ಮುಂಬಯಿ: ಐಟಿ ವಂಚಕರ ವಿರುದ್ಧ ಕಾನೂನು ಕ್ರಮ ಹಾಕುವ ಸಂಬಂಧ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕೆಲವು ಮಾನದಂಡಗಳನ್ನು ಸಡಿಲಗೊಳಿಸಿದೆ. ಟಿಡಿಎಸ್ ಸಲ್ಲಿಕೆಯಲ್ಲಿ ವಿಳಂಬಕ್ಕಾಗಿ (ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಲಾಗಿದೆ), ತೆರಿಗೆ ರಿಟರ್ನ್ನಲ್ಲಿ ಆದಾಯವನ್ನು ಕಡಿಮೆ ವರದಿ ಮಾಡುವುದು ಅಥವಾ ಐ-ಟಿ ರಿಟರ್ನ್ ಸಲ್ಲಿಸದಿರುವಿಕೆಗಾಗಿ ಆದಾಯ ತೆರಿಗೆ ಕಟ್ಟದೆ ಕರ್ತವ್ಯ ಮರೆತವರ ವಿರುದ್ಧ ಕಾನೂನು ಕ್ರಮ ಜರುಗಿಸುವ ವಿಚಾರದಲ್ಲಿ ಮಾನದಂಡಗಳನ್ನು ಸಡಿಲಿಸಿದೆ.
ಈ ಸಂಬಂಧ ಸೆಪ್ಟೆಂಬರ್ 9 ರಂದು ಸುತ್ತೋಲೆ ಹೊರಡಿಸಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ ಟಿಡಿಎಸ್ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಮಿತಿ ಮತ್ತು ಸಮಯದ ಅವಧಿಯನ್ನು ನಿಗದಿಪಡಿಸಿದೆ. 25 ಲಕ್ಷಕ್ಕೂ ಕಡಿಮೆ ಮೌಲ್ಯದ ಟಿಡಿಎಸ್ ಸಲ್ಲಿಸದಿದ್ದರೆ ಹಾಗೂ ಸಲ್ಲಿಕೆಯಲ್ಲಿ ನಿಗದಿತ ದಿನಾಂಕದಿಂದ 60 ದಿನಗಳಿಗಿಂತ ಕಡಿಮೆ ಇದ್ದರೆ ಸಾಮಾನ್ಯ ಸನ್ನಿವೇಶಗಳಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಮಾಹಿತಿ ನೀಡಿದೆ.
ಆದರೆ, ಪದೇ ಪದೇ ತೆರಿಗೆ ವಂಚನೆ ಮಾಡುವವರ ವಿರುದ್ಧ ಹಾಗೂ ಟಿಡಿಎಸ್ ಕಟ್ಟದವರ ವಿರುದ್ಧ ಕಾನೂನು ಕ್ರಮ ಮುಂದುವರಿಯಲಿದ್ದು, ಇಂತಹ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಬ್ಬರು ಹಿರಿಯ ಶ್ರೇಣಿಯ ಅಧಿಕಾರಿಗಳನ್ನೊಳಗೊಂಡ ಕೊಲಿಜಿಯಂನ ಅನುಮತಿ ಪಡೆಯುವ ಅಗತ್ಯವಿದೆ.
ಈ ಸಂಬಂಧ ಕಳೆದ ತಿಂಗಳು ಟ್ವೀಟ್ ಮಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಿರುಕುಳವಾಗದಂತೆ ಮತ್ತು ಸಣ್ಣ ಅಥವಾ ಕಾರ್ಯವಿಧಾನದ ಉಲ್ಲಂಘನೆ ಮಾಡುವವರ ವಿರುದ್ಧ ಅತಿಯಾದ ಕ್ರಮಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಕ್ರಮಗಳನ್ನು ತರಲು ನಾನು ಕಂದಾಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದಿದ್ದರು.
8.56 ಲಕ್ಷ ಟಿಡಿಎಸ್ ಸಲ್ಲಿಕೆ ವಿಳಂಬ ಮಾಡಿದ್ದಕ್ಕೆ ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ವಿರುದ್ಧ ಮುಂಬಯಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 3 ತಿಂಗಳು ಕಠಿಣ ಶಿಕ್ಷೆ ನೀಡಿದ್ದು, ಮೇ ತಿಂಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಸೆಕ್ಷನ್ 276B ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು.
ಈ ಸಂಬಂಧ ಸೆಪ್ಟೆಂಬರ್ 9 ರಂದು ಸುತ್ತೋಲೆ ಹೊರಡಿಸಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ ಟಿಡಿಎಸ್ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ಮಿತಿ ಮತ್ತು ಸಮಯದ ಅವಧಿಯನ್ನು ನಿಗದಿಪಡಿಸಿದೆ. 25 ಲಕ್ಷಕ್ಕೂ ಕಡಿಮೆ ಮೌಲ್ಯದ ಟಿಡಿಎಸ್ ಸಲ್ಲಿಸದಿದ್ದರೆ ಹಾಗೂ ಸಲ್ಲಿಕೆಯಲ್ಲಿ ನಿಗದಿತ ದಿನಾಂಕದಿಂದ 60 ದಿನಗಳಿಗಿಂತ ಕಡಿಮೆ ಇದ್ದರೆ ಸಾಮಾನ್ಯ ಸನ್ನಿವೇಶಗಳಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಿಲ್ಲ ಎಂದು ಮಾಹಿತಿ ನೀಡಿದೆ.
ಆದರೆ, ಪದೇ ಪದೇ ತೆರಿಗೆ ವಂಚನೆ ಮಾಡುವವರ ವಿರುದ್ಧ ಹಾಗೂ ಟಿಡಿಎಸ್ ಕಟ್ಟದವರ ವಿರುದ್ಧ ಕಾನೂನು ಕ್ರಮ ಮುಂದುವರಿಯಲಿದ್ದು, ಇಂತಹ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಬ್ಬರು ಹಿರಿಯ ಶ್ರೇಣಿಯ ಅಧಿಕಾರಿಗಳನ್ನೊಳಗೊಂಡ ಕೊಲಿಜಿಯಂನ ಅನುಮತಿ ಪಡೆಯುವ ಅಗತ್ಯವಿದೆ.
ಈ ಸಂಬಂಧ ಕಳೆದ ತಿಂಗಳು ಟ್ವೀಟ್ ಮಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಕಿರುಕುಳವಾಗದಂತೆ ಮತ್ತು ಸಣ್ಣ ಅಥವಾ ಕಾರ್ಯವಿಧಾನದ ಉಲ್ಲಂಘನೆ ಮಾಡುವವರ ವಿರುದ್ಧ ಅತಿಯಾದ ಕ್ರಮಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಕ್ರಮಗಳನ್ನು ತರಲು ನಾನು ಕಂದಾಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದಿದ್ದರು.
8.56 ಲಕ್ಷ ಟಿಡಿಎಸ್ ಸಲ್ಲಿಕೆ ವಿಳಂಬ ಮಾಡಿದ್ದಕ್ಕೆ ಬಾಲಿವುಡ್ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ವಿರುದ್ಧ ಮುಂಬಯಿಯ ಮ್ಯಾಜಿಸ್ಟ್ರೇಟ್ ಕೋರ್ಟ್ 3 ತಿಂಗಳು ಕಠಿಣ ಶಿಕ್ಷೆ ನೀಡಿದ್ದು, ಮೇ ತಿಂಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಸೆಕ್ಷನ್ 276B ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿತ್ತು.