ಆ್ಯಪ್ನಗರ

ಷೇರುಪೇಟೆಯ ಚಿತ್ತ ಬಜೆಟ್ ಮಂಡನೆಯತ್ತ..

ಷೇರುಪೇಟೆಯ ಗತಿ ಶುಕ್ರವಾರ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಅನ್ನು ಅವಲಂಬಿಸಿದ್ದು, ಪೂರ್ಣ ಪ್ರಮಾಣದ ಬಜೆಟ್ ಮೇಲೆ ಉದ್ಯಮ ಮತ್ತು ಹೂಡಿಕೆದಾರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Vijaya Karnataka Web 5 Jul 2019, 9:56 am
ಮುಂಬಯಿ: ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದು, ದೇಶದ ಜನಸಾಮಾನ್ಯರಿಂದ ತೊಡಗಿ, ಉದ್ಯಮದವರೆಗೆ ಎಲ್ಲರೂ ಅಪಾರ ನಿರೀಕ್ಷೆ ಹೊಂದಿದ್ದಾರೆ.
Vijaya Karnataka Web Stock


ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೇರಿದ್ದು, ಚುನಾವಣೆಗೂ ಮೊದಲು ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು.

ನೂತನ ಸರಕಾರ ರಚನೆಯಾದ ಬಳಿಕ ನಿರ್ಮಲಾ ಸೀತಾರಾಮನ್ ಮೊದಲ ಬಜೆಟ್ ಮಂಡಿಸುತ್ತಿದ್ದಾರೆ. ಎನ್‌ಡಿಎ ಸರಕಾರ ಉದ್ಯಮ, ಸ್ಟಾರ್ಟಪ್ ಮತ್ತು ಹೂಡಿಕೆದಾರರ ಪರವಾಗಿದ್ದು, ಈಗಾಗಲೇ ಹಲವು ಅನುಕೂಲ ಕ್ರಮಗಳನ್ನು ಕಲ್ಪಿಸಿದೆ.

ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿಯೂ ಹಲವು ವಿತ್ತ ಸುಧಾರಣಾ ಕ್ರಮ ಕೈಗೊಂಡು, ಅದರಿಂದ ಉದ್ಯಮರಂಗ ಉತ್ತೇಜನಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆ ಹೂಡಿಕೆದಾರರಲ್ಲಿದೆ. ಹೀಗಾಗಿ ಬಜೆಟ್‌ನಲ್ಲಿ ಹೊಸ ಘೋಷಣೆ ಮತ್ತು ಹೂಡಿಕೆದಾರರ ಅನುಕೂಲಕ್ಕೆ ಕೈಗೊಳ್ಳುವ ಕ್ರಮಗಳ ಬಗ್ಗೆ ಉದ್ಯಮರಂಗ ಕಾದುಕುಳಿತಿದೆ.

ಅಲ್ಲದೆ ಷೇರುಪೇಟೆ ಈ ಮೊದಲು ಕೂಡ ಮೋದಿ ಸರಕಾರ ಎರಡನೇ ಅವಧಿಗೆ ಮತ್ತೆ ಬರಲಿದೆ ಎನ್ನುವ ಸಂದರ್ಭದಲ್ಲಿ ಭಾರೀ ಅಂಕ ಏರಿಕೆ ಕಂಡಿತ್ತು. ಜತೆಗೆ ಬಜೆಟ್ ದಿನ ಷೇರುಹೂಡಿಕೆಯ ವಾರದ ಕೊನೆಯ ದಿನವೂ ಆಗಿದ್ದು, ಅಧಿಕ ವಹಿವಾಟಿನ ನಿರೀಕ್ಷೆ ಕಂಡುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ