ಆ್ಯಪ್ನಗರ

Economic Survey; ಆರ್ಥಿಕ ಸಮೀಕ್ಷೆ ವರದಿ ಇಂದು ಮಂಡನೆ

ಮೋದಿ 2.0 ಸರಕಾರದ ಮೊದಲ ಆರ್ಥಿಕ ಸಮೀಕ್ಷೆಯ ಮೇಲೆ ಎಲ್ಲರ ಚಿತ್ತ ಹರಿದಿದೆ. ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಮಧ್ಯಾಹ್ನದ ವೇಳೆ ಲೋಕಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.

Multiple Agencies 4 Jul 2019, 9:00 am
ಹೊಸದಿಲ್ಲಿ: ಮೋದಿ ಸರಕಾರದ 2ನೇ ಅವಧಿಯ ಮೊದಲ ಬಜೆಟ್‌ ಜುಲೈ 5ಕ್ಕೆ ಮಂಡನೆಯಾಗಲಿದ್ದು ಗುರುವಾರ(ಜುಲೈ 4)ಕ್ಕೆ ರಾಷ್ಟ್ರದ ಆರ್ಥಿಕ ಸಮೀಕ್ಷೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

2019-20 ಹಣಕಾಸು ವರ್ಷದ ಸಮೀಕ್ಷೆ, ಆರ್ಥಿಕ ಲೆಕ್ಕಾಚಾರಗಳ ವರದಿ ಮಂಡನೆಯಾಗಲಿದೆ. ದೇಶದ ಆರ್ಥಿಕ ಆರೋಗ್ಯವನ್ನು ಸಮೀಕ್ಷೆ ಪ್ರಸ್ತುತಪಡಿಸಲಿದ್ದು, ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಸಮೀಕ್ಷೆ ವರದಿ ಮಂಡಿಸಲಿದ್ದಾರೆ.
ದೇಶದ ಬೆಳವಣಿಗೆ, ಪ್ರಮುಖ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ, ಹೊಸ ನೀತಿ ಹಾಗೂ ಆರ್ಥಿಕ ಮುನ್ನೋಟದ ಸಮಗ್ರ ವಿವರಗಳು ಸಮೀಕ್ಷಾ ವರದಿಯಲ್ಲಿರುತ್ತದೆ.


ಈ ಸಂಬಂಧ ಕೃಷ್ಣಮೂರ್ತಿ ಸುಬ್ರಮಣಿಯನ್‌ ಮೊದಲ ಬಾರಿಗೆ ಹೊಸ ಸರಕಾರದ ಮೊದಲ ಆರ್ಥಿಕ ಸಮೀಕ್ಷೆಯ ವರದಿ ಲೋಕಸಭೆಯಲ್ಲಿ ಮಂಡಿಸುತ್ತಿದ್ದು, ಅತೀವ ಸಂತಸದ ಕ್ಷಣವಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಏನಿದು ಆರ್ಥಿಕ ಸಮೀಕ್ಷೆ?
ಬಜೆಟ್‌ ಮಂಡಿಸುವ ಮುನ್ನಾ ದಿನ ದೇಶದ ಆರ್ಥಿಕ ಸಮೀಕ್ಷೆ ವರದಿ ಮಂಡಿಸುವುದು ವಾಡಿಕೆ. ಮುಂದಿನ ವರ್ಷದ ಆರ್ಥಿಕ ಬೆಳವಣಿಗೆಯ ದಿಕ್ಸೂಚಿಯಂತೆ ವರದಿ ಇರುತ್ತದೆ. ದೇಶದ ಸಮಗ್ರ ಆರ್ಥಿಕತೆ ಅಧಿಕೃತ ವರದಿ ಎಂದೂ ಹೇಳಲಾಗುತ್ತದೆ.


2015ರ ಬಳಿಕ ಆರ್ಥಿಕ ಸಮೀಕ್ಷೆ ವರದಿ 2 ವಿಭಾಗಗಳಾಗಿದ್ದು, ದೇಶದ ಆರ್ಥಿಕ ಸ್ಥಿತಿಗತಿ ಇತ್ಯಾದಿಗಳ ವರದಿಯನ್ನು ಬಜೆಟ್‌ ಹಿಂದಿನ ದಿನ ಮಂಡಿಸಲಾಗುತ್ತದೆ. ಮತ್ತೊಂದು ಭಾಗದಲ್ಲಿ ಅಂಕಿ ಅಂಶಗಳು ಹಾಗೂ ಆರ್ಥಿಕ ಲೆಕ್ಕಾಚಾರದ ವಿವರಗಳನ್ನು ನೀಡಲಾಗುತ್ತದೆ. ಇದು ಜುಲೈ ಅಥವಾ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ.

ಮೋದಿ 2.0 ಬಜೆಟ್‌ ಹೀಗಿರಬಹುದೇ?

ದೇಶದ ಆರ್ಥಿಕ ಸುಧಾರಣೆಗೆ ಅಗತ್ಯವಿರುವ ಸುಧಾರಣಾ ಕ್ರಮಗಳ ಬಗ್ಗೆ ಶಿಫಾರಸುಗಳು, ಸಲಹೆಗಳೂ ಇವುಗಳು ಒಳಗೊಂಡಿರುತ್ತವೆ. ದೇಶದ ಪ್ರಗತಿಗೆ ಪೂರಕವಾದ ಯೋಜನೆ, ಇವುಗಳ ರೂಪುರೇಷೆಗೆ ಸಮೀಕ್ಷೆ ವರದಿ ಕೀಲಿ ಕೈ ಎನ್ನಬಹುದು. ಪ್ರಸ್ತುತ ಟೆಕ್ನಾಲಜಿ, ರೈತರ ಆದಾಯ ದುಪ್ಪಟ್ಟುಗೊಳಿಸುವುದು, ಶಿಕ್ಷಣ, ಆರೋಗ್ಯ ವಲಯದಲ್ಲಿ ಮಹತ್ತರ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಹೆಜ್ಜೆ ಇಟ್ಟಿದ್ದು, ಹೊಸ ಯೋಜನೆ, ನೀತಿ ಅನುಷ್ಠಾನಕ್ಕೆ ಚಿಂತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ಸಮೀಕ್ಷೆ ಸಹಕಾರಿಯಾಗಲಿದೆ.

Modi 2.0 Budget: ಆರ್ಥಿಕ ಸುಧಾರಣೆಯತ್ತ ನಿರ್ಮಲಾ ನಡೆ?: ಜುಲೈ 5ಕ್ಕೆ ಬಜೆಟ್‌

ಯಾವೆಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಅವಕಾಶ, ಸುಧಾರಣೆಯ ಕ್ರಮಗಳು ಸೇರಿದಂತೆ ಇತ್ಯಾದಿ ಮಾಹಿತಿಯನ್ನು ಒಳಗೊಂಡಿರುತ್ತದೆ.
ಪ್ರಸ್ತುತ ದೇಶದಲ್ಲಿ ಉತ್ಪಾದನೆ ಹಾಗೂ ಕೃಷಿ ವಲಯದ ಅಭಿವೃದ್ಧಿ ಪ್ರಮುಖವಾಗಿದ್ದು, ಜನವರಿ-ಮಾರ್ಚ್‌ ಅವಧಿಯಲ್ಲಿ ಶೇ.5.8ದಷ್ಟು ಅಭಿವೃದ್ಧಿ ಕುಂಠಿತ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ