ಆ್ಯಪ್ನಗರ

ಬ್ಯಾಂಕ್‌ಗಳಿಗೆ 25,000 ಕೋಟಿ ರೂ. ಬಂಡವಾಳ? ನಿರ್ಮಲಾ ಬಜೆಟ್‌ನತ್ತ ಎಲ್ಲರ ಗಮನ

ಬ್ಯಾಂಕ್‌ಗಳಲ್ಲಿ ಎನ್‌ಪಿಎ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಬ್ಯಾಂಕ್‌ಗಳ ನಿರ್ವಹಣೆಗೆ ಪೂರಕವಾಗಿ ಬಂಡವಾಳ ಮರುಪೂರಣಕ್ಕೆ ಸರಕಾರವು ಚಿಂತನೆ ನಡೆಸಿದೆ. ಆದರೆ ಬಂಡವಾಳದ ಮೊತ್ತ ಎಷ್ಟು ಎಂಬುದು ಮಾತ್ರ ಇನ್ನೂ ಅಂತಿಮಗೊಂಡಿಲ್ಲ.

Agencies 21 Jan 2021, 6:33 pm
ಹೊಸದಿಲ್ಲಿ: ಫೆ.1ರ ಕೇಂದ್ರ ಬಜೆಟ್‌ನಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 25,000 ಕೋಟಿ ರೂ. ಬಂಡವಾಳ ನೆರವು ಘೋಷಣೆಯಾಗುವ ಸಾಧ್ಯತೆ ಇದೆ.
Vijaya Karnataka Web Nirmala Sitharaman


ವಸೂಲಾಗದ ಸಾಲಗಳ ಹೊರೆ (ಎನ್‌ಪಿಎ) ಏರಿಕೆಯಾಗುತ್ತಿದ್ದು, ಬ್ಯಾಂಕ್‌ಗಳ ನಿರ್ವಹಣೆಗೆ ಪೂರಕವಾಗಿ ಬಂಡವಾಳ ಮರುಪೂರಣಕ್ಕೆ ಸರಕಾರವು ಚಿಂತನೆ ನಡೆಸಿದೆ. ಬಂಡವಾಳದ ಮೊತ್ತ ಇನ್ನೂ ಅಂತಿಮಗೊಂಡಿಲ್ಲ. ಬ್ಯಾಂಕ್‌ಗಳಿಗೆ ಅಗತ್ಯವಿರುವ ಬಂಡವಾಳದ ಮಾಹಿತಿಯನ್ನು ಹಣಕಾಸು ಸಚಿವಾಲಯವು ಈಗಾಗಲೇ ಪಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ಬಜೆಟ್‌ನಲ್ಲಿ ವೆಚ್ಚಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರವು ಕಾರ್ಯಕ್ರಮ ರೂಪಿಸಬೇಕು. ತೆರಿಗೆ ವಿನಾಯಿತಿಗಳನ್ನು ಜನರಿಗೆ ನೀಡಬೇಕು. ಎಲ್‌ಟಿಸಿ ಕ್ಯಾಶ್‌ ವೋಚರ್‌ ಯೋಜನೆಯನ್ನು ವಿಸ್ತರಿಸಬೇಕು," ಎಂದು ಇವೈ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆ ಶಾಲಿನಿ ಜೈನ್‌ ಒತ್ತಾಯಿಸಿದ್ದಾರೆ.

ಬಜೆಟ್‌ನಲ್ಲಿ ಟೆಲಿ ಮೆಡಿಸಿನ್‌ಗೆ ಆದ್ಯತೆ ನೀಡಿ: ಆರೋಗ್ಯ ಕ್ಷೇತ್ರದಿಂದ ಕೇಂದ್ರಕ್ಕೆ ಸಲಹೆ
ತೆರಿಗೆ ವಿವಾದ ಇತ್ಯರ್ಥಕ್ಕೆ ಕ್ರಮ

ನೇರ ತೆರಿಗೆಗಳ ವಿವಾದಗಳಲ್ಲಿ ಸುಮಾರು 8 ಲಕ್ಷ ಕೋಟಿ ರೂ. ಸಿಲುಕಿಕೊಂಡಿದೆ. ವಿವಾದಗಳನ್ನು ಇತ್ಯರ್ಥಗೊಳಿಸಲು ಇನ್ನಷ್ಟು ಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗಲಿವೆ ಎನ್ನಲಾಗಿದೆ.

ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆ

ಕಳೆದ 100 ವರ್ಷಗಳಲ್ಲಿ ಎಂದೂ ಕಾಣದಂಥ ಬಜೆಟ್‌ ಅನ್ನು ಈ ಸಲ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಈಗಾಗಲೇ ಘೋಷಿಸಿದ್ದು ನಿರೀಕ್ಷೆಗಳು ಹೆಚ್ಚಿವೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಬಜೆಟ್‌ ಮಹತ್ವ ಪಡೆದಿದೆ.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಕ್ರೆಡಾಯ್‌ ಮನವಿ
ತೆರಿಗೆಯಲ್ಲಿ ಬದಲಾವಣೆ ಬೇಡ

ತೆರಿಗೆಯಲ್ಲಿ ಸ್ಥಿರತೆಯನ್ನು ಬಜೆಟ್‌ನಲ್ಲಿ ಕಾಯ್ದುಕೊಳ್ಳಬೇಕಾಗಿದೆ. ತೆರಿಗೆಯಲ್ಲಿ ಯಾವುದೇ ಬದಲಾವಣೆಗಳನ್ನು ಸರಕಾರವು ಮಾಡಬಾರದು ಎಂದು ವಿತ್ತ ತಜ್ಞ ಸ್ವಾಮಿನಾಥನ್‌ ಅಯ್ಯರ್‌ ಹೇಳಿದ್ದಾರೆ. ಇಟಿ ಮಾರ್ಕೆಟ್ಸ್‌ ಜಾಗತಿಕ ಶೃಂಗದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. "ಇತಿಹಾಸದಲ್ಲಿಯೇ ಆರೋಗ್ಯದ ವಿಷಯವು ಮಹತ್ವ ಪಡೆಯುತ್ತಿರುವ ಮೊದಲ ಬಜೆಟ್‌ ಇದಾಗಬೇಕು," ಎಂದು ಅಯ್ಯರ್‌ ಹೇಳಿದ್ದಾರೆ.

ಶಿಕ್ಷಣ ಮತ್ತು ಕೌಶಲ ವೃದ್ಧಿಗೆ ಒತ್ತು

150 ಉನ್ನತ ಶಿಕ್ಷಣ ಸಂಸ್ಥೆಗಳು ಅಪ್ರೆಂಟಿಶಿಪ್‌ ಉಳ್ಳ ಕೋರ್ಸ್‌ಗಳನ್ನು ಆರಂಭಿಸಲು ಪೂರಕವಾದ ಕಾರ್ಯಕ್ರಮ ಬಜೆಟ್‌ನಲ್ಲಿ ಘೋಷಣೆಯಾಗಲಿದೆ. ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ಹೊಸ ಎಂಜಿನಿಯರ್‌ಗಳಿಗೆ ಇಂಟರ್ನ್‌ಶಿಪ್‌ ಅವಕಾಶಗಳನ್ನು ಸೃಷ್ಟಿಸಲು ಆಸಕ್ತಿ ತೋರಿಸಿವೆ. ವಿದೇಶದಲ್ಲಿ ಉದ್ಯೋಗಗಳಿಕೆಗೆ ಪೂರಕವಾದ ಕೌಶಲ ವೃದ್ಧಿಗೆ ವಿಶೇಷ ಬ್ರಿಜ್‌ ಕೋರ್ಸ್‌ಗಳನ್ನು ರೂಪಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ಸ್‌ ಉತ್ಪನ್ನ ದುಬಾರಿ

ಹೆಚ್ಚುವರಿ ಆದಾಯ ಕ್ರೊಢೀಕರಣಕ್ಕಾಗಿ ಸರಕಾರವು ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.5-10ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ.

ರಾಜ್ಯಗಳು ಬಯಸುವುದೇನು?2021-22ರಲ್ಲಿ ಜಿಡಿಪಿಯ ಶೇ.5ರ ತನಕ ಸಾಲ ಮಾಡಲು ರಾಜ್ಯಗಳಿಗೆ ಕೇಂದ್ರ ಸರಕಾರವು ಅವಕಾಶ ನೀಡಬೇಕು. ಹಣಕಾಸು ವರ್ಷ 2020-21ರಲ್ಲಿ ಕೇಂದ್ರವು ಬಾಕಿ ಉಳಿಸಿಕೊಂಡಿದ್ದ ಹಣ ಮತ್ತು ಜಿಎಸ್‌ಟಿಯನ್ನು ರಾಜ್ಯಗಳಿಗೆ ಕೊಡಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ