ಆ್ಯಪ್ನಗರ

ದಲಿತ ಟೆಕ್ಕಿಗಳ 1,000 ಸ್ಟಾರ್ಟಪ್‌ಗೆ ಸರಕಾರದ ಸಾಥ್‌

ದೇಶದ ದಲಿತ ಟೆಕ್ಕಿಗಳ ಸ್ಟಾರ್ಟಪ್‌ ಐಡಿಯಾಗಳನ್ನು ಗುರುತಿಸಿ ಉತ್ತೇಜಿಸಿ, ಅವರಿಗೆ ತಾಂತ್ರಿಕ ಸೌಲಭ್ಯಗಳನ್ನು ನೀಡುವುದು ಕೇಂದ್ರ ಸರಕಾರದ ಉದ್ದೇಶವಾಗಿದ್ದು, ಇದಕ್ಕಾಗಿ 308 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರಕಾರವು ಖರ್ಚು ಮಾಡಲಿದೆ.

Agencies 27 Sep 2020, 7:58 pm
ಹೊಸದಿಲ್ಲಿ: ದೇಶದ ದಲಿತ ಟೆಕ್ಕಿಗಳಿಂದ 1,000 ಸ್ಟಾರ್ಟಪ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಸೃಷ್ಟಿಸಲು ಕೇಂದ್ರ ಸರಕಾರ ತೀರ್ಮಾನಿಸಿದ್ದು, ಈ ಸಂಬಂಧ ವಿಸ್ತೃತ ಯೋಜನೆ ಆರಂಭಿಸಲು ಸಜ್ಜಾಗಿದೆ.
Vijaya Karnataka Web Startup


ತಾಂತ್ರಿಕ ಕಾಲೇಜುಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಉದ್ಯೋಗದಲ್ಲಿರುವ ದಲಿತ ಟೆಕ್ಕಿಗಳ ಸ್ಟಾರ್ಟಪ್‌ ಐಡಿಯಾಗಳನ್ನು ಗುರುತಿಸಿ ಉತ್ತೇಜಿಸಿ, ಅವರಿಗೆ ತಾಂತ್ರಿಕ ಸೌಲಭ್ಯಗಳನ್ನು ನೀಡುವುದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಉದ್ದೇಶ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಈ ಯೋಜನೆಯು ವಾಣಿಜ್ಯಾತ್ಮಕವಾಗಿ ಸ್ಟಾರ್ಟಪ್‌ಗಳನ್ನು ಆರಂಭಿಸಲು ದಲಿತ ಟೆಕ್ಕಿಗಳಿಗೆ ಅಗತ್ಯವಿರುವ ನೆರವು ಒದಗಿಸಲಿದೆ.

ಸ್ಟಾರ್ಟಪ್‌ ರ‍್ಯಾಂಕಿಂಗ್‌ನಲ್ಲಿ ರಾಜ್ಯದ ಅಮೋಘ ಸಾಧನೆ, ಗುಜರಾತ್‌ ನಂತರದ ಸ್ಥಾನದಲ್ಲಿ ಕರ್ನಾಟಕ
ಅಂಬೇಡ್ಕರ್‌ ಸೋಷಿಯಲ್‌ ಇನೋವೇಷನ್‌ ಇನ್‌ಕ್ಯೂಬೇಷನ್‌ ಮಿಷನ್ ‌(ಎಎಸ್‌ಐಐಎಂ) ಹೆಸರಿನ ಯೋಜನೆಯ ಮೂಲಕ ದಲಿತ ಟೆಕ್ಕಿಗಳ ಪ್ರೋತ್ಸಾಹಿಸಲಾಗುತ್ತದೆ. 2020-24ರ ನಡುವೆ ಈ ಯೋಜನೆ ಜಾರಿಯಾಗಲಿದ್ದು, ಇದಕ್ಕಾಗಿ 308 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರಕಾರವು ಖರ್ಚು ಮಾಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ