ಆ್ಯಪ್ನಗರ

ನೋಟು ನಿಷೇಧದ ಉದ್ದೇಶ ಈಡೇರಿದೆ: ಅರುಣ್ ಜೇಟ್ಲಿ

ನೋಟು ಅಮಾನ್ಯೀಕರಣದ ಟೀಕಾಕಾರರಿಗೆ ವಿತ್ತಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದು, ನೋಟು ನಿಷೇಧದ ಉದ್ದೇಶ ಈಡೇರಿದೆ ಎಂದಿದ್ದಾರೆ.

Vijaya Karnataka Web 30 Aug 2018, 6:44 pm
[This story originally published in Times of India on Aug 30, 2018]
Vijaya Karnataka Web Arun Jaitley


ಹೊಸದಿಲ್ಲಿ:
ನೋಟು ಅಮಾನ್ಯೀಕರಣದ ಟೀಕಾಕಾರರಿಗೆ ವಿತ್ತಸಚಿವ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದು, ನೋಟು ನಿಷೇಧದ ಉದ್ದೇಶ ಈಡೇರಿದೆ ಎಂದಿದ್ದಾರೆ.

2016ರ ನವೆಂಬರ್‌ನಲ್ಲಿ ಸರಕಾರ 500 ರೂ ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಆದರೆ ನಿಷೇಧಿಸಿದ ನೋಟುಗಳ ಪೈಕಿ ಶೇ 99.3ರಷ್ಟು (15.3 ಲಕ್ಷ ಕೋಟಿ ರೂ) ಮರಳಿ ಬ್ಯಾಂಕುಗಳಿಗೆ ಬಂದಿವೆ ಎಂದು 2017-18ರ ಸಾಲಿನ ಆರ್‌ಬಿಐ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನೋಟು ನಿಷೇಧದದ ವಿರುದ್ಧ ಮತ್ತೆ ಟೀಕೆಗಳು ಕೇಳಿಬಂದಿದ್ದವು.

ತಮ್ಮ ಬ್ಲಾಗ್‌ ಪೋಸ್ಟ್‌ನಲ್ಲಿ ಜೇಟ್ಲಿ, ಈ ಟೀಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. 'ಠೇವಣಿಯಾಗದ ಕರೆನ್ಸಿ ನೋಟುಗಳನ್ನು ಅಪಮೌಲ್ಯಗೊಳಿಸುವುದಷ್ಟೇ ಅದರ ಉದ್ದೇಶವಾಗಿತ್ತೇನು? ಖಂಡಿತ ಅಲ್ಲ' ಎಂದು ಜೇಟ್ಲಿ ಬರೆದಿದ್ದಾರೆ.

'ಭಾರತವನ್ನು ತೆರಿಗೆ ಬಾಧ್ಯತೆಯುಳ್ಳ ಸಮಾಜವಾಗಿ ಮುನ್ನಡೆಸುವುದು, ಅರ್ಥವ್ಯವಸ್ಥೆಯಲ್ಲಿ ಔಪಚಾರಿಕತೆಯನ್ನು ತುಂಬುವುದು ಮತ್ತು ಕಾಳಧನಕ್ಕೆ ಆಘಾತ ನೀಡುವುದು ಅದರ ಪ್ರಮುಖ ಉದ್ದೇಶವಾಗಿತ್ತು' ಎಂದು ಜೇಟ್ಲಿ ಹೇಳಿದ್ದಾರೆ.

ಇದನ್ನೂ ಓದಿ: RBI: ನೋಟು ಅಮಾನ್ಯೀಕರಣ, 10 ಸಾವಿರ ಕೋಟಿ ರೂ. ವಾಪಾಸಾಗಿಲ್ಲ

ನೋಟು ಅಮಾನ್ಯೀಕರಣದ ಬಳಿಕ 18 ಲಕ್ಷ ಮಂದಿಯ ಠೇವಣಿಗೂ ಆದಾಯಕ್ಕೂ ಸಂಬಂಧವಿಲ್ಲದಿರುವುದು ಪತ್ತೆಯಾಗಿದೆ. ಅವರನ್ನು ತನಿಖೆಗೆ ಒಳಪಡಿಸಲು ಗುರುತಿಸಲಾಗಿದೆ. ಅದೇ ವೇಳೆಗೆ, ಕಳೆದ ಎರಡು ವರ್ಷಗಳಲ್ಲಿ ಆದಾಯ ತೆರಿಗೆ ಸಲ್ಲಿಕೆ ಕ್ರಮವಾಗಿ ಶೇ 19 ಮತ್ತು ಶೇ 25ರಷ್ಟು ವೃದ್ಧಿಯಾಗಿದೆ ಎಂದು ಹಣಕಾಸು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ನೋಟು ಅಮಾನ್ಯೀಕರಣದ ಬಳಿಕ ತೆರಿಗೆ ಸಂಗ್ರಹ ಅಧಿಕವಾಗಿದೆ. 2013-14ರಲ್ಲಿ 6.38 ಲಕ್ಷ ಕೋಟಿ ಇದ್ದ ತೆರಿಗೆ ಸಂಗ್ರಹಣೆ 2017-18ರಲ್ಲಿ 10.02 ಲಕ್ಷ ಕೋಟಿಗೇರಿದೆ ಎಂದು ಜೇಟ್ಲಿ ವಿವರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ