ಆ್ಯಪ್ನಗರ

ಆಸ್ತಿ ತೆರಿಗೆ ವಂಚಕರ ಮೇಲೆ ನಿಗಾ ಇಡಲು ಬಿಬಿಎಂಪಿ ಕಂದಾಯ ಜಾಗೃತ ದಳ

ಆಸ್ತಿ ತೆರಿಗೆ ವಂಚಕರ ಮೇಲೆ ನಿಗಾ ಇಡಲು ಬಿಬಿಎಂಪಿ ಕಂದಾಯ ಜಾಗೃತ ದಳವನ್ನು ರಚಿಸಿದೆ 2019-20ರ ಸಾಲಿನಲ್ಲಿ 3,500 ಕೋಟಿ ರೂ.

Vijaya Karnataka 16 Mar 2019, 11:10 pm
ಆಸ್ತಿ ತೆರಿಗೆ ವಂಚಕರ ಮೇಲೆ ನಿಗಾ ಇಡಲು ಬಿಬಿಎಂಪಿ ಕಂದಾಯ ಜಾಗೃತ ದಳವನ್ನು ರಚಿಸಿದೆ. 2019-20ರ ಸಾಲಿನಲ್ಲಿ 3,500 ಕೋಟಿ ರೂ. ಆದಾಯವನ್ನು ಬಿಬಿಎಂಪಿ ನಿರೀಕ್ಷಿಸಿದ್ದು, ತೆರಿಗೆ ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ. ಬಿಬಿಎಂಪಿ ವಿಶೇಷ ಆಯುಕ್ತ ಎಂ. ಲೋಕೇಶ್‌ ಇದರ ಮುಖ್ಯಸ್ಥರಾಗಿದ್ದು, ಇವರಿಗೆ ಕಂದಾಯ ಇಲಾಖೆಯ ಉಪಾಯುಕ್ತರು, ವಲಯ ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ನೆರವು ನೀಡಲಿದ್ದಾರೆ.
Vijaya Karnataka Web tax


ಪ್ರಾಪರ್ಟಿ ತೆರಿಗೆ ಪಾವತಿ ಸಂದರ್ಭದಲ್ಲಿ ಸುಳ್ಳು ಪ್ರಮಾಣಪತ್ರ ನೀಡುವುದರ ಪರೀಕ್ಷೆಯ ಜತೆಗೆ ಖಾತಾ ಅವ್ಯವಹಾರದ ಪರಿಶೀಲನೆಯನ್ನು ಕೂಡ ಇದು ನಡೆಸಲಿದೆ. ನಾಗರಿಕರು ನೇರವಾಗಿ ಬಂದು ದಳಕ್ಕೆ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ. ಇವುಗಳನ್ನು ಸಮಿತಿಯು ಪರಿಶೀಲನೆ ನಡೆಸಲಿದೆ. ಇಷ್ಟೇ ಅಲ್ಲ ಅನುಮಾನ ಬಂದ ಕಡೆ ನೇರವಾಗಿ ಭೇಟಿ ನೀಡಿ ವಿವರಗಳ ಪರಿಶೀಲನೆಯನ್ನು ಕೂಡ ಮಾಡಲಾಗುವುದು ಎಂದು ಲೋಕೇಶ್‌ ತಿಳಿಸಿದರು.

ಶಿಕ್ಷಣ ಸಂಸ್ಥೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಆದರೆ ಅನುದಾನರಹಿತ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ತೆರಿಗೆ ವ್ಯಾಪ್ತಿಗೆ ತರುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು. ಖಾತಾ ನೋಂದಣಿ ಮತ್ತು ದಾಖಲೆಗಳ ಆಡಿಟ್‌ ಕೂಡ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ