ಆ್ಯಪ್ನಗರ

ಐಟಿಆರ್‌ ಸಲ್ಲಿಕೆ: ಯಾರಿಗೆ ಯಾವ ದಿನ ಗಡುವು ?

ವೇತನದಾರರು ಹಾಗೂ ಇತರ ಮೂಲಗಳ ಆದಾಯವಿರುವವರಿಗೆ 2018-19ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಜುಲೈ 31ರಿಂದ ಆಗಸ್ಟ್‌ 31ಕ್ಕೆ ಹಣಕಾಸು ಇಲಾಖೆ ವಿಸ್ತರಿಸಿದೆ. ಹೀಗಿದ್ದರೂ, ನಿರ್ದಿಷ್ಟ ವರ್ಗದ ತೆರಿಗೆದಾರರಿಗೆ ಗಡುವು ಭಿನ್ನವಾಗಿದೆ. ಈ ಕುರಿತ ವಿವರ ಇಲ್ಲಿದೆ.

Vijaya Karnataka 28 Jul 2018, 9:46 am
ಬೆಂಗಳೂರು: ವೇತನದಾರರು ಹಾಗೂ ಇತರ ಮೂಲಗಳ ಆದಾಯವಿರುವವರಿಗೆ 2018-19ರ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಜುಲೈ 31ರಿಂದ ಆಗಸ್ಟ್‌ 31ಕ್ಕೆ ಹಣಕಾಸು ಇಲಾಖೆ ವಿಸ್ತರಿಸಿದೆ. ಹೀಗಿದ್ದರೂ, ನಿರ್ದಿಷ್ಟ ವರ್ಗದ ತೆರಿಗೆದಾರರಿಗೆ ಗಡುವು ಭಿನ್ನವಾಗಿದೆ. ಈ ಕುರಿತ ವಿವರ ಇಲ್ಲಿದೆ.
Vijaya Karnataka Web income tax


ಆಗಸ್ಟ್‌ 31ಕ್ಕೆ ಯಾರಿಗೆ ಗಡುವು?

ಬಹುತೇಕ ಎಲ್ಲ ವೇತನದಾರರಿಗೆ 2018ರ ಆಗಸ್ಟ್‌ 31ಕ್ಕೆ ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹೀಗಿದ್ದರೂ, 2 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಇರುವವರಿಗೆ ಇದು ಅನ್ವಯವಾಗುತ್ತದೆ. ಇತರ ಮೂಲಗಳಿಂದ ಆದಾಯ 2 ಕೋಟಿ ರೂ.ಗಿಂತ ಕೆಳಗಿರುವವರಿಗೆ ಆಗಸ್ಟ್‌ 31ಕ್ಕೆ ರಿಟರ್ನ್ಸ್‌ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ.

ಸೆಪ್ಟೆಂಬರ್‌ 30ಕ್ಕೆ ಯಾರಿಗೆ ಗಡುವು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ ಎಬಿ ವ್ಯಾಪ್ತಿಗೆ ಒಳಪಡುವ, ವಾರ್ಷಿಕ 2 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ಕಂಪನಿಗಳು, ಸಂಸ್ಥೆಗಳು, ಉದ್ದಿಮೆದಾರರಿಗೆ, ವಾರ್ಷಿಕ 50 ಲಕ್ಷ ರೂ.ಗೂ ಅಧಿಕ ವ್ಯವಹಾರ ಅಥವಾ ವರಮಾನ ಹೊಂದಿರುವ ಚಾರ್ಟರ್ಡ್‌ ಅಕೌಂಟೆಂಟ್‌, ವಕೀಲರು, ವೈದ್ಯರು, ಆರ್ಕಿಟೆಕ್ಟ್ ಮುಂತಾದ ವೃತ್ತಿಪರರಿಗೆ, ಸೆಪ್ಟೆಂಬರ್‌ 30ಕ್ಕೆ ರಿಟರ್ನ್ಸ್‌ ಸಲ್ಲಿಸಲು ಕೊನೆಯ ದಿನವಾಗಿದೆ. ಒಂದು ವೇಳೆ 50 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ಹೊಂದಿದ್ದರೆ, ಅಂಥವರಿಗೆ ಎಲ್ಲರಂತೆ ಆಗಸ್ಟ್‌ 31ಕ್ಕೆ ಕೊನೆಯ ದಿನವಾಗಿದೆ.

ವಿಳಂಬ ಮಾಡದಿರಿ:

ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನವನ್ನು ಆಗಸ್ಟ್‌ 31ಕ್ಕೆ ಮುಂದೂಡಲಾಗಿದ್ದರೂ, ಕೊನೆಯ ದಿನಗಳ ತನಕ ಕಾಯುವುದು ಬೇಡ. ಸಾಧ್ಯವಾದಷ್ಟು ಮುಂಚಿತವಾಗಿಯೇ ನೀಡುವುದು ಸೂಕ್ತ. ಇದರಿಂದ ಯಾವುದೇ ಸಮಸ್ಯೆ ಇಲ್ಲದೆ ರಿಟರ್ನ್ಸ್‌ ಸಲ್ಲಿಸಬಹುದು. ಕೊನೆಯ ಕ್ಷಣಗಳ ಅಡಚಣೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ ಎನ್ನುತ್ತಾರೆ ಚಾರ್ಟರ್ಡ್‌ ಅಕೌಂಟೆಂಟ್‌ ದಿವಾಕರ್‌ ಭಟ್‌.

ಆದಾಯ ತೆರಿಗೆ ಇಲಾಖೆಯು ಕೊನೆಯ ದಿನಾಂಕ ತಪ್ಪಿದರೆ ತೆರಿಗೆದಾರರಿಗೆ ದಂಡ ವಿಧಿಸುವುದಾಗಿಯೂ ಈ ಹಿಂದೆ ತಿಳಿಸಿತ್ತು. ಆದರೆ ಇದು ನ್ಯಾಯಸಮ್ಮತ ರೀತಿಯಲ್ಲಿ ಇರಬೇಕು. ಅದಕ್ಕೂ ದಂಡ ವಿಧಿಸುವ ಮುನ್ನ ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೆಲ ಸಂಘಟನೆಗಳು ಮನವಿ ಸಲ್ಲಿಸಿದ್ದವು. ನ್ಯಾಯಾಲಯದಲ್ಲೂ ಪ್ರಶ್ನಿಸಲಾಗಿತ್ತು. ಇವೆಲ್ಲದರ ಪರಿಣಾಮ ಕೇಂದ್ರ ಸರಕಾರ, ರಿಟರ್ನ್ಸ್‌ ಸಲ್ಲಿಕೆಯ ಕೊನೆಯ ದಿನವನ್ನು ಮುಂದೂಡಿದೆ ಎನ್ನುತ್ತಾರೆ ತೆರಿಗೆ ತಜ್ಞರಾದ ಟಿ.ಬಿ.ರಾಜಶೇಖರ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ