ಆ್ಯಪ್ನಗರ

ಮಹಿಳಾ ಸಬಲೀಕರಣಕ್ಕೆ ''ನಾರಿ ತು ನಾರಾಯಣಿ'' ಮಂತ್ರ ಜಪಿಸಿದ ನಿರ್ಮಲಾ ಸೀತಾರಾಮನ್‌

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು ''ನಾರಿ ತು ನಾರಾಯಣಿ'' ಮಂತ್ರ ಜಪಿಸಿದ್ದಾರೆ ನಿರ್ಮಲಾ ಸೀತಾರಾಮನ್‌.

Vijaya Karnataka Web 5 Jul 2019, 1:09 pm
ಹೊಸದಿಲ್ಲಿ: ದೇಶದ ಪ್ರಥಮ ಮಹಿಳಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮೋದಿ ಸರಕಾರ 2.0 ದ ಮೊದಲ ಬಜೆಟ್‌ನ್ನು ಮಂಡಿಸುತ್ತಿದ್ದಾರೆ. ತಮ್ಮ ಬಜೆಟ್ ಭಾಷಣದಲ್ಲಿ ಮಹಿಳಾ ಸಬಲೀಕರಣದ ಅಗತ್ಯವನ್ನು ಎತ್ತಿ ಹಿಡಿದ ಅವರು ನಾರಿ ತು ನಾರಾಯಣಿ ( ನಾರಿ ನೀನು ನಾರಾಯಣಿ) ಪೌರಾಣಿಕ ಸಾಲನ್ನು ಉಲ್ಲೇಖಿಸಿ ಗಮನ ಸೆಳೆದರು.
Vijaya Karnataka Web Nirmala Sitaraman



ದೇಶದ ಪ್ರಗತಿ ಮತ್ತು ಸಾಧನೆಯಲ್ಲಿ ಮಹಿಳೆಯರ ಕೊಡುಗೆಯನ್ನು ಉಲ್ಲೇಖಿಸಿದ ಅವರು. ನಾರಿ ನೀನು ನಾರಾಯಣಿ ಎಂಬುದು ದೇಶದ ಸಂಸ್ಕೃತಿಯಾಗಿದೆ. ಕೇಂದ್ರ ಸರಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದರಿಂದ ಸಂಸತ್ತಿನಲ್ಲಿ ಮಹಿಳಾ ಸಂಸದರ ಸಂಖ್ಯೆ 78ಕ್ಕೇರಿದೆ. ಇದೊಂದು ದಾಖಲೆಯಾಗಿದೆ ಮತ್ತು ಮಹಿಳೆಯರ ಶ್ರೇಯೋಭಿವೃದ್ಧಿಗೆ ಕೇಂದ್ರ ಸರಕಾರದ ಬದ್ಧತೆಯಾಗಿದೆ ಎಂದರು.

ಮಹಿಳೆಯ ಸ್ಥಿತಿಗತಿ ಉತ್ತಮವಾಗದೇ, ಜಗತ್ತಿನ ಕಲ್ಯಾಣ ಸಾಧ್ಯವಿಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತುಗಳನ್ನು ಸಹ ಪ್ರಸ್ತಾಪಿಸಿದ ವಿತ್ತ ಸಚಿವೆ ಹಕ್ಕಿಗೆ ಒಂದೇ ರೆಕ್ಕೆಯಿಂದ ಹಾರಲು ಸಾಧ್ಯವಿಲ್ಲ ಎನ್ನುವುದರ ಮೂಲಕ ದೇಶದ ಅಭಿವೃದ್ಧಿಯಲ್ಲಿ ಹೆಣ್ಣು- ಗಂಡು ಸಮಾನ ಭಾಗಿದಾರರಾಗಿರಬೇಕಾದ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ