ಆ್ಯಪ್ನಗರ

ವಿರೋಧದ ನಡುವೆಯೂ ಬಜೆಟ್‌ ಮಂಡನೆ

ವಿತ್ತಸಚಿವ ಅರುಣ್‌ ಜೇಟ್ಲಿ 11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ 2017-18ನೇ ಸಾಲಿನ ಬಜೆಟ್‌ ಮಂಡನೆ ಆರಂಭಿಸಿದರು. ಈ ಮೂಲಕ ಸಂಸದ ಇ. ಅಹಮದ್‌ ನಿಧನರಾದ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ ಮಂಡನೆ ನಡೆಯುವುದೆ, ಇಲ್ಲವೆ ಎಂಬ ಸಂದಿಗ್ಧತೆಗೆ ತೆರೆ ಎಳೆದರು.

ಟೈಮ್ಸ್ ಆಫ್ ಇಂಡಿಯಾ 1 Feb 2017, 11:58 am
ಹೊಸದಿಲ್ಲಿ: ವಿತ್ತಸಚಿವ ಅರುಣ್‌ ಜೇಟ್ಲಿ 11 ಗಂಟೆಗೆ ಸರಿಯಾಗಿ ಲೋಕಸಭೆಯಲ್ಲಿ 2017-18ನೇ ಸಾಲಿನ ಬಜೆಟ್‌ ಮಂಡನೆ ಆರಂಭಿಸಿದರು. ಈ ಮೂಲಕ ಸಂಸದ ಇ. ಅಹಮದ್‌ ನಿಧನರಾದ ಹಿನ್ನೆಲೆಯಲ್ಲಿ ಕೇಂದ್ರ ಬಜೆಟ್‌ ಮಂಡನೆ ನಡೆಯುವುದೆ, ಇಲ್ಲವೆ ಎಂಬ ಸಂದಿಗ್ಧತೆಗೆ ತೆರೆ ಎಳೆದರು.
Vijaya Karnataka Web union budget 2017 18
ವಿರೋಧದ ನಡುವೆಯೂ ಬಜೆಟ್‌ ಮಂಡನೆ


ಆದರೆ ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್‌ ಯಾದವ್‌, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಸೇರಿದಂತೆ ಕೆಲವು ಹಿರಿಯ ಮುಖಂಡರು ಬಜೆಟ್‌ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂಸದೀಯ ವ್ಯವಹಾರ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಬಜೆಟ್‌ ಮಂಡನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದೆ ಇದೇ ರೀತಿ ಇಬ್ಬರು ಸಂಸದರು ನಿಧನರಾದ ಸಂದರ್ಭದಲ್ಲಿ ಬಜೆಟ್‌ ಮಂಡನೆಯನ್ನು ಮುಂದೂಡದೆ ಪೂರ್ವ ನಿಗದಿಯಂತೆ ಮಂಡಿಸಿದ ನಿದರ್ಶನಗಳಿವೆ ಎಂದು ಅವರು ಹೇಳಿದ್ದಾರೆ.

ಬಜೆಟ್ ಮಂಡನೆ ಒಂದು ಸಾಂವಿಧಾನಿಕ ಬದ್ಧತೆಯಾಗಿದ್ದು ಅದರ ಬಗ್ಗೆ ವಿವಾದ ಸೃಷ್ಟಿಸಬೇಡಿ ಎಂದು ನಾಯ್ಡು ಪ್ರತಿಪಕ್ಷ ಮುಖಂಡರಿಗೆ ಮನವಿ ಮಾಡಿದ್ದಾರೆ.


'ಬಜೆಟ್‌ ಮಂಡನೆ ಒಂದು ಸಾಂವಿಧಾನಿಕ ಬದ್ಧತೆ ಎಂಬುದನ್ನು ಗಮನದಲ್ಲಿರಿಸಿಕೊಂಡು ನಾವು ಬಜೆಟ್‌ ಮಂಡಿಸುತ್ತೇವೆ'
- ಸುಮಿತ್ರಾ ಮಹಾಜನ್, ಲೋಕಸಭಾ ಸ್ಪೀಕರ್.


'ಇ. ಅಹಮದ್‌ ಅವರ ನಿಧನಕ್ಕೆ ಸಂತಾಪ ಸೂಚಿಸುವೆ. ಈ ಸಂದರ್ಭದಲ್ಲಿ 2017ರ ಬಜೆಟ್‌ ಮಂಡಿಸಬಾರದು'
- ಲಾಲೂ ಪ್ರಸಾದ್ ಯಾದವ್, ಆರ್‌ಜೆಡಿ ವರಿಷ್ಠ


'ಬಜೆಟ್‌ ಮುಂದೂಡುವುದು ಕಷ್ಟವೇ ಅಲ್ಲ, ಗೌಪ್ಯತೆಗೆ ಅಪಾಯ ಎಂಬುದೂ ಸರಿಯಲ್ಲ'.
-ಎಚ್‌.ಡಿ ದೇವೇಗೌಡ, ಮಾಜಿ ಪ್ರಧಾನಿ



'ನಮ್ಮ ಅಭಿಪ್ರಾಯ ಒಪ್ಪುವುದಾದರೆ, ಬಜೆಟ್‌ ಮಂಡನೆ ಮುಂದೂಡಬೇಕು. ನಾನು ನಿಧನರಾದ ಕೇರಳ ಸಂಸದ ಇ. ಅಹಮದ್‌ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವೆ'.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್‌ ನಾಯಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ