ, ವಿಹ್ವಲತೆ, ತಳಮಳ ಮತ್ತು ಅಸುರಕ್ಷಿತ ಭಾವಗಳ ಫಲಿತವಾದ ಕಾರಣ ಅದು ಮನುಷ್ಯನ ಮನಸ್ಸಿಗೆ ಅಂಟಿರುವ ಒಂದು ಸೋಂಕಾಗಿದೆ, ಒಂದು ರೋಗವಾಗಿದೆ. ಆದ್ದರಿಂದ ಎಲ್ಲ ದೈವಕೇಂದ್ರಿತ ಧರ್ಮಗಳೂ ಒಂದಲ್ಲ, ಹಲವು ಸುಳ್ಳುಗಳನ್ನು ಅಂದರೆ ಪ್ರಾರ್ಥನೆ, ಪುರೋಹಿತ, ಗುಡಿ, ಚರ್ಚು, ಮಸೀದಿ ಇತ್ಯಾದಿ ಸಂಘಟಿತ ರೂಪಗಳನ್ನು ಆಶ್ರಯಿಸಿಕೊಂಡಿರುತ್ತವೆ. ಸತ್ಯವಾದರೂ ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲದು. ಸತ್ಯವಾದರೂ ಬಯಲಿನಂತೆ ಮುಕ್ತವಾದುದು. ಅದಕ್ಕೆ ಯಾವುದೇ ತರ್ಕ, ವಾದ, ಸಾಕ್ಷಿ, ಋುಜುವಾತುಗಳೂ ಅಗತ್ಯವಿರುವುದಿಲ್ಲ. ನಿಜವಾದ ಧಾರ್ಮಿಕತೆ ನಮ್ಮ ಅಂತರಂಗದ ಕೇಂದ್ರಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಎಂದೂ ದೈವಕೇಂದ್ರಿತವಾಗಿರುವುದಿಲ್ಲ.
ದೈವಕೇಂದ್ರಿತ ಮತ್ತು ದೈವರಹಿತ ಧರ್ಮವನ್ನು ಅನುಸರಿಸುವವರಲ್ಲಿ ಕೆಲವು ಸ್ಪಷ್ಟ ವ್ಯತ್ಯಾಸಗಳನ್ನು ಕಾಣಬಹುದು. ದೈವಕೇಂದ್ರಿತ ಧರ್ಮವನ್ನು ಅನುಸರಿಸುವವರು ಆಂತರ್ಯದಲ್ಲಿ ಕ್ರೂರಿಗಳೂ ಸ್ವಾತಂತ್ರ್ಯದ ವಿರೋಧಿಗಳೂ ಆಗಿರುವುದು ಕಂಡುಬರುತ್ತದೆ. ತಾವು ನಂಬಿದ ಸುಳ್ಳಿನ ಮೇಲೆ ಯಾರಾದರೂ ಆಕ್ರಮಣ ಮಾಡಿಯಾರು ಎಂದು ಅವರು ಸದಾ ಆತಂಕಿತರಾಗಿರುವರು. ದೈವಕೇಂದ್ರಿತ ಧರ್ಮವು ತನ್ನ ಅನುಯಾಯಿಗಳು ಬೆಳೆಸಿಕೊಂಡಿರುವ ಮೌಢ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅಂತಹ ಮೌಢ್ಯಗಳನ್ನು ತೊಡೆದು ಹಾಕಲು ಎಂದೂ ಪ್ರಯತ್ನಿಸುವುದಿಲ್ಲ. ಖಾಲಿ ಶಬ್ದಗಳು ಮತ್ತು ಜಡ ಸಿದ್ಧಾಂತಗಳು ವ್ಯಕ್ತಿಗಳ ಧೋರಣೆಯನ್ನು ಬದಲಾಯಿಸಲಾರವು. ಅಂತಹ ವ್ಯಕ್ತಿಗಳು ಕ್ರಮೇಣ ಸೋಗಲಾಡಿತನ ಬೆಳೆಸಿಕೊಳ್ಳುವರು. ದೈವಕೇಂದ್ರಿತ ಧರ್ಮಗಳು ಮನುಷ್ಯರಿಗೆ ಅವರ ನಿಜವಾದ ಮುಖದರ್ಶನ ಮಾಡಿಸದೆ ಅವರಿಗೆ ಅದ್ಭುತವಾದ ಮುಖವಾಡಗಳನ್ನು ಪೂರೈಸುವುದರಲ್ಲಿ ಯಶಸ್ವಿಯಾಗಿವೆ. ದೈವಕೇಂದ್ರಿತ ಧರ್ಮಗಳ ಕಾರಣದಿಂದಾಗಿ ಪ್ರತಿಯೊಬ್ಬರೂ ತಮ್ಮ ಪ್ರಜ್ಞೆಯನ್ನು ನಿರ್ಲಕ್ಷಿಸಿ ಬದುಕುತ್ತಿರುವರು.
ದೈವವೆಂಬುದು ಹುಸಿಯಾದ ಕಾರಣ ನಮ್ಮ ಪ್ರಾರ್ಥನೆಗಳೂ ಹುಸಿಯಾಗಿವೆ, ನಮ್ಮ ನಂಬಿಕೆಗಳು ನಮ್ಮ ಮೇಲೆ ಹೇರಲಾದ ನಂಬಿಕೆಗಳಾಗಿವೆ. ಆದ್ದರಿಂದಲೇ ಪ್ರತಿಯೊಂದು ದೈವಕೇಂದ್ರಿತ ಧರ್ಮವೂ ತಮ್ಮ ಅನುಯಾಯಿಗಳಿಗೆ ವಿಧಿ- ನಿಷೇಧಗಳನ್ನು ಬೋಧಿಸುತ್ತಿವೆ. ಹೇರಲಾದ ನಂಬಿಕೆಗಳು, ವಿಧಿ ನಿಷೇಧಗಳು ಮನುಷ್ಯನ ಘನತೆಯನ್ನು ಅವಮಾನಿಸುತ್ತವೆ. ಸ್ವಾತಂತ್ರ್ಯವು ಗುಲಾಮತನವಾಗಿ ರೂಪಾಂತರಗೊಳ್ಳುತ್ತದೆ. ಜಗತ್ತಿನ ಎಲ್ಲ ಗುಲಾಮತನಗಳಿಗಿಂತಲೂ ಆಧ್ಯಾತ್ಮಿಕ ಗುಲಾಮತನ ಅತ್ಯಂತ ಕುರೂಪವಾದುದು. ಸ್ವಾತಂತ್ರ್ಯವೆಂಬುದು ನಮ್ಮನ್ನು ಆವರಿಸಿರುವ ಸುಳ್ಳುಗಳಿಂದ ವಿಮೋಚನೆ ಪಡೆದುಕೊಳ್ಳುವುದಾಗಿದೆ.
ದೈವಕೇಂದ್ರಿತ ಧರ್ಮ ಮತ್ತು ಧಾರ್ಮಿಕ ಪ್ರವೃತ್ತಿಗಳೆರಡೂ ಮನುಷ್ಯನನ್ನು ಸತತವಾಗಿ ನಿಯಂತ್ರಿಸುವ ಪ್ರವೃತ್ತಿಗಳೇ ಆಗಿವೆ. ಒಂದು ಬಾಹ್ಯಪ್ರೇರಣೆಯಿಂದ ನಿಯಂತ್ರಿಸಿದರೆ ಮತ್ತೊಂದು ಮನಃಸಾಕ್ಷಿ ಎಂಬ ಅಂತಃಪ್ರೇರಣೆಯಿಂದ ನಿಯಂತ್ರಿಸುತ್ತದೆ. ದೈವರಹಿತವಾದ ಧಾರ್ಮಿಕ ಪ್ರವೃತ್ತಿಯಲ್ಲಿ ಯಾರೂ ಯಾರನ್ನೂ ತೀರ್ಮಾನಿಸುವುದಿಲ್ಲ. ದೈವಕೇಂದ್ರಿತ ಧರ್ಮದಲ್ಲಾದರೂ ಸಿದ್ಧಾಂತಗಳಿವೆಯೇ ವಿನಾ ಧಾರ್ಮಿಕತೆಯಿಲ್ಲ, ಅನುಭವ ಪ್ರಾಮಾಣ್ಯವಿಲ್ಲ, ದೈವಕೇಂದ್ರಿತ ಧರ್ಮದಲ್ಲಿ ನೈತಿಕತೆ ಉಂಟು. ಪ್ರಕೃತಿಗೆ ವಿರುದ್ಧವಾಗಿ ನಿಲ್ಲಬೇಕೆಂದು ಬೋಧಿಸುವ ಅನುಶಾಸನಗಳುಂಟು. ಪ್ರಕೃತಿಯೇ ವಾಸ್ತವ ಮತ್ತು ದೈವವೆಂಬುದು ಹುಸಿಯಾದ ಕಾರಣ ದೈವವು ಎಂದಿಗೂ ಪ್ರಕೃತಿಗೆ ವಿರುದ್ಧವಾದ ಒಂದು ಪರಿಕಲ್ಪನೆಯಾಗಿರುತ್ತದೆ.
ದೈವಕೇಂದ್ರಿತ ಧರ್ಮ ಮತ್ತು ದೈವರಹಿತ ಧರ್ಮಗಳ ನಡುವೆ ಅಪಾರವಾದ ವ್ಯತ್ಯಾಸವಿದೆ. ದೈವಕೇಂದ್ರಿತ ಧರ್ಮ ಒಂದು ಹುಸಿಯಾಗಿದೆ. ದೈವವೆಂಬುದು ಅತಿದೊಡ್ಡ ಹುಸಿ. ಅದು ತನ್ನ ಸುತ್ತ ಹಲವು ಹುಸಿಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಹುಸಿಯಾದುದು ತನ್ನ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಲಾರದು. ಅದು ತನ್ನನ್ನು ಬೆಂಬಲಿಸುವ ಇನ್ನೂ ಹಲವು ಹುಸಿಗಳನ್ನು ಆಶ್ರಯಿಸುತ್ತದೆ.
ಈ ಹಿಂದೆ ಹೇಳಿದಂತೆ, ದೇವರೆಂಬುದು ನಮ್ಮದೇ ಭಯ, ವಿಹ್ವಲತೆ, ತಳಮಳ ಮತ್ತು ಅಸುರಕ್ಷಿತ ಭಾವಗಳ ಫಲಿತವಾದ ಕಾರಣ ಅದು ಮನುಷ್ಯನ ಮನಸ್ಸಿಗೆ ಅಂಟಿರುವ ಒಂದು ಸೋಂಕಾಗಿದೆ, ಒಂದು ರೋಗವಾಗಿದೆ. ಆದ್ದರಿಂದ ಎಲ್ಲ ದೈವಕೇಂದ್ರಿತ ಧರ್ಮಗಳೂ ಒಂದಲ್ಲ, ಹಲವು ಸುಳ್ಳುಗಳನ್ನು ಅಂದರೆ ಪ್ರಾರ್ಥನೆ, ಪುರೋಹಿತ, ಗುಡಿ, ಚರ್ಚು, ಮಸೀದಿ ಇತ್ಯಾದಿ ಸಂಘಟಿತ ರೂಪಗಳನ್ನು ಆಶ್ರಯಿಸಿಕೊಂಡಿರುತ್ತವೆ. ಸತ್ಯವಾದರೂ ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲದು. ಸತ್ಯವಾದರೂ ಬಯಲಿನಂತೆ ಮುಕ್ತವಾದುದು. ಅದಕ್ಕೆ ಯಾವುದೇ ತರ್ಕ, ವಾದ, ಸಾಕ್ಷಿ, ಋುಜುವಾತುಗಳೂ ಅಗತ್ಯವಿರುವುದಿಲ್ಲ. ನಿಜವಾದ ಧಾರ್ಮಿಕತೆ ನಮ್ಮ ಅಂತರಂಗದ ಕೇಂದ್ರಕ್ಕೆ ಸಂಬಂಧಿಸಿದ ವಿಷಯವಾಗಿದ್ದು ಎಂದೂ ದೈವಕೇಂದ್ರಿತವಾಗಿರುವುದಿಲ್ಲ.
ದೈವಕೇಂದ್ರಿತ ಮತ್ತು ದೈವರಹಿತ ಧರ್ಮವನ್ನು ಅನುಸರಿಸುವವರಲ್ಲಿ ಕೆಲವು ಸ್ಪಷ್ಟ ವ್ಯತ್ಯಾಸಗಳನ್ನು ಕಾಣಬಹುದು. ದೈವಕೇಂದ್ರಿತ ಧರ್ಮವನ್ನು ಅನುಸರಿಸುವವರು ಆಂತರ್ಯದಲ್ಲಿ ಕ್ರೂರಿಗಳೂ ಸ್ವಾತಂತ್ರ್ಯದ ವಿರೋಧಿಗಳೂ ಆಗಿರುವುದು ಕಂಡುಬರುತ್ತದೆ. ತಾವು ನಂಬಿದ ಸುಳ್ಳಿನ ಮೇಲೆ ಯಾರಾದರೂ ಆಕ್ರಮಣ ಮಾಡಿಯಾರು ಎಂದು ಅವರು ಸದಾ ಆತಂಕಿತರಾಗಿರುವರು. ದೈವಕೇಂದ್ರಿತ ಧರ್ಮವು ತನ್ನ ಅನುಯಾಯಿಗಳು ಬೆಳೆಸಿಕೊಂಡಿರುವ ಮೌಢ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅಂತಹ ಮೌಢ್ಯಗಳನ್ನು ತೊಡೆದು ಹಾಕಲು ಎಂದೂ ಪ್ರಯತ್ನಿಸುವುದಿಲ್ಲ. ಖಾಲಿ ಶಬ್ದಗಳು ಮತ್ತು ಜಡ ಸಿದ್ಧಾಂತಗಳು ವ್ಯಕ್ತಿಗಳ ಧೋರಣೆಯನ್ನು ಬದಲಾಯಿಸಲಾರವು. ಅಂತಹ ವ್ಯಕ್ತಿಗಳು ಕ್ರಮೇಣ ಸೋಗಲಾಡಿತನ ಬೆಳೆಸಿಕೊಳ್ಳುವರು. ದೈವಕೇಂದ್ರಿತ ಧರ್ಮಗಳು ಮನುಷ್ಯರಿಗೆ ಅವರ ನಿಜವಾದ ಮುಖದರ್ಶನ ಮಾಡಿಸದೆ ಅವರಿಗೆ ಅದ್ಭುತವಾದ ಮುಖವಾಡಗಳನ್ನು ಪೂರೈಸುವುದರಲ್ಲಿ ಯಶಸ್ವಿಯಾಗಿವೆ. ದೈವಕೇಂದ್ರಿತ ಧರ್ಮಗಳ ಕಾರಣದಿಂದಾಗಿ ಪ್ರತಿಯೊಬ್ಬರೂ ತಮ್ಮ ಪ್ರಜ್ಞೆಯನ್ನು ನಿರ್ಲಕ್ಷಿಸಿ ಬದುಕುತ್ತಿರುವರು.
ದೈವವೆಂಬುದು ಹುಸಿಯಾದ ಕಾರಣ ನಮ್ಮ ಪ್ರಾರ್ಥನೆಗಳೂ ಹುಸಿಯಾಗಿವೆ, ನಮ್ಮ ನಂಬಿಕೆಗಳು ನಮ್ಮ ಮೇಲೆ ಹೇರಲಾದ ನಂಬಿಕೆಗಳಾಗಿವೆ. ಆದ್ದರಿಂದಲೇ ಪ್ರತಿಯೊಂದು ದೈವಕೇಂದ್ರಿತ ಧರ್ಮವೂ ತಮ್ಮ ಅನುಯಾಯಿಗಳಿಗೆ ವಿಧಿ- ನಿಷೇಧಗಳನ್ನು ಬೋಧಿಸುತ್ತಿವೆ. ಹೇರಲಾದ ನಂಬಿಕೆಗಳು, ವಿಧಿ ನಿಷೇಧಗಳು ಮನುಷ್ಯನ ಘನತೆಯನ್ನು ಅವಮಾನಿಸುತ್ತವೆ. ಸ್ವಾತಂತ್ರ್ಯವು ಗುಲಾಮತನವಾಗಿ ರೂಪಾಂತರಗೊಳ್ಳುತ್ತದೆ. ಜಗತ್ತಿನ ಎಲ್ಲ ಗುಲಾಮತನಗಳಿಗಿಂತಲೂ ಆಧ್ಯಾತ್ಮಿಕ ಗುಲಾಮತನ ಅತ್ಯಂತ ಕುರೂಪವಾದುದು. ಸ್ವಾತಂತ್ರ್ಯವೆಂಬುದು ನಮ್ಮನ್ನು ಆವರಿಸಿರುವ ಸುಳ್ಳುಗಳಿಂದ ವಿಮೋಚನೆ ಪಡೆದುಕೊಳ್ಳುವುದಾಗಿದೆ.
ದೈವಕೇಂದ್ರಿತ ಧರ್ಮ ಮತ್ತು ಧಾರ್ಮಿಕ ಪ್ರವೃತ್ತಿಗಳೆರಡೂ ಮನುಷ್ಯನನ್ನು ಸತತವಾಗಿ ನಿಯಂತ್ರಿಸುವ ಪ್ರವೃತ್ತಿಗಳೇ ಆಗಿವೆ. ಒಂದು ಬಾಹ್ಯಪ್ರೇರಣೆಯಿಂದ ನಿಯಂತ್ರಿಸಿದರೆ ಮತ್ತೊಂದು ಮನಃಸಾಕ್ಷಿ ಎಂಬ ಅಂತಃಪ್ರೇರಣೆಯಿಂದ ನಿಯಂತ್ರಿಸುತ್ತದೆ. ದೈವರಹಿತವಾದ ಧಾರ್ಮಿಕ ಪ್ರವೃತ್ತಿಯಲ್ಲಿ ಯಾರೂ ಯಾರನ್ನೂ ತೀರ್ಮಾನಿಸುವುದಿಲ್ಲ. ದೈವಕೇಂದ್ರಿತ ಧರ್ಮದಲ್ಲಾದರೂ ಸಿದ್ಧಾಂತಗಳಿವೆಯೇ ವಿನಾ ಧಾರ್ಮಿಕತೆಯಿಲ್ಲ, ಅನುಭವ ಪ್ರಾಮಾಣ್ಯವಿಲ್ಲ, ದೈವಕೇಂದ್ರಿತ ಧರ್ಮದಲ್ಲಿ ನೈತಿಕತೆ ಉಂಟು. ಪ್ರಕೃತಿಗೆ ವಿರುದ್ಧವಾಗಿ ನಿಲ್ಲಬೇಕೆಂದು ಬೋಧಿಸುವ ಅನುಶಾಸನಗಳುಂಟು. ಪ್ರಕೃತಿಯೇ ವಾಸ್ತವ ಮತ್ತು ದೈವವೆಂಬುದು ಹುಸಿಯಾದ ಕಾರಣ ದೈವವು ಎಂದಿಗೂ ಪ್ರಕೃತಿಗೆ ವಿರುದ್ಧವಾದ ಒಂದು ಪರಿಕಲ್ಪನೆಯಾಗಿರುತ್ತದೆ.