ಆ್ಯಪ್ನಗರ

ಸಕಲಾಭೀಷ್ಟಗಳು ನೆರವೇರಲು ಶಿವನ ಪೂಜೆ ಹೇಗೆ ಮಾಡಬೇಕು?

ಶಿವನೆಂದರೆ ಶಾಂತ. ಶಾಂತ ರೂಪನಾದ ಶಿವನ ಆರಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಮಹಾಶಿವರಾತ್ರಿ ಮಾಘ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಬರುತ್ತದೆ.

Vijaya Karnataka Web 12 Feb 2018, 2:45 pm

ಪ್ರೊ. ವಿಷ್ಣುಜೋಷಿ, ಕುಮುಟಾ

ಶಿವನೆಂದರೆ ಶಾಂತ. ಶಾಂತ ರೂಪನಾದ ಶಿವನ ಆರಾಧನೆಯನ್ನು ಯಾರು ಬೇಕಾದರೂ ಮಾಡಬಹುದು. ಮಹಾಶಿವರಾತ್ರಿ ಮಾಘ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಬರುತ್ತದೆ. ಅಂತೆಯೇ ಪ್ರತಿ ತಿಂಗಳ ಕೃಷ್ಣ ಪಕ್ಷ ದ ಚತುರ್ದಶಿಯನ್ನು ಮಾಸ ಶಿವರಾತ್ರಿ ಎಂದು ಕರೆಯುವ ವಾಡಿಕೆಯಿದೆ. ವೇದದ ಅಣತಿಗೆ ವಿಧಿ ಎನ್ನುತ್ತಾರೆ.

Vijaya Karnataka Web how to do shiva pooja
ಸಕಲಾಭೀಷ್ಟಗಳು ನೆರವೇರಲು ಶಿವನ ಪೂಜೆ ಹೇಗೆ ಮಾಡಬೇಕು?


ಇತ್ತೀಚಿನ ದಿನಗಳಲ್ಲಿ ಶಾಸ್ತ್ರಗಳ ಅಣತಿಯೂ ವಿಧಿಯಾಗಿದೆ. ಮಹಾಶಿವರಾತ್ರಿಯಂದು ಸ್ತ್ರೀ, ಪುರುಷರಾದಿಯಾಗಿ ಎಲ್ಲರೂ ಜಾಗರಣೆ ಮಾಡಬೇಕೆಂಬ ವಿಧಿಯಿದೆ. ಜಾಗರಣೆ ಅಂದರೆ ಜಾಗೃತ ಸ್ಥಿತಿ. ಜಾಗೃತಾವಸ್ಥೆಯಲ್ಲಿ ಜ್ಞಾನ ಉದ್ದೀಪನವಾಗುತ್ತದೆ. ಯೋಗಶಾಸ್ತ್ರದ ಪ್ರಕಾರ ಪರಮೇಶ್ವರನ ಮೂರನೆಯ ಕಣ್ಣಿಗೆ ಸುಷುಮ್ನಾ ನಾಡಿ ಎನ್ನುತ್ತಾರೆ. ನಿದ್ರೆ ಅಪರ ಮರಣವಿದ್ದಂತೆ. ಅದನ್ನು ಗೆಲ್ಲಲು ಜಾಗರಣೆ ಮಾಡಬೇಕೆಂಬ ಭಾವವಿದೆ. ಶಿವನಿಗೆ ಎರಡು ರೂಪಗಳಿವೆ.

ಒಂದು ಸಮಾಧಿ ರೂಪ. ಇನ್ನೊಂದು ನೃತ್ಯ ರೂಪ. ಸಮಾಧಿ ರೂಪ ನಿರ್ಗುಣವಾಗಿದ್ದು, ನೃತ್ಯ ರೂಪವು ಸಗುಣವಾಗಿದೆ. ಪರಮೇಶ್ವರನೇ ನಟರಾಜ. ಆದಕಾರಣ ನೃತ್ಯವು ಈಶ್ವರ ಭಕ್ತಿಯ ಸಾಧನ. ಉತ್ತರ ಭಾರತದ ಕೆಲವು ಕಡೆಗೆ ಶಿವ ದೇವಾಲಯಗಳಲ್ಲಿ ಭಯ-ಭಕ್ತಿಯಿಂದ ನೃತ್ಯ ಮಾಡುವ ಪದ್ಧತಿಯನ್ನು ನೋಡಬಹುದು.

ಶಿವರಾತ್ರಿಯಂದು ಈಶ್ವರನನ್ನು ಸ್ತ್ರೀಪುರುಷರಾದಿಯಾಗಿ ಬಿಲ್ವಪತ್ರೆಯಿಂದ ಪೂಜಿಸಬಹುದು. ಇನ್ನುಳಿದಂತೆ ನಿಶಿಗಂಧ, ಮಲ್ಲಿಗೆ, ಜಾಜಿ ಈ ಹೂವುಗಳನ್ನು ಹತ್ತರ ಸಂಖ್ಯೆಯಲ್ಲಿ ಅರ್ಪಿಸಬೇಕು. ಊದುಬತ್ತಿ, ಕೇದಗೆ, ಮಲ್ಲಿಗೆ ಇವುಗಳನ್ನು ಎರಡರ ಸಂಖ್ಯೆಯಲ್ಲಿ ಅರ್ಪಿಸಬೇಕು. ಈಶ್ವರನಿಗೆ ಭಸ್ಮ ಅಂದರೆ ಇಷ್ಟ. ಹಾಗಾಗಿ ಭಸ್ಮ ಧಾರಣೆಯಿಂದ ಸಕಲಾಭೀಷ್ಟಗಳು ನೆರವೇರುತ್ತವೆ ಎನ್ನುವ ನಂಬಿಕೆಯಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ