ಮನೆ ಕಟ್ಟುವವರಿಗೆ ತಲೆನೋವಾದ ಸರಕಾರದ ಹೊಸ ನೀತಿ
- ಗುರುದತ್ತ ಭಟ್ ಕಾರವಾರ
ಮರಳು ಖರೀದಿಸುವ ಗ್ರಾಹಕನೂ ಟ್ಯಾಕ್ಸ್ ಪೇಯರ್ ಐಡೆಂಟಿಫಿಕೇಶನ್ (ಟಿಐಎನ್) ಸಂಖ್ಯೆ ನಮೂದಿಸಬೇಕು ಎಂಬ ಹೊಸ ಮರಳು ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಇದರಿಂದ ಸಾಲ ಸೋಲ ಮಾಡಿ ಸ್ವಂತ ಮನೆ ಕಟ್ಟಿಕೊಳ್ಳಲು ಹೊರಟ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಮರಳು ಗಣಿಗಾರಿಕೆ ನಡೆಸುವ ಗುತ್ತಿಗೆದಾರರು ಟಿನ್ ಸಂಖ್ಯೆ ಹೊಂದಿರುವುದರ ಜೊತೆಗೆ ಗುತ್ತಿಗೆದಾರರಿಂದ ಮರಳು ಖರೀದಿಸುವ ಗ್ರಾಹಕನೂ ಟಿನ್ ಮತ್ತು ಪಾನ್ ಸಂಖ್ಯೆ ಹೊಂದಿರಬೇಕು ಎಂಬುದು ಹೊಸ ನಿಯಮದ ಪ್ರಮುಖ ಅಂಶ. ಆಗಸ್ಟ್ 29ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್. ಎಸ್. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸೆ. 23ರಂದು ಎಲ್ಲ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಿಗೆ ಆದೇಶ ರವಾನಿಸಲಾಗಿದೆ.
ಆದರೆ ಟಿನ್ ಸಂಖ್ಯೆ ಕೇವಲ ವ್ಯಾಪಾರಿಗಳಿಗೆ ಮಾತ್ರ ನೀಡಲಾಗುತ್ತದೆ. ಬೇರೆ ಬೇರೆ ಉದ್ಯೋಗದಲ್ಲಿರುವ ಸಾಮಾನ್ಯ ಜನ ಟಿನ್ ಸಂಖ್ಯೆ ಹೊಂದಿರುವುದಿಲ್ಲ. ಇದರಿಂದ ಮನೆ ನಿರ್ಮಿಸಿಕೊಳ್ಳುತ್ತಿರುವ ಜನಸಾಮಾನ್ಯರಿಗೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಅನುಭವವಾಗುತ್ತಿದೆ.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಕಲ್ಲು ಗಣಿಗಳ ಗುತ್ತಿಗೆದಾರರು ಅಕ್ರಮವಾಗಿ ಖನಿಜ ರವಾನೆ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಗಣಿಗಾರಿಕೆಗಳ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಆದೇಶದ ಇತರ ಅಂಶಗಳು:
ಮರಳು ಖರೀದಿಸುವ ಗ್ರಾಹಕನ ತಲೆನೋವು ಇಷ್ಟಕ್ಕೇ ಮುಗಿದಿಲ್ಲ. ಯಾವ ರಸ್ತೆಯಲ್ಲಿ ಮರಳನ್ನು ಕೊಂಡೊಯ್ಯುತ್ತೇನೆ, ಅಂತರ ಎಷ್ಟು ಎಂಬ ವಿವರಗಳನ್ನು ನಿಗದಿತ ಫಾರಂನಲ್ಲಿ ಭರ್ತಿ ಮಾಡಬೇಕು. ಇದನ್ನು ಗುತ್ತಿಗೆದಾರ ಈ ಮೇಲ್ ಮೂಲಕ ಇಲಾಖೆಗೆ ಕಳುಹಿಸಬೇಕಿದೆ.
- ಗುರುದತ್ತ ಭಟ್ ಕಾರವಾರ
ಮರಳು ಖರೀದಿಸುವ ಗ್ರಾಹಕನೂ ಟ್ಯಾಕ್ಸ್ ಪೇಯರ್ ಐಡೆಂಟಿಫಿಕೇಶನ್ (ಟಿಐಎನ್) ಸಂಖ್ಯೆ ನಮೂದಿಸಬೇಕು ಎಂಬ ಹೊಸ ಮರಳು ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಇದರಿಂದ ಸಾಲ ಸೋಲ ಮಾಡಿ ಸ್ವಂತ ಮನೆ ಕಟ್ಟಿಕೊಳ್ಳಲು ಹೊರಟ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಮರಳು ಗಣಿಗಾರಿಕೆ ನಡೆಸುವ ಗುತ್ತಿಗೆದಾರರು ಟಿನ್ ಸಂಖ್ಯೆ ಹೊಂದಿರುವುದರ ಜೊತೆಗೆ ಗುತ್ತಿಗೆದಾರರಿಂದ ಮರಳು ಖರೀದಿಸುವ ಗ್ರಾಹಕನೂ ಟಿನ್ ಮತ್ತು ಪಾನ್ ಸಂಖ್ಯೆ ಹೊಂದಿರಬೇಕು ಎಂಬುದು ಹೊಸ ನಿಯಮದ ಪ್ರಮುಖ ಅಂಶ. ಆಗಸ್ಟ್ 29ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್. ಎಸ್. ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸೆ. 23ರಂದು ಎಲ್ಲ ಜಿಲ್ಲೆಗಳ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಕಚೇರಿಗಳಿಗೆ ಆದೇಶ ರವಾನಿಸಲಾಗಿದೆ.
ಆದರೆ ಟಿನ್ ಸಂಖ್ಯೆ ಕೇವಲ ವ್ಯಾಪಾರಿಗಳಿಗೆ ಮಾತ್ರ ನೀಡಲಾಗುತ್ತದೆ. ಬೇರೆ ಬೇರೆ ಉದ್ಯೋಗದಲ್ಲಿರುವ ಸಾಮಾನ್ಯ ಜನ ಟಿನ್ ಸಂಖ್ಯೆ ಹೊಂದಿರುವುದಿಲ್ಲ. ಇದರಿಂದ ಮನೆ ನಿರ್ಮಿಸಿಕೊಳ್ಳುತ್ತಿರುವ ಜನಸಾಮಾನ್ಯರಿಗೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಅನುಭವವಾಗುತ್ತಿದೆ.
ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಕಲ್ಲು ಗಣಿಗಳ ಗುತ್ತಿಗೆದಾರರು ಅಕ್ರಮವಾಗಿ ಖನಿಜ ರವಾನೆ ಮಾಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಗಣಿಗಾರಿಕೆಗಳ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಆದೇಶದ ಇತರ ಅಂಶಗಳು:
ಮರಳು ಖರೀದಿಸುವ ಗ್ರಾಹಕನ ತಲೆನೋವು ಇಷ್ಟಕ್ಕೇ ಮುಗಿದಿಲ್ಲ. ಯಾವ ರಸ್ತೆಯಲ್ಲಿ ಮರಳನ್ನು ಕೊಂಡೊಯ್ಯುತ್ತೇನೆ, ಅಂತರ ಎಷ್ಟು ಎಂಬ ವಿವರಗಳನ್ನು ನಿಗದಿತ ಫಾರಂನಲ್ಲಿ ಭರ್ತಿ ಮಾಡಬೇಕು. ಇದನ್ನು ಗುತ್ತಿಗೆದಾರ ಈ ಮೇಲ್ ಮೂಲಕ ಇಲಾಖೆಗೆ ಕಳುಹಿಸಬೇಕಿದೆ.