ಆ್ಯಪ್ನಗರ

ಬಜೆಟ್‌ನಲ್ಲಿ ಸಣ್ಣಕೈಗಾರಿಕೆಗಳಿಗೆ ಉತ್ತೇಜನ ಸಂಭವ

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಸಣ್ಣ ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಾಗುವ ನಿರೀಕ್ಷೆ ಇದೆ. ನೋಟು ಅಮಾನ್ಯತೆಯ ನಂತರ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಮೃದ್ಧ ಠೇವಣಿ ಸಂಗ್ರಹವಾಗಿದ್ದು, ಭರಪೂರ ಸಾಲ ವಿತರಣೆಗೆ ಅವಕಾಶ ಸೃಷ್ಟಿಯಾಗಿದೆ.

Vijaya Karnataka Web 31 Jan 2017, 8:18 am

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಸಣ್ಣ ಉದ್ಯಮಿಗಳಿಗೆ ಸಾಕಷ್ಟು ಅನುಕೂಲವಾಗುವ ನಿರೀಕ್ಷೆ ಇದೆ. ನೋಟು ಅಮಾನ್ಯತೆಯ ನಂತರ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸಮೃದ್ಧ ಠೇವಣಿ ಸಂಗ್ರಹವಾಗಿದ್ದು, ಭರಪೂರ ಸಾಲ ವಿತರಣೆಗೆ ಅವಕಾಶ ಸೃಷ್ಟಿಯಾಗಿದೆ. ಡಿಜಿಟಲೀಕರಣದಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ಲಭ್ಯತೆಗೆ ಬೇಕಾದ ಅರ್ಹತೆಯೂ ಹೆಚ್ಚುತ್ತಿದೆ.

Vijaya Karnataka Web more important to small scale industries in budget
ಬಜೆಟ್‌ನಲ್ಲಿ ಸಣ್ಣಕೈಗಾರಿಕೆಗಳಿಗೆ ಉತ್ತೇಜನ ಸಂಭವ


ಇದರಿಂದ ಆ ವಲಯಕ್ಕೂ ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಣೆಯಾಗುವುದಂತೂ ಖಚಿತ. ನಗದು ರಹಿತ ವ್ಯವಹಾರ ನಡೆಸುವ ಬಿಸಿನೆಸ್‌ಗಳಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಲು ಸರಕಾರ ಉತ್ತೇಜನ ನೀಡುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಸಣ್ಣ ಬಿಸಿನೆಸ್‌ಗಳಿಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವ ನಿರೀಕ್ಷೆ ಇದೆ.

ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯ ಮಿತಿಯನ್ನು ವಾರ್ಷಿಕ ರೂ.ಗಳಿಗೆ ಏರಿಕೆ ಮಾಡುವ ಸಾಧ್ಯತೆಯೂ ಕಂಡು ಬರುತ್ತಿದೆ. ಇದರಿಂದ ವೇತನದಾರರ ಕೈಯಲ್ಲಿ ದುಡ್ಡು ಉಳಿಯಲಿದ್ದು, ಖರ್ಚು ಮಾಡಲಿದ್ದಾರೆ. ಪರಿಣಾಮ ಉದ್ಯಮದಲ್ಲಿ ಉತ್ಪಾದನೆಯ ಚಟುವಟಿಕೆಗಳು ಚುರುಕಾಗಲಿವೆ. ಮುಖ್ಯವಾಗಿ ಮೂಲ ಸೌಕರ್ಯ, ಶಿಕ್ಷಣ ವಲಯಕ್ಕೆ ಹೆಚ್ಚಿನ ಉತ್ತೇಜವನನ್ನು ನಿರೀಕ್ಷಿಸಲಾಗಿದೆ.

ಈಗಾಗಲೇ ಕಳೆದ ನವೆಂಬರ್‌ 8ರಂದು 500 ಮತ್ತು 1000 ರೂ.ಗಳ ನೋಟು ಅಮಾನ್ಯತೆಯಂಥ ಮಹತ್ತರ ಸುಧಾರಣಾ ಪ್ರಕ್ರಿಯೆಗಳು ಘೋಷಣೆಯಾಗಿರುವುದರಿಂದ ಈ ಸಲದ ಬಜೆಟ್‌ನಲ್ಲಿ ಭಾರಿ ಅಚ್ಚರಿ ಅಥವಾ ಸಂಚಲನಕಾರಿ ಘೋಷಣೆಗಳನ್ನು ನಿರೀಕ್ಷಿಸುತ್ತಿಲ್ಲ. ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡುವುದರಿಂದ ಭವಿಷ್ಯದಲ್ಲಿ ಜಿಡಿಪಿ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

ಈ ವರ್ಷ ಜುಲೈನಿಂದ ಮಹತ್ವದ ಸರಕು ಮತ್ತು ಸೇವಾ ತೆರಿಗೆಯು ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲಿದೆ. ಇದರಿಂದ ವ್ಯಾಪಾರ ವಹಿವಾಟುಗಳು ಡಿಜಿಟಲೀಕರಣ ವ್ಯಾಪ್ತಿಗೆ ವ್ಯಾಪಕವಾಗಿ ಬರಲಿದೆ. ಪರಿಣಾಮ ಸಣ್ಣ ವ್ಯಾಪಾರ ಮತ್ತು ಉದ್ದಿಮೆಗಳಲ್ಲಿ ದಾಖಲಾತಿ, ಪಾರದರ್ಶಕತೆ ಮತ್ತು ಸಾಲ ಸೌಲಭ್ಯದ ವಿಸ್ತರಣೆಯಾಗಲಿದೆ. ಸಣ್ಣ ಉದ್ದಿಮೆಗಳ ಸಾಮರ್ಥ್ಯ‌ವನ್ನು ಹೆಚ್ಚಿಸಲಿದೆ. ಆದ್ದರಿಂದ ಜಿಎಸ್‌ಟಿ ಜಾರಿಗೆ ಪೂರಕವಾಗಬಲ್ಲಂತಹ ಆಯವ್ಯಯವನ್ನು ನಿರೀಕ್ಷಿಸಬಹುದು.

ಎಂ.ಸಿ. ದಿನೇಶ್‌

ಅಧ್ಯಕ್ಷರು, ಎಫ್‌ಕೆಸಿಸಿಐ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ